• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳ ಪುರಸಭೆಯಲ್ಲಿಕಮಲ ಅರಳುವುದೂ ಅಥವಾ ಕೈ ಮೇಲುಗೈ ಸಾಧಿಸುವುದೂ?ಸೋಲು ಗೆಲುವಿನ ಲೆಕ್ಕಾಚಾರ ಬೆಟ್ಟಿಂಗ್ ಇಳಿದ ಹಲವರು

September 2, 2018 by Yogaraj SK Leave a Comment

ಹಳಿಯಾಳ:- ಕುಸ್ತಿಯ ತವರೂರೆಂದು, ಕುಸ್ತಿ ಕ್ರೀಡೆಯಲ್ಲಿ ಹೇಗೆ ಹಳಿಯಾಳ ಹೆಸರುವಾಸಿಯೋ ಹಾಗೇ ರಾಜಕೀಯ ರಂಗದಲ್ಲೂ ಹೆಸರು ಮಾಡಿರುವ ಹಳಿಯಾಳ ಕ್ಷೇತ್ರದಲ್ಲಿ ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ಚುನಾವಣೆಗೆ ಮತದಾನ ಏನೋ ಆಗಿದೆ. ಆದರೇ ಫಲಿತಾಂಶಕ್ಕೂ ಮುನ್ನವೇ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಅಧಿಕಾರಕ್ಕೆ ಬರುವ ಪಕ್ಷ ಹಾಗೂ ಯಾವ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬ ಬಗ್ಗೆ ಬೆಟ್ಟಿಂಗ್ ಕೂಡ ಜೊರಾಗಿ ನಡೆದಿದೆ.
ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿರುವ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಒಮ್ಮೆ ಸೋಲಿಸಿ ಶಾಸಕರಾಗಿದ್ದ ಸುನೀಲ್ ಹೆಗಡೆ ಹಳಿಯಾಳ ವಿಧಾನ ಸಭಾ ಕ್ಷೇತ್ರದಲ್ಲಿ ಬಲಿಷ್ಠ ನಾಯಕರಾಗಿ ಬೆಳೆದಿದ್ದು ಅಪಾರ ಜನಬೆಂಬಲ ಹೊಂದಿರುವ ಸುನೀಲ್ ಹೆಗಡೆ ಕಾಂಗ್ರೇಸ್‍ನ ಭದ್ರಕೋಟೆಯಾಗಿದ್ದ ಹಳಿಯಾಳದಲ್ಲಿ ಒಮ್ಮೆ ಜೆಡಿಎಸ್ ಪಕ್ಷವನ್ನು ಶೂನ್ಯದಿಂದ ಅಧಿಕಾರಕ್ಕೆ ತರುವಲ್ಲಿ ಸಫಲವಾಗಿ ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಹಾಲಿ ಕುಮಾರಸ್ವಾಮಿ ಅವರ ಆಪ್ತರಲ್ಲೂ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಆದರೇ ಆ ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಸೇರಿ ಹಳಿಯಾಳ ಭಾಗದಲ್ಲಿ 3ನೇ ಸ್ಥಾನದಲ್ಲಿದ್ದ ಬಿಜೆಪಿಯನ್ನು ಸಂಘಟಿಸಿ ಸದ್ಯ ಬಲಿಷ್ಠ ವಿರೋಧ ಪಕ್ಷವಾಗಿ ಬೆಳೆಸಿದ್ದಾರೆ ಅಲ್ಲದೇ ಈ ಬಾರಿ ಪ್ರಥಮ ಬಾರಿಗೆ ಹಳಿಯಾಳ ಪುರಸಭೆ ಚುನಾವಣೆಯನ್ನು ಬಿಜೆಪಿ ಪಕ್ಷ ಅವರ ಹಾಗೂ ಅವರ ತಂದೆ ಮಾಜಿ ವಿಪ ಸದಸ್ಯ ವಿಡಿ ಹೆಗಡೆ ಸಾರಥ್ಯದಲ್ಲಿ ಎದುರಿಸಿದ್ದು ಪ್ರಥಮ ಬಾರಿಗೆ ಹಳಿಯಾಳ ಪುರಸಭೆಯಲ್ಲಿ ಕಮಲವನ್ನು ಅರಳಿಸಿ ಶೂನ್ಯದಿಂದ ಅಧಿಕಾರಕ್ಕೆ ತರಲು ಕಾಂಗ್ರೇಸ್‍ನೊಂದಿಗೆ ತೀವೃ ಪೈಪೋಟಿ ನೀಡಿದ್ದು ಬಹುಮತ ಸಾಧಿಸಿ ಅಧಿಕಾರದ ಗದ್ದುಗೆಯಲ್ಲಿ ವಿರಾಜಮಾನವಾಗುವ ವಿಶ್ವಾಸವನ್ನು ಈಗಲೂ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಮಾಜಿ ಶಾಸಕ ಸುನೀಲ್ ಹೆಗಡೆ ಕಟ್ಟಾ ವಿರೋಧಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಈ ಬಾರಿ ಚುನಾವಣೆಯ ನೇತೃತ್ವವನ್ನು ನಿಭಾಯಿಸಿದ್ದು. ಮತ್ತೇ ಅಧಿಕಾರಕ್ಕೆ ಬರುವುದಾಗಿ ತೀವೃ ಹುಮ್ಮಸ್ಸಿನಲ್ಲಿದ್ದಾರೆ.
ತೀವೃ ಪ್ರತಿಷ್ಠೇಯ ಕಣವಾಗಿ ಗುರುತಿಸಿಕೊಂಡಿದ್ದ ಈ ಬಾರಿಯ ಹಳಿಯಾಳ ಪುರಸಭೆ ಚುನಾವಣೆ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ನಡುವಿನ ಕಾಳಗ ಎಂದೇ ಕರೆಯಲಾಗುತ್ತಿದ್ದು. ಸೋಮವಾರ ದಿ.3 ರಂದು ಹೋರಬಿಳಲಿರುವ ಫಲಿತಾಂಶದಲ್ಲಿ ಈ ಇಬ್ಬರು ಪೈಲ್ವಾನರಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆಂದು ಕಾದು ನೋಡಬೇಕಿದೆ.
ಈ ಹಿಂದೆ ನಡೆದ ವಿಧಾನ ಸಭೆ ಚುನಾವಣೆ ಮತದಾನದ ಬಳಿಕವು ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರ ಅವರ ಬೆಂಬಲಿಗರು, ಕಾರ್ಯಕರ್ತರು ಹಾಗೂ ಮುಖಂಡರು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಭಾರಿ ಪ್ರಮಾಣದಲ್ಲಿ ಶರತ್(ಬೆಟ್ಟಿಂಗ್) ಕಟ್ಟಿದ್ದು ಸುದ್ದಿಯಾಗಿತ್ತು. ಹಾಗೆಯೇ ಈ ಪುರಸಭೆ ಚುನಾವಣೆ ಮತದಾನದ ಬಳಿಕವು ಅದೇ ರೀತಿ ತೆರೆ ಮರೆಯಲ್ಲಿ ಯಾವ ಪಕ್ಷ ಬಹುಮತ ಸಾಧಿಸಿ ಅಧಿಕಾರಕ್ಕೆ ಬರಲಿದೆ ಹಾಗೂ ಯಾವ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬ ಬಗ್ಗೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ ಎಂಬ ಮಾತುಗಳು ಪಟ್ಟಣದಲ್ಲಿ ತೀವೃ ಚರ್ಚೆಯಾಗುತ್ತಿವೆ.
ಆದರೇ ತನ್ನ ಗುಟ್ಟು ಬಿಟ್ಟುಕೊಡದ ಮತದಾರ ಪ್ರಭು ಯಾರಿಗೆ ಮತ ಚಲಾಯಿಸಿದ್ದಾನೆ ? ಯಾವ ಪಕ್ಷ ಅಧಿಕಾರದಲ್ಲಿ ಬರಲಿ ಎನ್ನುವ ಬಯಕೆ ಆತನದ್ದಾಗಿದೆ ಎಂಬುದು ಸೋಮವಾರ ಪಟ್ಟಣದ ಶಿವಾಜಿ ವಿದ್ಯಾಲಯದಲ್ಲಿ ನಡೆಯಲಿರುವ ಮತ ಏಣಿಕೆ ಫಲಿತಾಂಶದ ಬಳಿಕ ಹೊರಬಿಳಲಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Trending Tagged With: ?, ಕಮಲ ಅರಳುವುದೂ, ಕುಸ್ತಿ ಕ್ರೀಡೆಯಲ್ಲಿ, ಕುಸ್ತಿಯ ತವರೂರೆಂದು, ಕೈ ಮೇಲುಗೈ ಸಾಧಿಸುವುದೂ, ತರುವಲ್ಲಿ, ತೀವೃ ಪೈಪೋಟಿ, ಬೆಟ್ಟಿಂಗ್ ಇಳಿದ ಹಲವರು, ಬೆಟ್ಟಿಂಗ್ ಕೂಡ ಜೊರಾಗಿ, ರಾಜಕಾರಣ, ರಾಜಕೀಯ ರಂಗದಲ್ಲೂ, ವಾರ್ಡಗಳಿಗೆ ಚುನಾವಣೆ, ಶೂನ್ಯದಿಂದ ಅಧಿಕಾರಕ್ಕೆ, ಸದ್ಯ ಬಲಿಷ್ಠ ವಿರೋಧ ಪಕ್ಷ, ಸಫಲವಾಗಿ ರಾಜ್ಯ, ಸೋಲು ಗೆಲುವಿನ ಲೆಕ್ಕಾಚಾರ, ಹಳಿಯಾಳ ಪುರಸಭೆಯಲ್ಲಿ, ಹಳಿಯಾಳ ಹೆಸರುವಾಸಿಯೋ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar