• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಭಾವಕವಿ , ಸಾಹಿತಿ, ಭಟ್ಕಳದ ಉಮೇಶ ಮುಂಡಳ್ಳಿಯವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಘೋಷಣೆ

July 5, 2022 by Sachin Hegde Leave a Comment

ಕಾರವಾರ – ಹುಬ್ಬಳ್ಳಿಯಿಂದ ಹೊರಬರುವ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯು ಕೊಡಮಾಡುವ ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ರತ್ನ ೨೦೨೨ ರಾಜ್ಯ ಪ್ರಶಸ್ತಿಗೆ ಉಮೇಶ ಮುಂಡಳ್ಳಿ ಅವರ ಹೆಸರು ಘೋಷಣೆಯಾಗಿರುತ್ತದೆ.ಉತ್ತರ ಕನ್ನಡ
ಜಿಲ್ಲೆಯ ಭಾವಕವಿ ಎಂದೇ ಹೆಸರಾದ ಉಮೇಶ ಮುಂಡಳ್ಳಿ ೨೦೦೩ ರಿಂದ ಇದುವರೆಗೆ ಮೌನಗೀತೆ,ಭಾವಸುಮ, ಕರುನಾಡ ಕುಡಿಗಳು ಹಾಗೂ ನಾನೂ ಶಿಲ್ಪವಾಗಬೇಕು ಎಂಬ ನಾಲ್ಕು ಕವನ ಸಂಕಲನ ಗಳನ್ನು, ಬೆಂಕಿಬಿದ್ದಿದೆ ಹೊಳೆಗೆ ಮಕ್ಕಳ ಕಥಾ ಸಂಕಲನ, “ಉತ್ತರಕನ್ನಡಕ್ಕೆ ಒಂದು ಸುತ್ತು” ಎನ್ನುವ ಪ್ರವಾಸಿ ಲೇಖನಗಳ ಸಂಕಲನ ಹಾಗೂ ” ಮಾತಾ ಮಹಿಮ” ಅಳ್ವೆಕೋಡಿ ದೇವಾಲಯ ಚರಿತ್ರೆ ಪುಸ್ತಕಗಳನ್ನು ,ಹನುಮಾಮೃತ ಎನ್ನುವ ಸಂಪಾದಿತ ಪುಸ್ತಕಗಳನ್ನು ಹೊರ ತಂದಿರುತ್ತಾರೆ .

wp 1657036580889

ಜೊತೆಗೆ ಭರವಸೆಯ ಛಾಯೆ ಎಂಬ ಧ್ವನಿಸುರುಳಿಯನ್ನು ೨೦೧೧ ರಲ್ಲಿಯೇ ನಾಡೋಜ ಪಾಟಿಲ್ ಪುಟ್ಟಪ್ಪ ನವರ ಅಮೃತ ಹಸ್ತದಲ್ಲಿ ಬಿಡುಗಡೆ ಗೊಳಿಸಿರುವುದು ವಿಶೇಷವಾಗಿದ್ದು , ಇತ್ತೀಚಿಗೆ ಕೆಲವು ಸ್ವರಚಿತ ಭಾವಗೀತೆಗಳು ಭಕ್ತಿಗೀತೆಗಳ ಅಲ್ಬಂ ಗಳನ್ನು ಹೊರತರುವ ಮೂಲಕ ಯೂಟ್ಯೂಬ್ ವೀಕ್ಷಕರ ಮೆಚ್ಚುಗೆ ಗಳಿಸಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರದ ಕೆಲವು ಯೋಜನೆಗಳ ಯಶಸ್ಸಿ ಅನುಷ್ಠಾನದಲ್ಲಿ ಮಾಹಿತಿ ಸಂವಹನದ ಸಾಹಿತ್ಯ ,ಗೀತೆಗಳ ರಚನೆಯಲ್ಲಿಯೂ ತೊಡಗಿಕೊಂಡಿರುತ್ತಾರೆ.

