ಕಾರವಾರ:
ಸಮಾನತೆ-ಸಹಬಾಳ್ವೆಯ ಮೂಲಸಂದೇಶ ಹೊತ್ತ ಬುದ್ಧ ಧರ್ಮ ಸಮಾಜದಲ್ಲಿ ಶಾಂತಿ ಕಾಪಾಡುವ ಮೂಲ ಉದ್ದೇಶ ಹೊಂದಿದ್ದು, ಬಿ.ಆರ್.ಅಂಬೇಡ್ಕರ್ ಕೂಡ ಇದೇ ಧರ್ಮದತ್ತ ಸಾಗಲು ಪ್ರೇರಣೆಯಾಗಿತ್ತು ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಭಾಲ್ಕೆ ಅಭಿಪ್ರಾಯಪಟ್ಟರು.
ಭರತೀಯ ಬೌದ್ಧ ಮಹಾಸಭಾದ ಉತ್ತರ ಕನ್ನಡ ಜಿಲ್ಲಾ ಘಟಕ ಕನ್ನಡ ಭವನದಲ್ಲಿ ಆಯೋಜಿಸಿದ್ದ ಬುದ್ಧ ಬೆಳದಿಂಗಳು ಯುವ ಚಿಂತನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಶೆಟ್ಟಿ ದೀನೆ ಮಾತನಾಡಿ ಬುದ್ಧನ ವಿಚಾರಧಾರೆ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ ಎಂದರು. ಕೆ.ಎಂ.ಮೋಹನರಾಜ್, ಅಂಬೇಡ್ಕರ್ರ ಮೂಲಚಿಂತನೆ ಜನರಲ್ಲಿ ಸಮಾನತೆ ಬಿತ್ತುವುದಾಗಿದೆ. ಬೌದ್ಧ ತತ್ವಗಳಲ್ಲೂ ಇಂತಹದ್ದೇ ವಿಚಾರವಿದೆ ಎಂದರು. ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದೀಪಕ ಕುಡಾಳಕರ್, ತಾಲೂಕು ಸಂಚಾಲಕ ಶ್ಯಾಮಸುಂದರ ಗೋಕರ್ಣ, ಭಾರತೀಯ ಬೌದ್ಧ ಮಹಾಸಭಾ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಬಡಿಗೇರ, ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ, ನ್ಯಾಯವಾದಿ ಸಂತೋಷ ನಾಯಕ, ಅಂಬೇಡ್ಕರ್ ಸೇನೆಯ ಉಪಾಧ್ಯಕ್ಷ ವಿನಾಯಕ ಕರ್ನಿಂಗ್, ನೇವಲ್ ಎಸ್ಸಿಎಸ್ಟಿ ಎಂಪ್ಲಾಯೀಸ್ ಅಸೋಸಿಯೇಶನ್ ಅಧ್ಯಕ್ಷ ಸುಧೀರ್ ಮಾನೆ ಉಪಸ್ಥಿತರಿದ್ದು ಮಾತನಾಡಿದರು. ಬೌದ್ಧ
ಮಹಾಸಭಾದ ಜಿಲ್ಲಾಧ್ಯಕ್ಷ ಸುಧಾಕರ ಜೋಗಳೇಕರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮಹಾಸಭಾದ ರಾಜ್ಯ ಸಮಿತಿಯ ಪ್ರೊ.ನಿತ್ಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ರಾಠೋಡ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Leave a Comment