• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮರಾಠಾ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವವರೆಗೆ ಹೋರಾಟ ಮುಂದುವರೆಯಲಿದೆ -ವಿಪ ಸದಸ್ಯ ಎಸ್.ಎಲ್.ಘೋಟ್ನೆಕರ ಎಚ್ಚರಿಕೆ

July 21, 2018 by Yogaraj SK Leave a Comment

ಹಳಿಯಾಳ:- ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಿಂದೂಳಿದಿರುವ ಮರಾಠಾ ಸಮುದಾಯವನ್ನು ಈ ಹಿಂದಿನ ಯಾವ ಸರ್ಕಾರಗಳು ಪ್ರವರ್ಗ 3ಬಿಯಿಂದ 2ಎಗೆ ಸೇರ್ಪಡೆಗೊಳಿಸಿಲ್ಲ. ಪ್ರಸ್ತುತ ಸಮ್ಮಿಶ್ರ ಸರ್ಕಾರವು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮರಾಠಾ ಸಮಾಜದ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಸಮಾಜದ ಬೇಡಿಕೆ ಈಡೇರುವ ವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಘೋಷಿಸಿದ್ದಾರೆ.  ಪಟ್ಟಣದ ತಮ್ಮ  ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಶಂಕ್ರಪ್ಪಾ  ನೇತೃತ್ವದ ಆಯೋಗ ಮರಾಠಾ ಸಮುದಾಯ ವಾಸಿಸುವ ಪ್ರದೇಶದಲ್ಲಿ ಅಧ್ಯಯನ ನಡೆಸಿ ಮರಾಠರನ್ನು 2ಎಗೆ ಸೇರಿಸುವ ಬೇಡಿಕೆ ಸೂಕ್ತವಾಗಿದೆ ಎಂದು ಹೇಳಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೇ ಆ ಬಳಿಕ ಕಾಂಗ್ರೇಸ್ ಸರ್ಕಾರ ಕೂಡ ಬೇಡಿಕೆ ಈಡೇರಿಸಿಲ್ಲ ಸದ್ಯ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೇಸ್ ಮತ್ತು ಜೆಡಿಎಸ್ ಎರಡು ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮರಾಠರನ್ನು 2ಎಗೆ ಸೇರಿಸುವುದಾಗಿ ಹೇಳಿದ್ದರೂ ಈವರೆಗೆ ಈ ವಿಷಯದ ಬಗ್ಗೆ ಮಾತನಾಡದೆ ಮೌನ ತಾಳಿರುವುದು ಮರಾಠರ ಹೋರಾಟಕ್ಕೆ ಬೆಲೆ ಇಲ್ಲವೇ ಎಂದು ತೀವೃ ಅಸಮಾಧಾನ ಹೋರ ಹಾಕಿದರು.  “ಏಕ ಮರಾಠಾ ಲಾಖ್ ಮರಾಠಾ” ಮೌನ ಕ್ರಾಂತಿಯ ಮೂಲಕ ಸರ್ಕಾರದ ಗಮನ ಸೆಳೆಯಲಾಗಿತ್ತು ಆದರೇ ಲಕ್ಷಾಂತರ ಕನ್ನಡಿಗ ಮರಾಠಿಗರ ಮೌನ ಹೋರಾಟ ಹಾಗೂ ತಾವು ವಿಧಾನ ಪರಿಷತ್‍ನಲ್ಲಿ ಹಲವಾರು ಬಾರಿ ಪ್ರಶ್ನೇ ಮಾಡಿದ್ದರು ಸಹ  ಸರ್ಕಾರದ ಕಿವಿಗೆ ಬಿದ್ದಂತೆ ಕಾಣುತ್ತಿಲ್ಲ. ಇನ್ನೂ ಮುಂದೆ ಹೋರಾಟವನ್ನು ತೀವೃಗೊಳಿಸಲಾಗುವುದು ಅದಕ್ಕೂ ಮುನ್ನವೇ ಮರಾಠರ ಧ್ವನಿಗೆ ಓಗೊಟ್ಟು ಪ್ರವರ್ಗ 2ಎಗೆ ಸೇರಿಸುವಂತೆ ಘೋಟ್ನೇಕರ ಆಗ್ರಹಿಸಿದರು.  ಫಸಲ್ ಬಿಮಾ ಯೋಜನೆಯಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ 28ಕೋಟಿ 66ಲಕ್ಷ ರೂ. ಬೆಳೆ ವಿಮೆ ಬಿಡುಗಡೆಯಾಗಿದ್ದು. ಹಳಿಯಾಳ ಕ್ಷೇತ್ರಕ್ಕೆ 17ಕೋಟಿ 41ಲಕ್ಷ ರೂ. ಮಂಜೂರಿಯಾಗಿ ಈಗಾಗಲೇ ಫಲಾನುಭವಿ ಎಲ್ಲ ರೈತರ ಖಾತೆಗಳಿಗೆ ಹಣ ಜಮಾ ಆಗಿದೆ ಎಂದು ತಿಳಿಸಿರುವ ಜಿಲ್ಲಾ ಮಧ್ಯವರ್ತಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿರುವ ಎಸ್.ಎಲ್.ಘೋಟ್ನೇಕರ ಇದು ಕೇವಲ ಭತ್ತದ ಫಸಲಿನ ಪರಿಹಾರವಾಗಿದ್ದು ಸಂಕಷ್ಟದಲ್ಲಿರುವ ರೈತನಿಗೆ ಸ್ವಲ್ಪ ಮಟ್ಟಿಗೆ ನೀರಾಳರನ್ನಾಗಿಸಿದೆ ಎಂದಿದ್ದಾರೆ.  ಮಾಜಿ ಸಿಎಮ್ ಸಿದ್ದರಾಮಯ್ಯ ಸರ್ಕಾರದ ಸಾಲ ಮನ್ನಾದ ಕೆಡಿಸಿಸಿ ಬ್ಯಾಂಕ್‍ಗೆ ಬರಬೇಕಾದ 300ಕೋಟಿ ರೂ. ಬಾಕಿ ಮೊತ್ತ ತಮ್ಮ ಸತತ ಪ್ರಯತ್ನದಿಂದ ಈಗಾಗಲೇ ಹಣಕಾಸು ಇಲಾಖೆಯಿಂದ 1ಸಾವಿರ ಕೋಟಿ ಬಿಡುಗಡೆಗೊಳಿಸಲಾಗಿದೆ. ಆದರೇ ಅದನ್ನು ತಡೆಹಿಡಿಯಲಾಗಿದ್ದು ಕೂಡಲೇ ಸಂಬಂಧಪಟ್ಟ ಮಂತ್ರಿಗಳು ಕ್ರಮ ಕೈಗೊಂಡು ಅಪೇಕ್ಷ ಬ್ಯಾಂಕ್‍ಗೆ ಹಣ ಜಮಾ ಮಾಡಬೇಕು.  ಇಲ್ಲವಾದಲ್ಲಿ ಸಹಕಾರಿ ಸಂಘಗಳಿಂದ ಪ್ರತಿಭಟನೆ ಎದುರಿಸಬೇಕಾಗಬಹುದು ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ವಿ.ಪ.ಸದಸ್ಯ ಘೋಟ್ನೇಕರ ನೀಡಿದರು.  ಇತ್ತೀಚೆಗೆ ಗ್ರಾಮಸ್ಥರ ಸಹಕಾರದಿಂದ ಮಧ್ಯಪ್ರದೇಶ ಮೂಲದ ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಹಳಿಯಾಳ ಪೋಲಿಸರ ಕಾರ್ಯಕ್ಕೆ ಅಭಿನಂದಿಸಿರುವ ಘೋಟ್ನೇಕರ ಅವರು ಇನ್ನೂ ಮುಂದೆಯೂ ಪೋಲಿಸರು ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಲಿ ಎಂದು ಕರೆ ನಿಡಿದ್ದಾರೆ.  ಸುದ್ದಿಗೊಷ್ಠಿಯಲ್ಲಿ ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಅಶೋಕ ಮೇಟಿ, ಬಾಬು ಮಿರಾಶಿ, ಅಶೋಕ ಘೊಟ್ನೇಕರ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 2ಎಗೆ ಸೇರಿಸುವವರೆಗೆ, ಆರ್ಥಿಕವಾಗಿ, ಉತ್ತರ ಕನ್ನಡ ಜಿಲ್ಲೆಗೆ 28ಕೋಟಿ 66ಲಕ್ಷ ರೂ. ಬೆಳೆ ವಿಮೆ ಬಿಡುಗಡೆ, ಏಕ ಮರಾಠಾ ಲಾಖ್ ಮರಾಠಾ, ಪ್ರವರ್ಗ, ಪ್ರಸ್ತುತ ಸಮ್ಮಿಶ್ರ ಸರ್ಕಾರವು, ಫಸಲ್ ಬಿಮಾ ಯೋಜನೆಯಡಿ, ಮರಾಠಾ ಸಮುದಾಯ, ಮುಂದುವರೆಯಲಿದೆ, ಮೂಲಕ, ಮೌನ ಕ್ರಾಂತಿ, ರಾಜಕೀಯ, ವಿಪ ಸದಸ್ಯ ಎಸ್.ಎಲ್.ಘೋಟ್ನೆಕರ ಎಚ್ಚರಿಕೆ, ಶೈಕ್ಷಣಿಕ, ಸಮಾಜದ ಬೇಡಿಕೆ ಈಡೇರುವ ವರೆಗೆ ಹೋರಾಟ, ಸರ್ಕಾರಗಳು ಪ್ರವರ್ಗ 3ಬಿಯಿಂದ 2ಎಗೆ ಸೇರ್ಪಡೆಗೊಳಿಸಿಲ್ಲ, ಸರ್ಕಾರದ ಗಮನ ಸೆಳೆ, ಹಳಿಯಾಳ ಕ್ಷೇತ್ರಕ್ಕೆ 17ಕೋಟಿ 41ಲಕ್ಷ ರೂ. ಮಂಜೂರಿ, ಹಿಂದೂಳಿದಿರುವ, ಹೋರಾಟ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar