ಹಳಿಯಾಳ:- ವಿಶ್ವ ಹಿಂದೂ ಪರಿಷದ್ ಭಜರಂಗದಳ ವತಿಯಿಂದ ಇದೆ ಪ್ರಥಮ ಬಾರಿಗೆ ಹಳಿಯಾಳದಲ್ಲಿ ಹನುಮ ಮಾಲಾವೃತ ಆಚರಿಸಲಾಗಿದೆ. ಸುಮಾರು 25 ಜನ ಯುವಕರು ಹನುಮ ಮಾಲೆ ಧರಿಸಿ ವೃತವನ್ನು ಆಚರಿಸಿದ್ದು ಮತ್ತೊಂದು ಆಧ್ಯಾತ್ಮಿಕ ಕಾರ್ಯಕ್ಕೆ ಹಳಿಯಾಳ ಸಾಕ್ಷಿಯಾಗಿದೆ.
ಹನುಮ ಮಾಲಾ ಧಿಕ್ಷಾ ಕಾರ್ಯಕ್ರಮದ ನಿಮಿತ್ತ ಪಟ್ಟಣದಲ್ಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಸಂಕೀರ್ತನಾ ಯಾತ್ರೆ ನಡೆಸಿದ ಮಾಲಾಧಾರಿಗಳು ಪಟ್ಟಣದ ಗಣೇಶ ಕಲ್ಯಾಣ ದೇವಸ್ಥಾನ ಬಳಿಕ ಧಾರವಾಡ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಸಮಾವೇಶಗೊಂಡು ದಾಂಡೇಲಿಯ ಮಾಲಾಧಾರಿಗಳೊಂದಿಗೆ ಕೊಪ್ಪಳದ ಗಂಗಾವತಿಯ (ಕಿಷ್ಕಿಂದಾ) ಅಂಜನಾದ್ರಿ ಬೆಟ್ಟಕ್ಕೆ ಆಂಜನೆಯನ ದರ್ಶನ ಪಡೆಯಲು ತೆರಳಿದರು.
Leave a Comment