• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉತ್ತರ ಕನ್ನಡ ಜಿಲ್ಲಾಧಿಕಾರಿ ಅವರನ್ನು ತಕ್ಷಣ ಜಿಲ್ಲೆಯಿಂದ ವರ್ಗಾಯಿಸಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ

October 21, 2017 by Sachin Hegde Leave a Comment

ಹಳಿಯಾಳ: ಈ ಸ್ವತ್ತು, ಅತಿಕ್ರಮ ಸಕ್ರಮ, ಟೆಂಡರ್ ಪ್ರಕ್ರಿಯೇ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಸಂಪೂರ್ಣ ನೀರ್ಲಕ್ಷ್ಯತನ ತೋರಿಸುವುದು ಅಲ್ಲದೇ ಚುನಾಯಿತ ಜನಪ್ರತಿನಿಧಿಗಳಿಗೆ ಮರ್ಯಾದೆ(ಕಿಮ್ಮತ್ತು)ನೀಡದೆ ಅಭಿವೃದ್ದಿ ಕಾರ್ಯಗಳು ಕುಂಠಿತವಾಗಲು ಪರೋಕ್ಷವಾಗಿ ಕಾರಣವಾಗುತ್ತಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಅವರನ್ನು ತಕ್ಷಣ ಜಿಲ್ಲೆಯಿಂದ ವರ್ಗಾಯಿಸಿ ಇಂತಹ ಜಿಲ್ಲಾಧಿಕಾರಿ ನಮಗೆ ಬೇಡ ಇದು ಜಿಲ್ಲಾಧಿಕಾರಿಯವರ ಕಾರ್ಯವೈಖರಿಯ ಬಗ್ಗೆ ನನ್ನ ತೀವೃ ಅಸಮಾಧಾನ ನುಡಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ ಹೇಳಿದರು.
ಶನಿವಾರ ತಮ್ಮ ಕಾರ್ಯಾಲಯದಲ್ಲಿ ಕರೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಸಚಿವರ ಹಾಗೂ ಶಾಸಕರ ಸತತ ಪ್ರಯತ್ನದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಆಗಿವೆ ಆದರೇ ಈಗ ಜಿಲ್ಲಾಡಳಿತದಿಂದ ಬಹಳಷ್ಟು ಯೋಜನೆಗಳಿಗೆ ಕಾಮಗಾರಿಗಳಿಗೆ, ಅಡಚಣೆ ಉಂಟಾಗುತ್ತಿದ್ದು ಇದರಿಂದಾಗಿ ಅಭಿವೃದ್ದಿಗೆ ತೊಂದರೆ ಆಗುತ್ತಿದೆ ಎಂದು ಸುದಿಗೊಷ್ಠಿಯುದ್ದಕ್ಕೂ ಜಿಲ್ಲಾಧಿಕಾರಿಯವರ ಕಾರ್ಯವೈಖರಿಗೆ ಬಗ್ಗೆ ತೀವೃ ಅಸಮಾಧಾನದ ನುಡಿಗಳನ್ನು ಆಡಿದರು.
ಅರಣ್ಯ ಇಲಾಖೆಯಿಂದ ಈಗಾಗಲೇ ಅರಣ್ಯ ಅತಿಕ್ರಮಣ ಮಾಡಿದವರಿಗೆ ಜಿಪಿಎಸ್ ಮಾಡಿಕೊಟ್ಟಿದ್ದಾರೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಹಾಗೂ ಕೃಷೀ ಇಲಾಖೆಯಿಂದ ಕೂಡ ಎಲ್ಲಾ ವರದಿಗಳು ಜಿಲ್ಲಾಡಳಿತಕ್ಕೆ ನೀಡಲಾಗಿದ್ದರು ಕೂಡ ಅವುಗಳ ಅನುಷ್ಠಾನಕ್ಕೆ ವಿನಾಃಕಾರಣ ವಿಳಂಬವಾಗುತ್ತಿದ್ದು ಇದಕ್ಕೆ ಜಿಲ್ಲಾಧಿಕಾರಿಯವರ ನೀರ್ಲಕ್ಷ್ಯತನ ಕಾರಣ. 2005ನೇ ಸಾಲಿನಿಂದ ಅತಿಕ್ರಮಣ ಮಾಡಿದವರಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೇರಿದವರಿಗೆ ಅತಿಕ್ರಮಣ ಭೂಮಿಯನ್ನು ಸಕ್ರಮಗೊಳಿಸಲು ಆದೇಶ ನೀಡಲಾಗಿದೆ ಇದಕ್ಕೆ ನಮ್ಮ ಅಭ್ಯಂತರ ಇಲ್ಲ ಆದರೇ ಉಳಿದ ವರ್ಗದವರು ಏನು ತಪ್ಪು ಮಾಡಿದ್ದಾರೆ ? ಈ ದ್ವಂಧ್ವ ನಿಲುವು ಸರಿಯಲ್ಲ ಎಲ್ಲ ವರ್ಗದವರನ್ನು ಸಮಾನವಾಗಿ ಕಂಡು ಎಲ್ಲರಿಗೂ ನ್ಯಾಯ ನೀಡಬೇಕೆಂದು ಆಗ್ರಹಿಸಿದರು.
ಹಳಿಯಾಳ ಪುರಸಭೆಯಲ್ಲಿ “ಈ ಟೆಂಡರ್” ಕರೆಯುವ ವಿಧಾನದಲ್ಲಿ ಸಿಂಗಲ್ ಟೆಂಡರ್ ಬಂದರೇ ಅದನ್ನು ರದ್ದುಗೋಳಿಸುತ್ತಿದ್ದು ಉಳಿದ ಇಲಾಖೆಗಳಲ್ಲಿ ಸಿಂಗಲ್ ಟೆಂಡರ್‍ಗೆ ಅನುಮೊದನೆ ನೀಡಲಾಗುತ್ತಿದೆ ಎಂದ ಅವರು ಪುರಸಭೆಯ ಠರಾವುಗಳಿಗೆ ಜಿಲ್ಲಾಡಳಿತ ಕಿಮ್ಮತ್ತು ನೀಡುತ್ತಿಲ್ಲ ಜಿಲ್ಲಾಡಳಿತದ ಈ ಕ್ರಮದಿಂದ ಪಟ್ಟಣದಲ್ಲಿ ಅಭಿವೃದ್ದಿ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ ಎಂದರು.
ಜಿಲ್ಲೆಯಿಂದ ಹಾಯ್ದುಹೋಗುವ ಗ್ಯಾಸ್ ಟ್ಯಾಂಕರ್‍ಗಳ ಸಂಚಾರ ನಿಯಂತ್ರಣಕ್ಕೆ ಈ ಹಿಂದಿನ ಜಿಲ್ಲಾಧಿಕಾರಿ ಕಟ್ಟು ನಿಟ್ಟಿನ ನಿಯಮಗಳನ್ನು ರೂಪಿಸಿದ್ದರು ಆದರೇ ಈಗ ಮತ್ತೆ ಗ್ಯಾಸ್ ಟ್ಯಾಂಕರ್‍ಗಳು ಪಲ್ಟಿಯಾಗುತ್ತಿರುವುದು ಅಪಘಾತ ಸಂಭವಿಸುತ್ತಿರುವ ಬಗ್ಗೆ ಜನತೆ ಕಂಗಾಲಾಗಿದ್ದು ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೆಕೆಂದು ಸೂಚಿಸಿದರು.
“ಈ ಸ್ವತ್ತು” ಗೆ ಉತ್ತರ ಕನ್ನಡ ಜಿಲ್ಲೆಗೆ ರೀಯಾಯತಿ ನೀಡಲಾಗಿದ್ದರೂ ಸಹ ಈವರಗೆ ಈ ಸ್ವತ್ತುವಿನಿಂದ ಸಡಿಲಿಕೆ ನೀಡದೆ ಇರುವುದರಿಂದ ಶಿರಸಿ, ಸಿದ್ದಾಪೂರ, ಕುಮಟಾ ಮುಂತಾದ ಭಾಗದಲ್ಲಿ ಬಡವರಿಗೆ ಮನೆಕಟ್ಟಲು ಸೇರಿದಂತೆ ಇನ್ನಿತರ ಕಾರ್ಯಗಳಲ್ಲಿ ಸಾಕಷ್ಟು ತೊಂದರೆ ಆಗುತ್ತಿದ್ದು ಜಿಲ್ಲಾಡಳಿತ ಮಾತ್ರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದೆ ಜನವಿರೋಧಿ ನೀತಿ ತೊರ್ಪಡಿಸಲಾಗುತ್ತಿದೆ ಅಲ್ಲದೇ ದೇವಸ್ಥಾಗಳಿಗೆ ಆಡಳಿತ ಮಂಡಳಿ ನೇಮಿಸುವ ಬಗ್ಗೆ ಈ ಪ್ರಕರಣ ಸುಪ್ರಿಂಕೊರ್ಟನಲ್ಲಿದ್ದು ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಯಾವುದೇ ಕಟ್ಟು ನಿಟ್ಟಿನ ಕ್ರಮಕೈಗೊಳ್ಳದೆ ಇದ್ದರೂ ಕೂಡ ಜಿಲ್ಲಾಡಳಿತ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮೀತಿ ರಚನೆ ಬಗ್ಗೆ ಕ್ರಮ ಕೈಗೊಳ್ಳುತ್ತಿರುವುದು ಖಂಡನೀಯ ಎಂದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News Tagged With: ಅಡಚಣೆ, ಅತಿಕ್ರಮ ಸಕ್ರಮ, ಅವರನ್ನು, ಉತ್ತರ ಕನ್ನಡ ಜಿಲ್ಲಾಧಿಕಾರಿ, ಎಸ್.ಎಲ್.ಘೊಟ್ನೆಕರ, ಕಾಮಗಾರಿಗಳಿಗೆ, ಟೆಂಡರ್ ಪ್ರಕ್ರಿಯೇ, ತಕ್ಷಣ ಜಿಲ್ಲೆಯಿಂದ ವರ್ಗಾಯಿಸಿ, ವಿಧಾನ ಪರಿಷತ್ ಸದಸ್ಯ, ಸ್ವತ್ತು

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar