ಯಲ್ಲಾಪುರ : ಜೆ.ಡಿ.ಎಸ ಪಕ್ಷ ಈಗಿನಿಂದಲೇ ಚುನಾವಣೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವದಾಗಿ . ೨೦೨೩ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಲು ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಸಿರು ನಿಶಾನೆ ತೋರಿದ್ದಾಗಿ ಉದ್ಯಮಿ ಸಂತೋಷ ರಾಯ್ಕರ ತಿಳಿಸಿದ್ದಾರೆ.
೨೦೧೮ರ ಚುನಾವಣೆಯಲ್ಲಿ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದಿಂದ ಜೆ.ಡಿ ಎಸ್ನಿಂದ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಈಗ ಮತ್ತೆ ಮಾತೃಪಕ್ಷಕ್ಕೆ ಮರಳುವಂತೆ ರಾಜ್ಯ ಜೆಡಿಎಸ್ ನಾಯಕರು ಸಂತೋಷ ರಾಯ್ಕರ ಅವರನ್ನು ಸಂಪರ್ಕಿಸಿ ಆಹ್ವಾನಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಅಭ್ಯರ್ಥಿಯಾಗುವಂತೆ ಮನವೊಲಿಸಿದ್ದಾರೆ . ಬೆಳಗಾವಿ ಭೇಟಿ ನೀಡಿದ್ದ ಜೆಡಿಎಸ್ ವರಿಷ್ಠ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಸಂತೋಷ ರಾಯ್ಕರ್ ಪ್ರಸ್ತುತ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣವನ್ನು ವಿವರಿಸಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆ ಮತ್ತು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದ ಮತದಾರರಿಗೆ ಸಮಗ್ರವಾಗಿ ತಲುಪಿಸುವಲ್ಲಿ ಜೆಡಿಎಸ್ ಗೆಲುವಿಗೆ ಉತ್ತಮ ವಾತಾವರಣವಿದ್ದು ಪಕ್ಷ ಸಂಘಟನೆಗೆ ಕಟಿಬದ್ಧನಾಗಿದ್ದರಿಂದ ಹಾಗೂ ೨೦೧೯ರಲ್ಲಿ ಆಪರೇಷನ್ ಕಮಲದಲ್ಲಿ ಶಿವರಾಮ ಹೆಬ್ಬಾರ ಜತೆ ಕಾಂಗ್ರೆಸ್ ನಲ್ಲಿದ್ದ ಹಲವರು ಪಕ್ಷಕ್ಕೆ ಬಂದಿದ್ದರಿAದ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಹೆಚ್ಚಿತ್ತು. ಅದು ಇನ್ನೂ ಶಮನವಾಗಿಲ್ಲ. ಸಚಿವರು ತಮ್ಮನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬ ಆರೋಪ ಮೂಲ ಬಿಜೆಪಿಗರದ್ದು.ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯ ಭಿನ್ನಮತ ಮತ್ತೆ ಸ್ಫೋಟಗೊಂಡು ಪಕ್ಷಾಂತರ ಪರ್ವ ಪ್ರಾರಂಭವಾಗಲಿದೆ. ಮೂಲ ಬಿಜೆಪಿಗರು ನಾನು ಜೆಡಿಎಸ್ ಅಭ್ಯರ್ಥಿಯಾದರೆ ಬೆಂಬಲಿಸಿ ನನ್ನೊಂದಿಗೆ ಬರಲಿದ್ದಾರೆ.
.ಈಗಾಗಲೇ
ಚದುರಿದ್ದ ಜೆಡಿಎಸ್ ಮುಖಂಡರು ಕಾರ್ಯಕರ್ತರು ಒಂದಾಗಿ ನನ್ನ ಜೊತೆ ಇದ್ದಾರೆ .ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಿರ್ದೇಶನ ನೀಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಅತಿಶೀಘ್ರದಲ್ಲೇ ಕ್ಷೇತ್ರದಾದ್ಯಂತ ಸಂಚರಿಸಿ ಪಕ್ಷ ಸಂಘಟನೆಗೆ ತೊಡಗಿಕೊಳ್ಳುವುದಾಗಿ ತಿಳಿಸಿದರು.
ಬೆಳಗಾವಿ ಭೇಟಿ ನೀಡಿದ್ದ ಜೆಡಿಎಸ್ ವರಿಷ್ಠ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಸಂತೋಷ ರಾಯ್ಕರ್ ಪ್ರಸ್ತುತ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ರಾಜಕೀಯ ಚಿತ್ರಣವನ್ನು ವಿವರಿಸಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆ ಮತ್ತು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದ ಮತದಾರರಿಗೆ ಸಮಗ್ರವಾಗಿ ತಲುಪಿಸುವಲ್ಲಿ ಜೆಡಿಎಸ್ ಗೆಲುವಿಗೆ ಉತ್ತಮ ವಾತಾವರಣವಿದ್ದು ಪಕ್ಷ ಸಂಘಟನೆಗೆ ಕಟಿಬದ್ಧನಾಗಿದ್ದೇನೆ.
೨೦೧೯ರಲ್ಲಿ ಆಪರೇಷನ್ ಕಮಲದಲ್ಲಿ ಶಿವರಾಮ ಹೆಬ್ಬಾರ ಜತೆ ಕಾಂಗ್ರೆಸ್ ನಲ್ಲಿದ್ದ ಹಲವರು ಪಕ್ಷಕ್ಕೆ ಬಂದಿದ್ದರಿAದ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಹೆಚ್ಚಿತ್ತು. ಅದು ಇನ್ನೂ ಶಮನವಾಗಿಲ್ಲ. ಸಚಿವರು ತಮ್ಮನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬ ಆರೋಪ ಮೂಲ ಬಿಜೆಪಿಗರದ್ದು.ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯ ಭಿನ್ನಮತ ಮತ್ತೆ ಸ್ಫೋಟಗೊಂಡು ಪಕ್ಷಾಂತರ ಪರ್ವ ಪ್ರಾರಂಭವಾಗಲಿದೆ. ಮೂಲ ಬಿಜೆಪಿಗರು ನಾನು ಜೆಡಿಎಸ್ ಅಭ್ಯರ್ಥಿಯಾದರೆ ಬೆಂಬಲಿಸಿ ನನ್ನೊಂದಿಗೆ ಬರಲಿದ್ದಾರೆ.
ಈಗಾಗಲೇ
ಚದುರಿದ್ದ ಜೆಡಿಎಸ್ ಮುಖಂಡರು ಕಾರ್ಯಕರ್ತರು ಒಂದಾಗಿ ನನ್ನ ಜೊತೆ ಇದ್ದಾರೆ .ಇದರಿಂದಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಿರ್ದೇಶನ ನೀಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಅತಿಶೀಘ್ರದಲ್ಲೇ ಕ್ಷೇತ್ರದಾದ್ಯಂತ ಸಂಚರಿಸಿ ಪಕ್ಷ ಸಂಘಟನೆಗೆ ತೊಡಗಿಕೊಳ್ಳುವುದಾಗಿ ತಿಳಿಸಿದರು.
Leave a Comment