ಹಳಿಯಾಳ:
ಉತ್ತರ ಕನ್ನಡ ಜಿಲ್ಲಾ ಮಟ್ಟದಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ದೆಯ ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿದ ಹಳಿಯಾಳದ ಕಾರ್ಮೆಲ್ ಪ್ರೌಢ ಶಾಲೆಯ ಹಲವು ಮಕ್ಕಳು ಜಿಲ್ಲಾ ಮಟ್ಟದಲ್ಲಿ ಸಾಧನೆಗೈದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಶಾಲಾ ಮುಖ್ಯೋಪಾಧ್ಯಾಯನಿ ಸಿ! ಸ್ವರೂಪಾ.ಡಿಸೋಜಾ ತಿಳಿಸಿದ್ದಾರೆ.
ವಿದ್ಯಾರ್ಥಿಗಳಾದ ದಿವ್ಯಾ ಮಾದರ ತೆಲಗು ಭಾಷಣದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ಸೋಬಿನಾ.ಕಾಂಬ್ರೇಕರ.ದ್ವಿತೀಯ, ಯೋಗದಲ್ಲಿ ಗಣೇಶ ಗಾಣಿಗೇರ ಮತ್ತು ಚದುರಂಗದಲ್ಲಿ ಪ್ರಜ್ವಲ ಶೆಟ್ಟಿ ಅರ್ಹತೆ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಅವರು ತಿಳಿಸಿದ್ದಾರೆ.
Leave a Comment