• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ತಲಾಂದನ ಆಶ್ರಯ ಕಾಲೋನಿ ನಿವಾಸಿಗಳಿಂದ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಮುಟ್ಟಳ್ಳಿ ಪಂಚಾಯತಗೆ ಮುತ್ತಿಗೆ

June 22, 2022 by bkl news Leave a Comment

ಭಟ್ಕಳ: ಶಾಸಕರ ಅನುದಾನ ದಡಿಯಲ್ಲಿ ಮಂಜೂರಾದ 40 ಲಕ್ಷದ ಕಾಂಕ್ರೀಟ್ ರಸ್ತೆಯ ಕಾಮಗಾರಿಯ ಉಳಿದ ಕೆಲಸವನ್ನು ಶೀಘ್ರದಲ್ಲಿ ಮಾಡುವಂತೆ ಆಗ್ರಹಿಸಿ ಇಲ್ಲಿನ ತಲಾಂದ ಗ್ರಾಮದ ಆಶ್ರಯ ಕಾಲೋನಿಯ ನಿವಾಸಿಗಳು ಮುಟ್ಟಳ್ಳಿ ಪಂಚಾಯತ ಗೆ ಮುತ್ತಿಗೆ ಹಾಕಿದ್ದಾರೆ.

ಇಲ್ಲಿನ ಆಶ್ರಯ ಕಾಲೋನಿಯಲ್ಲಿ ಅಂದಾಜು 25 ವರ್ಷಗಳಿಂದ ಸ್ಥಳಿಯರು ವಾಸಿಸುತ್ತಿದ್ದು  ಇಲ್ಲಿಯವರೆಗೆ ಮೂಲ ಸೌಕರ್ಯವಾದ  ರಸ್ತೆಯ ಸೌಲಭ್ಯವಿಲ್ಲವಾಗಿತ್ತು. ಈ ಹಿನ್ನೆಲೆ ನಿವಾಸಿಗರು ಶಾಸಕರ‌ ಬಳಿ ತೆರಳಿ ಮನವಿ ಮಾಡಿದ ಕಾರಣದಿಂದ ಅವರಿಗೆ ಶಾಸಕರ ಅನುದಾನದಡಿ 40 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನು ನಿರ್ಮಿಸಿ ಕೊಡುವುದಾಗಿ ತಲಾಂದನ ಆಶ್ರಯ ಕಾಲೋನಿಗೆ ಮಂಜುರು ಮಾಡಿ ಭೂಮಿ ಪೂಜೆಯನ್ನು ಸಹ ನಡೆಸಿದ್ದರು.

ಅದರಂತೆ ಕಾಮಗಾರಿ ಪಡೆದುಕೊಂಡ ಗುತ್ತಿಗೆದಾರರು ಕಾರ್ಯ ಆರಂಭಿಸುತ್ತಿದ್ದಂತೆ  ಶಿರಾಲಿ ಮೂಲದ ವ್ಯಕ್ತಿಯೋರ್ವ ಕಾಮಗಾರಿ ಆರಂಭಿಸಲಿರುವ ರಸ್ತೆಯು ಸರ್ಕಾರ ತನಗೆ ನೀಡಿದ ತನ್ನ ಖಾಸಗಿ ಜಮೀನಾಗಿದ್ದು ಆ ಜಾಗವನ್ನು ಗುರುತಿಸಿ ತದನಂತರ ಕಾಮಗಾರಿಯನ್ನು ನಡೆಸುವಂತೆ ಪಂಚಾಯತಗೆ ಅರ್ಜಿ ನೀಡಿದ್ದ ಎಂದು ತಿಳಿದು ಬಂದಿದೆ‌. ಹಾಗೂ ಈ ಕುರಿತು ವಿಚಾರಣೆ ನಡೆಸಿ ಕಾಮಗಾರಿಯನ್ನು ಆರಂಭಿಸಲು ಪಂಚಾಯತ ತೀರ್ಮಾನಿಸಿ ಕೊನೆಗೆ ಕಾಮಗಾರಿಯನ್ನು ಮುಂದೂಡಿದ ಬಗ್ಗೆ ಅಸಮಾಧಾನಗೊಂಡ ಸ್ಥಳಿಯರು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿದ ಮಹಿಳೆಯರು ಸೇರಿದಂತೆ 50 ರಿಂದ 100 ಜನರು ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಈಗಾಗಲೇ ಕಾಮಗಾರಿ ಪಡೆದ ಗುತ್ತಿಗೆದಾರ ಶೇ. 75 ಪ್ರತಿ ರಷ್ಟು ಕಾಮಗಾರಿ ಮುಗಿಸಿದ್ದಾರೆ. ಆದರೆ ಸದ್ಯ ಕಾಮಗಾರಿ ಸ್ಥಗಿತಗೊಳಿಸಿದ್ದು ಇನ್ನುಳಿದ ಕಾರ್ಯ ಪೂರ್ಣಗೊಳಿಸುವಂತೆ ಸ್ಥಳೀಯರು ಪಂಚಾಯತ್ ಅಧ್ಯಕ್ಷರಲ್ಲಿ ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಪಂಚಾಯತ ಪಂಚಾಯತ ಅಧ್ಯಕ್ಷ ಶೇಷು ನಾಯ್ಕ, ಸದಸ್ಯ ಗಣಪತಿ ನಾಯ್ಕ ಜನರ ಸಮಸ್ಯೆಯನ್ನು ಆಲಿಸಿ ಕಾಂಕ್ರೆಟ್ ರಸ್ತೆ ಪೂರ್ಣಗೊಳಿಸುವುದಾಗಿ ತಿಳಿಸಿದರು ಹಾಗೂ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾದ ಸಮಸ್ಯೆಗಳೇನಾದರು ಉದ್ಬವಿಸಿದರೆ ಸಾರ್ವಜನಿಕರು ಪಂಚಾಯತನೊಂದಿಗೆ ಸಹಕರಿಸುವುದಾಗಿ  ಸ್ಥಳಿಯ ನಿವಾಸಿಗಳಾದ ರೋಕಿ ಫರ್ನಾಂಡಿಸ್, ರವಿ ನಾಯ್ಕ, ಮಾದೇವ ನಾಯ್ಕ ಸೇರಿದಂತೆ ಊರಿನ ನಾಗರಿಕರು ಆಶ್ವಾಸನೆ ನೀಡಿದರು.

