• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದಶಕಗಳಿಂದ ಅಕ್ರಮವಾಗಿ ಹಳಿಯಾಳದಲ್ಲಿ ಕಾರ್ಯನಿರ್ವಹಿಸುತ್ತಿದೆ ಗೋವಧಾಲಯ( ಕಸಾಯಿಖಾನೆ)ಕಣ್ಮುಚ್ಚಿ ಕುಳಿತಿವೆ ಕ್ರಮ ಕೈಗೊಳ್ಳಬೇಕಾದ ಇಲಾಖೆಗಳು

September 8, 2018 by Yogaraj SK Leave a Comment

 

Haliyal KASAYI KHANE

ಹಳಿಯಾಳ : ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿರುವಾಗಲು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಹೃದಯ ಭಾಗದ ಜನನಿಬಿಡ ಪ್ರದೇಶದಲ್ಲಿ ಬಹಿರಂಗ ಹಾಗೂ ನಿರಂತರವಾಗಿ ಗೋಹತ್ಯೆ ನಡೆಯುತ್ತಿದೆ. ಆದರೇ ಈ ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸಂಬಂಧಪಟ್ಟ ಇಲಾಖೆಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಹಳಿಯಾಳದ ವಿವಿಧ ಹಿಂದೂಪರ ಸಂಘಟನೆಗಳು ಹಾಗೂ ಕರವೇ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.
ಕಳೆದ ಹಲವು ದಶಕಗಳಿಂದ ಗೋಹತ್ಯೆ, ಕಾನೂನು ಬಾಹಿರವಾಗಿ ನಡೆಸಲಾಗುತ್ತಿದ್ದರು ಸಹ ಈ ವರೆಗೆ ಯಾವುದೇ ರೀತಿಯ ಕ್ರಮ ಕೈಗೋಳ್ಳಲಾಗಿಲ್ಲವೆಂಬುದು ಅಷ್ಟೇ ಸತ್ಯ. ಇದು ಜನತೆಯ ತೀವೃ ಅಸಮಾಧಾನಕ್ಕೂ ಕಾರಣವಾಗಿದೆ.

ಎಲ್ಲೆಂದರಲ್ಲಿ ದನದ ಮಾಂಸ, ಎಲುವುಗಳು :- ಪಟ್ಟಣದ ಹೃದಯಭಾಗ ಎಂದು ಕರೆಯಲಾಗುವ ಮುಖ್ಯಬೀದಿ, ಬಜಾರ್, ಬಸ್ ನಿಲ್ದಾಣ, ಆನೆಗುಂದಿ ಬಡಾವಣೆ, ಚಲವಾದಿಗಲ್ಲಿ ಸೇರಿದಂತೆ ಮೇದಾರಗಲ್ಲಿ ಒಳಗೊಂಡ ಜನನಿಬಿಡ ಪ್ರದೇಶದ ಮಧ್ಯೆದಲ್ಲೇ ಇರುವ ಕಳೆದ 2 ದಶಕಗಳಿಂದ ಅವ್ಯಾಹತವಾಗಿ ಗೋ ಹತ್ಯೆಯನ್ನು ಮಾಡುವ ಕಸಾಯಿ ಖಾನೆಯು ಕಾರ್ಯ ನಿರ್ವಹಿಸುತ್ತಿದ್ದು. ಇದರಿಂದ ಪ್ರಮುಖವಾಗಿ ಪರಿಸರಕ್ಕೆ ಹಾನಿಯಾಗುತ್ತಿರುವುದಲ್ಲದೆ, ಗೋ ಮಾಂಸದ ಆಸೆಗಾಗಿ ಬೆನ್ನು ಬಿದ್ದ ಬಿಡಾಡಿ ನಾಯಿಗಳು ಮಾಂಸ ತಿನ್ನುವ ನೆಪದಲ್ಲಿ ದನಗಳ ಎಲುವುಗಳನ್ನು ತಂದು ಅಲ್ಲಲ್ಲಿ ವಿಷೇಶವಾಗಿ ದೇವಸ್ಥಾನ, ಮನೆಗಳ ಮುಂದೆ, ಸಮಿಪದಲ್ಲಿ ಬಿಟ್ಟು ಹೋಗುತ್ತಿರುವುದರಿಂದ ಜನತೆಯ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುತ್ತಿದೆ.

Haliyal KASAYI KHANE

 

ಅನಾರೋಗ್ಯದ ಬೀಡು:- ಗೋವು, ಎಮ್ಮೆ, ಕರು, ಎತ್ತುಗಳ ಹತ್ಯೆ ಇಲ್ಲಿ ನೀರಂತರವಾಗಿ ನಡೆಯುತ್ತಿದ್ದು. ಈ ಕಸಾಯಿಖಾನೆಗಳ ಮುಂದಿನ ಗಟಾರಗಳಿಂದ ರಕ್ತದ ಕೊಡಿಯು ಹರಿಯುತ್ತಿದ್ದು ಅಲ್ಲಲ್ಲಿ ಗಟಾರಗಳು ಹುಳಿನಿಂದ ತುಂಬಿರುವುದರಿಂದ ಇಲ್ಲಿಂದ ಹರಿಯುವ ಮಲೀನ ರಕ್ತದಿಂದ ಕೂಡಿದ ನೀರು ನಿಂತು ರೋಗಗಳು ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಅಲ್ಲದೇ ಗಬ್ಬು ವಾಸನೆ ಪರಿಸರದ ತುಂಬೆಲ್ಲ ಹರಡುತ್ತಿದೆ. ಇನ್ನೂ ದನಗಳ ಮಾಂಸಗಳ ಪಳೆಯುಳಿಕೆಗಳು ಹಾಗೂ ಅದರ ಹತ್ಯೆಯ ನಂತರ ಶರಿರದಿಂದ ಹೊರ ಬಿಳುವ ಕಲ್ಮಶ ಪದಾರ್ಥದ ಕ್ರೂಡಿಕರಣದಿಂದ ಹರಡುವಂತಹ ದುರ್ವಾಸನೆ ವಾಯುಮಾಲಿನ್ಯ ಪರಿಣಾಮವಾಗಿ ಹಬ್ಬುವಂತಹ ವಿವಿಧ ಪ್ರಕಾರಗಳ ರೋಗಗಳು ಜನರಿಗೆ ಬಾದಕ ಗೋಳಿಸುತ್ತಿರುವುದು. ಈ ಭಾಗವೆಲ್ಲ ಅನಾರೋಗ್ಯದ ಬೀಡಾಗಿ ಪರಿವರ್ತನೆಗೊಂಡಿದ್ದು ಜನತೆಯನ್ನು ಕಂಗಾಲಾಗಿಸಿದೆ.

27 hly 6

 