  • wp 1657036595097


ರಾಜ್ಯದ ಅನೇಕ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಕವಿಗೋಷ್ಠಿ, ಸುಗಮಸಂಗೀತ ಹಾಗೂ ಅನೇಕ ಕಲಿಕಾ ಕಮ್ಮಟಗಳಲ್ಲಿಯೂ ಸದಾ ತೊಡಗಿಸಿಕೊಳ್ಳುತ್ತಿದ್ದು ಇವರಿಗೆ ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳು ಬಂದಿದ್ದು ಭಟ್ಕಳ ತಾಲೂಕಿನ ೮ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಸಹ ಬಂದಿರುತ್ತದೆ.


ಇವರ ಸುದೀರ್ಘ ಸಾಹಿತ್ಯ ಚಟುವಟಿಕೆಗಳನ್ನು ಪರಿಗಣಿಸಿ ೨೦೨೨ರ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಜೊತೆಗೆ ಇವರೊಂದಿಗೆ ಇನ್ನೂ ಒಂಬತ್ತು ಜನರಿಗೆ ಉಳಿದ ಬೇರೆ ಬೇರೆ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ವಿಶ್ವ ದರ್ಶನ ಪತ್ರಿಕೆಯ ಪ್ರಧಾನ ಸಂಪಾದಕರು, ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ರ ಸಲಹಾ ಸಮಿತಿ ರಾಜ್ಯ ಅಧ್ಯಕ್ಷರು ಆದ ಡಾ.ಎಸ್ ಎಸ್ ಪಾಟಿಲ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

  • wp 1657036559735


ಇದೇ ಜುಲೈ ೨೦ ರವಿವಾರದಂದು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂದು ನಡೆಯುವ ವಿಶ್ವ ದರ್ಶನ ಪತ್ರಿಕೆಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ಗುರುತಿಸಲ್ಪಟ್ಟ ರಾಜ್ಯದ ಹತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವಿಶ್ವದರ್ಶನ ಕನ್ನಡ ದಿನ ಪತ್ರಿಕೆ ಸಂಪಾದಕರಾದ ಡಾ.ಎಸ್.ಎಸ್ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಶ್ರೀ ಯುತ ಉಮೇಶ ಮುಂಡಳ್ಳಿ ಯವರು ಈಗಾಗಲೇ
ಯುವಜನ ಸೇವಾ ಇಲಾಖೆಯಿಂದ ಯುವ ಪ್ರಶಸ್ತಿ,
ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ ೨೦೦೭
ಬಸವ ಚೇತನ ಪ್ರಶಸ್ತಿ ೨೦೧೪
ಕರುನಾಡ ಸಾದಕ ಪ್ರಶಸ್ತಿ ೨೦೨೧ ರಲ್ಲಿ ಪಡೆದಿರುತ್ತಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Karwar News

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಬ್ಯಾಂಕ್ ಆಫ್ ಬರೋಡಾ ನೇಮಕಾತಿ|BOB new Recruitment 26-9-2023

September 26, 2023 By prakash naik

IDBI Bank Recruitment Apply Online for JAM Post 2023 idbi ಬ್ಯಾಂಕ್ ನೇಮಕಾತಿ

September 23, 2023 By prakash naik

ಸಿಬ್ಬಂದಿ ಮತ್ತು ಆಡಳಿತ ಇಲಾಖೆ ನೇಮಕಾತಿ 2023 Sakala Recruitment 2023 bangalore job

September 22, 2023 By prakash naik

DCCB Recruitment 16-10 2023 ವಿವಿಧ ಹುದ್ದೆಗಳ ನೇಮಕಾತಿ

September 18, 2023 By prakash naik

450 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ RBI Recruitment 4-10- 2023

September 16, 2023 By prakash naik

ಈ ಬಾರಿ ಕೆನರಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ-ನಿವೇದಿತ್ ಆಳ್ವಾ

September 16, 2023 By Sachin Hegde

© 2023 Canara Buzz · Contributors · Privacy Policy · Terms & Conditions · Member of Digital Avatar

 

Loading Comments...