ಭಟ್ಕಳ : ಪಿ.ಯು.ಸಿ. ಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೋರ್ವಳು ಮನೆಯ ತೋಟದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಉತ್ತರಕೊಪ್ಪದ ಶೇಡಗೇರಿ ಗೋಳಿಕುಂಬ್ರಿಯಲ್ಲಿ ನಡೆದಿದೆ.
ಕುಮಾರಿ ದೀಪಿಕಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆಯ ಮುಡೇಶ್ವರದ ಕಾಲೇಜೊಂದರಲ್ಲಿ ದ್ವೀತಿಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎನ್ನಾಲಾಗಿದೆ. ಮನಸ್ಸಿಗೆ ಯಾವುದೋ ಒಂದು ವಿಷಯವನ್ನು ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಗಿದ್ದಾಳೆ ಎನ್ನಲಾಗಿದ್ದು ಈ ಕುರಿತು ಮುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.
Leave a Comment