ಕ್ರಮವಿಲ್ಲ :- ಈ ಎಲ್ಲ ಕಾರಣಗಳಿಂದ ಈ ಪರಿಸರದಲ್ಲಿ ವಾಸಿಸುತ್ತಿರುವ ಜನರು ಕಸಾಯಿ ಖಾನೆ ಸ್ಥಳಾಂತರಗೊಳಿಸಿ ಅಥವಾ ಸ್ಥಗಿತಗೊಳಿಸಿ ಎಂದು ನೂರಾರು ಬಾರಿ ಲಿಖಿತ ಮನವಿಗಳನ್ನು, ಪತ್ರಿಕಾ ಹೇಳಿಕೆಗಳನ್ನು ನಿಡಿದ್ದಲ್ಲದೆ ಪ್ರತಿಭಟನೆ ಕೂಡ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜನತೆಯ ಕಣ್ಣೊರೆಸುವ ತಂತ್ರ ಬಳಸಿದ ತಾಲೂಕಾಡಳಿತ ಕಸಾಯಿ ಖಾನೆಗೆ ಬೀಗ ಏನೋ ಹಾಕಿತ್ತು ಆದರೇ ಅದು ಕೆಲವೆ ಕೆಲವು ತಿಂಗಳು ಮಾತ್ರ ಜಾರಿಯಾಯಿತು. ತದ ನಂತರ ಕಸಾಯಿಗಳು ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿದ್ದು ಈ ಭಾಗದಲ್ಲೇ ಮನೆಗಳ ಮುಂದೆ ಅವ್ಯಾಹತವಾಗಿ ಗೋ ಹತ್ಯೆ ನಡೆಸುತ್ತಿದ್ದಾರೆ. ಈ ಬಗ್ಗೆ ಜನತೆ ತಾಲೂಕಾಡಳಿತ, ಪಟ್ಟಣ ಪಂಚಾಯತಿ ಹಾಗೂ ಈ ಭಾಗದ ಪ.ಪಂ. ಸದಸ್ಯರು, ಅಧ್ಯಕ್ಷರ ಗಮನಕ್ಕೆ ತಂದರೂ ಈವರೆಗೆ ಯಾವುದೇ ರೀತಿಯ ಕ್ರಮ ಜರುಗಿಸಲಾಗುತ್ತಿಲ್ಲದಿರುವುದು ಜನತೆಯ ದುರದೃಷ್ಟವೇ ಸರಿ.

ಪ್ರತಿಭಟನೆ ಎಚ್ಚರಿಕೆ :- ಈ ಅನಧಿಕೃತ ಕಸಾಯಿಖಾನೆಯ ಬಗ್ಗೆ ಪಟ್ಟಣದ ವಿಶ್ವ ಹಿಂದೂ ಪರಿಷದ್, ಹಿಂದೂ ಜನಜಾಗೃತಿ ಸಮೀತಿ, ಶ್ರೀರಾಮ ಸೇನೆ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನೀಕರು ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಕ್ರಮ ಜರುಗಿಸದೆ ಇದ್ದರೇ ಪ್ರತಿಭಟನೆ ನಡೆಸುವ ತಯಾರಿಯಲ್ಲಿದ್ದಾರೆ.

Haliyal KASAYI KHANE Haliyal KASAYI KHANE

 

 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: ಆನೆಗುಂದಿ ಬಡಾವಣೆ, ಎಲುವುಗಳು, ಎಲ್ಲೆಂದರಲ್ಲಿ ದನದ ಮಾಂಸ, ಕಣ್ಮುಚ್ಚಿ ಕುಳಿತಿವೆ, ಕಲ್ಮಶ ಪದಾರ್ಥ, ಕಸಾಯಿ ಖಾನೆ, ಕ್ರಮ ಕೈಗೊಳ್ಳಬೇಕಾದ ಇಲಾಖೆಗಳು, ಖಸಾಯಿಖಾನೆ, ಗಬ್ಬು ವಾಸನೆ, ಗೋವಧಾಲಯ, ಗೋಹತ್ಯೆ ನಿಷೇಧ ಕಾನೂನು ಜಾರಿ, ಚಲವಾದಿ, ಜಾಣ ಕುರುಡುತನ, ದಶಕಗಳಿಂದ ಅಕ್ರಮವಾಗಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ, ನಿರಂತರವಾಗಿ ಗೋಹತ್ಯೆ, ಪರಿಸರದ ತುಂಬೆಲ್ಲ, ಬಜಾರ್, ಬಸ್ ನಿಲ್ದಾಣ, ಬಹಿರಂಗ, ಮುಖ್ಯಬೀದಿ, ಹತ್ಯೆಯ ನಂತರ ಶರಿರದಿಂದ, ಹಳಿಯಾಳದಲ್ಲಿ ಕಾರ್ಯನಿರ್ವಹಿಸುತ್ತಿದೆ, ಹೃದಯ ಭಾಗದ ಜನನಿಬಿಡ ಪ್ರದೇಶ, ಹೊರ ಬಿಳುವ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...