ಆಕ್ರೋಶಭರಿತರಾಗಿ ಪಂಚಾಯತಗೆ ಬಂದಿದ್ದ ಆಶ್ರಯ ಕಾಲೋನಿ ನಿವಾಸಿಗಳನ್ನು ಪಂಚಾಯತ ಅಧ್ಯಕ್ಷ ಶೇಷು ನಾಯ್ಕ, ಸದಸ್ಯ‌ ಗಣಪತಿ ನಾಯ್ಕ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಕಾಮಗಾರಿಯ ಕುರಿತಾದ ಬೆಳವಣಿಗೆಯನ್ನು ಕಾದುನೋಡಬೇಕಾಗಿದೆ.

ಭಟ್ಕಳ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ; https://chat.whatsapp.com/CCdLQvKCIHJFyLu2WpU4xI

Related Posts :

ಸ್ನೇಹಕ್ಕೆ ಬೆಲೆ ನ...
ಕರ್ನಾಟಕ ರಕ್ಷಣಾ ಉ...
ಬೈಲೂರು ಬಳಿ ರಾಷ್ಟ...
ಮಹಿಳಾ ಮೊರ್ಚಾದಿಂ...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,402,854 visitors

Footer

JSW has proposed another port at Honavar

July 26, 2021 By Sachin Hegde

ಸೋಡಿಗದ್ದೆ ರಿಕ್ಷಾ ನಿಲ್ದಾಣ ಚಾವಣಿ ಉದ್ಘಾಟನೆಗೆ ಆಟೋ ಏರಿ ಬಂದ ಶಾಸಕ ಸುನೀಲ್ ನಾಯ್ಕ

July 6, 2022 By bkl news

ಕ್ರಿಪ್ಟೋ ಕರೆನ್ಸಿ ನಕಲಿ ಎಕ್ಸ್ ಚೇಂಜ್‌ಗಳು ; ಭಾರತೀಯ ಹೂಡಿಕೆದಾರರಿಗೆ 1000 ಕೋಟಿ ರೂ. ವಂಚನೆ !

July 6, 2022 By Deepika

ಭಾವಕವಿ , ಸಾಹಿತಿ, ಭಟ್ಕಳದ ಉಮೇಶ ಮುಂಡಳ್ಳಿಯವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಘೋಷಣೆ

July 5, 2022 By Sachin Hegde

ಆರ್ತಿ ಬೈಲ್ ನಲ್ಲಿ ಪಲ್ಟಿಯಾಗಿದ್ದಟ್ಯಾಂಕ‌ರ ನ್ನು ಕ್ರೇನ್ ಮೂಲಕ ತೆರವು ಗೊಳಿಸಿ ಸಂಚಾರ ಸುಗಮ

July 5, 2022 By Jayaraj Govi

ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022

July 5, 2022 By Deepika

ಪತಿಯಿಂದಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

July 4, 2022 By Deepika

© 2022 Canara Buzz · Contributors · Privacy Policy · Terms & Conditions

 

Loading Comments...
 

    loading Cancel
    Post was not sent - check your email addresses!
    Email check failed, please try again
    Sorry, your blog cannot share posts by email.