ಬೈಕ್‌ನಲ್ಲಿ ತೆರಳುತ್ತಿದ್ದ ಈರ್ವರ ಮೇಲೆ ಚಿರತೆ ದಾಳಿ!

ಹೊನ್ನಾವರ: ತಾಲೂಕಿನ ಸಾಲ್ಕೋಡ ಗ್ರಾಮದ ಎಸ್.ಕೆ.ಪಿ ಕ್ರೀಡಾಂಗಣದ ಸಮೀಪ ಬೈಕ್‌ನಲ್ಲಿ ತೆರಳುತ್ತಿದ್ದ ಈರ್ವರಿಗೆ ಚಿರತೆ ಯೊಂದು ಗಾಯಗೊಳಿಸಿದ ಘಟನೆ ಸಂಭವಿಸಿದೆ. ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಹಾಡಗೇರಿ ನಿವಾಸಿಗಳಾದ ಈರ್ವರು, ಸಾಲ್ಕೋಡ ಭಾಗದಿಂದ ಅರೆಅಂಗಡಿಗೆ ದ್ವಿಚಕ್ರ ವಾಹನದಲ್ಲಿ ಸಾಗುವಾಗ ಈ ಘಟನೆ ಸಂಭವಿಸಿದೆ. ಅರಣ್ಯ ಇಲಾಖೆಗೆ ಸೇರಿದ ಅಕೇಶಿಯಾ ಮರ ಇರುವ ಪ್ರದೇಶದಿಂದ ನುಗ್ಗಿದ ಚಿರತೆಯೊಂದು ಏಕಾಏಕಿ ಬೈಕ್ ಮೇಲೆ ಎಗರಿದೆ. ಈ ಸಂದರ್ಭದಲ್ಲಿ ಈರ್ವರ ಕಾಲಿನ ಭಾಗಕ್ಕೆ ಉಗುರಿನಿಂದ ತಗುಲಿದ ಗಾಯ ಸಂಭವಿಸಿದ್ದು, ಅರೇಅಂಗಡಿಯಲ್ಲಿ ವೈದ್ಯರ … Continue reading ಬೈಕ್‌ನಲ್ಲಿ ತೆರಳುತ್ತಿದ್ದ ಈರ್ವರ ಮೇಲೆ ಚಿರತೆ ದಾಳಿ!