
ಯಲ್ಲಾಪುರ: ಪತ್ರಿಕಾವಿತರಕರು ಮಳೆ, ಗಾಳಿ ,ಚಳಿಯೆನ್ನದೇ ನಸುಕಿನಲ್ಲಿಯೇ ಮನೆ ಮನೆಗೆ ಪ್ರತಿದಿನ ಪತ್ರಿಕೆ ಮುಟ್ಟಿಸುತ್ತಿರುವದರಿಂದ ನಮ್ಮಂತಹ ಹಿರಿಯರಿಗೆ ಹಾಗೂ ಮಕ್ಕಳಿಗೂ ಓದುವ ಅಭಿರುಚಿ ಹೆಚ್ಚಿಸಿ ಅದನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಶ್ರಮ ಬೇಡುವ ಅವರÀ ಕಾಯಕಕ್ಕೆ ಯಾವದೂ ಸರಿಸಾಟಿಯಿಲ್ಲ ವಾದರೂ ನಮ್ಮಿಂದಾದ ಕೊಡುಗೆ ನೀಡಿ ಗೌರವಿಸುತ್ತಿದ್ದೇವೆ

ಎಂದು ಪಟ್ಟಣದ ಶಮಾ ಭಾರತ ಗ್ಯಾಸ ಏಜೆನ್ಸಿ ಮಾಲಕರಾದ ಎ ಎ ಶೇಖ ಹೇಳಿದರು. ಅವರು ಪಟ್ಟಣದ ಶಮಾ ಭಾರತ ಗ್ಯಾಸ ಏಜೆನ್ಸಿ ಯ ಕೇಂದ್ರ ಕಚೇರಿಯಲ್ಲಿ ಪತ್ರಿಕೆಯ ವಿತರಕರರಿಗೆ ರೇನ್ ಕೋಟ್ ವಿತರಿಸಿ ಮಾತನಾಡಿ ಪತ್ರಿಕೆ ವಿತರಕರು ರಸ್ತೆಯಲ್ಲಿ ಎಚ್ಚರಿಕೆಯಿಂದ ಸಂಚರಿಸಿ ಇತ್ತಿಚೇಗೆ ತುಂಬಾ ಅಪಘಾತಗಳು ಗಡಿಬಿಡಿಯ ಕಾರಣಕ್ಕೆ ಆಗುತ್ತಿವೆ ಹಾಗೆಯೇ ತಮ್ಮ ಆರೋಗ್ಯದ ಕಡೆಗೂ ಗಮನ ನೀಡಬೇಕುಎಂದರು.
\ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷ ಜಂiÀiರಾಜ ಗೋವಿ ಹಾಗೂ ತಾಲೂಕಾಧ್ಯಕ್ಷ ಅನಿಲ ಭಟ್ ವಿತರಕರ ಪರವಾಗಿ ಮಾತನಾಡಿ ನಮ್ಮ ಕಾಯಕವನ್ನು ಶ್ರದ್ಧೆಯಿಂದ ಮುಂದುವರೆಸಿಕೊAಡು ಹೋಗಲು ತಮ್ಮಂತಹ ಸಹೃದಯದವರ ಬೆಂಬಲದಿAದ ಸಾಧ್ಯವಾಗುತ್ತಿದೆ. ಮಳೆಗಾಲದಲ್ಲಿ ಉತ್ತಮ ಗುಣಮಟ್ಟದ ರೇನ್ ಕೋಟ್ ನೀಡಿ ಗೌರವಿಸಿದ್ದಕ್ಕೆ ನಿಮಗೆ ಚಿರರುಣಿಯಾಗಿದ್ದೇವೆ ಎಂದರು. ಶಮಾ ಭಾರತ ಗ್ಯಾಸ ಏಜೆನ್ಸಿ ಪಾಲುದಾರ ಅಬ್ದುಲ ಮುಜೀಬ್ ಶೇಖ ಇದ್ದರು. ಪ್ರಭಾವತಿ ನಿರ್ವಹಿಸಿದರು. ವಿತರಕರಾದ ವಿನಾಯಕ ವೆರ್ಣೇಕರ, ಅಮೃತ ಹಂದ್ರೆ ರಾಜು ಉಡುಪಿಕರ, ಪ್ರಶಾಂತ ಗೋಖಲೆ, ದೀಪಕ ಕಲಾಲ,ಸಾಗರ,ರಾಕೇಶ,ಅಭಿ, ಇದ್ದರು.
Leave a Comment