ಚೆನ್ನೈ: ಕೆಲ ವರ್ಷಗಳ ಹಿಂದೆ ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡ ಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಸಕ್ರಿಯವಾಗಿದ್ದ ಮಲಯಾಳಂ ನಟಿ ಮತ್ತು ಕನ್ನಡದ ಹಿರಿಯ ನಟಿ ಲಕ್ಷ್ಮೀ ಅವರ ಪುತ್ರಿ ಐಶ್ವರ್ಯಾ ಇಂದು ಅವಕಾಶಗಳಿಲ್ಲದೆ ಜೀವನೋ ಪಾಯಕ್ಕಾಗಿ ಬೀದಿಬೀದಿಗಳಲ್ಲಿ ಸಾಬೂನು ಮಾರುವ ಸ್ಥಿತಿಗೆ ಇಳಿದಿದ್ದಾರೆ.
ಹಿಂದೊಮ್ಮೆ ಸೂಪರ್ ಸ್ಟಾರ್ಗಳಾದ ರಜನೀಕಾಂತ್ ಮತ್ತು ಮೋಹನಲಾಲ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಐಶ್ವರ್ಯಾ ಇತ್ತೀಚಿನವರೆಗೂ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಸೀಮಿತಗೊಂಡಿದ್ದರು. ಆದರೆ ಈಗ ಕೈಯಲ್ಲಿ ಯಾವ ಪಾತ್ರಗಳಿಲ್ಲದೆ ಬದುಕು ಸಾಗಿಸಲು ಬೇರೆ ಆದಾಯವಿಲ್ಲದೆ ಬೀದಿ ವ್ಯಾಪಾರಕ್ಕೆ ಇಳಿದಿರುವುದಾಗಿ ಸ್ವತಃ ಐಶ್ವರ್ಯಾ ಭಾಸ್ಕರನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ತಮ್ಮ ದಯನೀಯ ಪರಿಸ್ಥಿತಿಯನ್ನು ತೆರೆದಿಟ್ಟಿರುವ ಈ ನಟಿ, ಸದ್ಯಕ್ಕೆ ಅಭಿನಯಿಸಲು ಯಾವುದೇ ಚಿತ್ರಗಳಿಲ್ಲ. ಉದ್ಯೋಗ ಇಲ್ಲ . ಜೊತೆಗೆ ಹಣವೂ ಇಲ್ಲ. ಹೀಗಾಗಿ ವಿಧಿಯಿಲ್ಲದೆ ಸಾಬೂನು ಮಾರಾಟದಲ್ಲಿ ತೊಡಗಿರುವುದಾಗಿ ಹೇಳಿದರು.
ಐಶ್ವರ್ಯಾ ಕಥೆಯು ಕೇಳುತ್ತಿದ್ದರೆ, ಪ್ರಮುಖ ನಟರೊಂದಿಗೆ ನಟಿಸಿ ಚಿತ್ರರಂಗದಲ್ಲಿ ಎತ್ತರಕ್ಕೆ ಏರಿದ ನಟಿ ಇವರೇನಾ ಎಂದು ಯಾರಿಗಾದರೂ ಅಚ್ಚರಿಯಾಗ ದಿರದು. ಅದರೆ ಇದು ವಾಸ್ತವ. ಮೋಹನಲಾಲ್ ಜೊತೆ ಈಕೆ ನಟಿಸಿದ ಬಟರ್ಸ್, ನರಸಿಂಹಂ, ಪ್ರಜಾ ಮೊದಲಾದ ಚಿತ್ರಗಳು ಒಳ್ಳೆಯ ಹೆಸರು ತಂದುಕೊಟ್ಟಿದ್ದವು. ಆದರೆ ದಿನಕಳೆದಂತೆ ಆಕೆಯನ್ನು ನಿರ್ಮಾಪಕರು ಕಡೆಗಣಿಸುತ್ತ ಬಂದ ಪರಿಣಾಮ ಈಗ ದಯನೀಯ ಸ್ಥಿತಿಗೆ ಇಳಿದಿದ್ದಾರೆ.
ತಮ್ಮ ಬಳಿ ಹಣವಿಲ್ಲದಿದ್ದರೂ ಯಾವುದೇ ಸಾಲವಿಲ್ಲ. ಪುತ್ರಿ ವಿವಾಹವಾದ ನಂತರ ದೂರವಾಗಿದ್ದಾಳೆ ಎಂದಿರುವ ನಟಿ, ಯಾವುದಾದರೂ ಉದ್ಯೋಗ ಕೊಡಿಸಿದರೆ ಮಾಡಲು ತಾವು ಸಿದ್ಧ. ಆದರೆ ನಟಿಸಲು ಮತ್ತೊಮ್ಮೆ ಅವಕಾಶ ದೊರೆತರೆ ಅದಕ್ಕೂ ಸೈ ಎಂದಿದ್ದಾರೆ. ಚಿತ್ರರಂಗದಲ್ಲಿಸಕ್ರಿಯರಾಗಿದ್ದಾಗಲೇ1994ರಲ್ಲಿತನ್ವಿರ್ಅಹಮದ್ಎಂಬುವರನ್ನು ಐಶ್ವರ್ಯಾ ವಿವಾಹವಾಗಿದ್ದರು.
ಆದರೆ ಮೂರು ವರ್ಷಗಳ ನಂತರ ದಂಪತಿ ವಿಚ್ಛೇದನ ಪಡೆದುಕೊಂಡಿದ್ದರು. ಜೊತೆಗೆ ತಾಯಿ ಲಕ್ಷ್ಮೀ ಜೊತೆಯೂ ಆಕೆ ಸಂಬಂಧ ಕಡಿದುಕೊಂಡು ಬಹಳ ವರ್ಷಗಳೇ ಕಳೆದಿವೆ. ಚಿತ್ರರಂಗದಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾಗಲೇ ಹಣಕಾಸು ಭದ್ರತೆ ಬಗ್ಗೆ ಚಿಂತಿಸದೆ ಕೊನೆಗೆ ಎಲ್ಲವನ್ನೂ ಕಳೆದುಕೊಂಡಾಗಲೇ ಜೀವನದ ಬಗ್ಗೆ ಅರಿವಾಗುವುದು ಎಂಬ ಮಾತು ನಟಿ ಐಶ್ವರ್ಯಾಗೆ ಅನ್ವಯಿಸುತ್ತದೆ.
Leave a Comment