• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ನಿಗಮ ಅಥವಾ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ – ಹಳಿಯಾಳ ತಾಲೂಕಾ ಕ್ಷತ್ರಿಯ ಮರಾಠಾ ಪರಿಷತ್ ಆಗ್ರಹ.

January 8, 2019 by Yogaraj SK Leave a Comment

ಹಳಿಯಾಳ :- ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಸರ್ಕಾರ ರಚನೆಯಾದಾಗ ಮರಾಠಾ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಈವರೆಗೆ ಸಿಕ್ಕಿಲ್ಲ ಎಂದು ಹಳಿಯಾಳ ಮರಾಠಾ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದು, ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ಮೇರವಣ ಗೆ ನಡೆಸಿ ಮರಾಠಾ ಸಮುದಾಯದ ಜನಪ್ರತಿನಿಧಿಯಾದ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಗೆ ನಿಗಮ ಅಥವಾ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವಂತೆ ಲಿಖಿತ ಮನವಿಯ ಮೂಲಕ ಆಗ್ರಹಿಸಿದ್ದಾರೆ.
ಪ್ರತಿಭಟನಾ ಮೆರವಣ ಗೆ-ಮನವಿ ಸಲ್ಲಿಕೆ:– ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್‍ನ ನೇತೃತ್ವದಲ್ಲಿ ಪಟ್ಟಣದ ಮರಾಠಾ ಭವನದಿಂದ ಮರಾಠಾ ಸಮುದಾಯದವರು ಪ್ರತಿಭಟನಾ ಮೇರವಣ ಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೇರವಣ ಗೆ ನಡೆಸಿ ಇಲ್ಲಿಯ ಶಿವಾಜಿ ವೃತ್ತಕ್ಕೆ ಆಗಮಿಸಿ ಅಶ್ವಾರೂಢ ಶಿವಾಜಿ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮಿನಿ ವಿಧಾನ ಸೌಧದ ಆವರಣದಲ್ಲಿ ಧರಣ ನಡೆಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ ಸಲ್ಲಿಸಿದರು.

MARATHA samaj pratibhatane - MLC ge nigama mandali stana nidi aagraha
ರಾಜಕೀಯವಾಗಿ ನಿರ್ಲಕ್ಷ್ಯ:- ಮನವಿಯಲ್ಲಿ ರಾಜ್ಯದಲ್ಲಿ 45 ಲಕ್ಷ ಮರಾಠಾ ಸಮುದಾಯದವರಿದ್ದಾರೆ ಅಲ್ಲದೇ ವಿಶೇಷವಾಗಿ ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಶೇ.75 ರಷ್ಟು ಮರಾಠರಿದ್ದರೂ ರಾಜಕೀಯವಾಗಿ ನಿರ್ಲಕ್ಷಿಸಲ್ಪಟ್ಟಿದ್ದಾರೆ. ರಾಜ್ಯದಲ್ಲಿ ಅನೇಕ ಸರ್ಕಾರಗಳು ರಚನೆಯಾದ ಸಂದರ್ಭದಲ್ಲಿ ಕೂಡ ಮರಾಠಾ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಘೊಟ್ನೇಕರ ಅವರಿಗೆ ನಿಗಮ ಅಥವಾ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿ:-
ಸಚಿವ ಆರ್.ವಿ.ದೇಶಪಾಂಡೆ ಅವರು ಹಳಿಯಾಳ ಕ್ಷೇತ್ರದಿಂದ 8 ಬಾರಿ ಆಯ್ಕೆಯಾಗುವಲ್ಲಿ ಸಿಂಹಪಾಲು ಮರಾಠಾ ಸಮುದಾಯದ ಪಾತ್ರ ಬಹುದೊಡ್ಡದಿದೆ. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ದೇಶಪಾಂಡೆ ಅವರ ಬೆನ್ನೆಲುಬಾಗಿ ನಿಂತಿದ್ದು ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ಕ್ಷೀಪ್ರಗತಿಯಲ್ಲಿ ನಡೆಯಲು ಕಾರಣ ಭೂತರಾಗಿದ್ದಾರೆ. ಎಲ್ಲ ರಂಗಗಳಲ್ಲಿಯೂ ಅತಿ ಹಿಂದೂಳಿದ ರೈತಾಪಿ ಸಮಾಜವಾಗಿರುವ ಮರಾಠಾ ಸಮಾಜದ ಏಳ್ಗೆಗಾಗಿ ಸರ್ಕಾರದಲ್ಲಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲೇಬೇಕು ಎಂದು ಒತ್ತಾಯಿಸಿರುವ ಪ್ರತಿಭಟನಾಕಾರರು ಘೋಟ್ನೇಕರ ಅವರಿಗೆ ಸರ್ಕರದ ಯಾವುದೇ ನಿಗಮ ಅಥವಾ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿ ಮರಾಠಾ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ಆರ್.ವಿ.ದೇಶಪಾಂಡೆ ಅವರಲ್ಲಿ ಮನವಿಯ ಮೂಲಕ ಆಗ್ರಹಿಸಲಾಗಿದೆ.

watermarked 7 hly 1

ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್‍ನ ಉಪಾಧ್ಯಕ್ಷೆ ಮಂಗಲಾ ಕಶೀಲಕರಮ, ಬಿಪಿ ಶಹಾಪೂರಕರ, ಪ್ರಮುಖರಾದ ಎಲ್.ಎಸ್.ಅರಿಶೀನಗೇರಿ, ಅಪ್ಪಾರಾವ ಪೂಜಾರಿ, ಯಲ್ಲಪ್ಪಾ ಮಾಲವನಕರ, ಗಣಪತಿ ಬೆಕಣ , ತುಕಾರಾಮ ಗೌಡಾ, ಮಂಜುನಾಥ ಅಳ್ನಾವರಕರ, ಅನಿಲ ಚವ್ವಾಣ, ಎಮ್.ವಿ.ಘಾಡಿ, ಸುಂದರ ಕಾನಕತ್ರಿ, ಸಂತೋಷ ಮಿರಾಶಿ, ಜೀವಪ್ಪ ಭಂಡಾರಿ, ಗೊಕುಳ ಶಿರೋಡಕರ, ಅಶೋಕ ಘೋಟ್ನೇಕರ ಮೊದಲಾವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅನುಪಸ್ಥಿತಿ :– ಇನ್ನೂ ಪ್ರಮುಖವಾಗಿ ಪ್ರತಿಭಟನೆಯಲ್ಲಿ ಮರಾಠಾ ಸಮುದಾಯದವರಾದ ಕಾಂಗ್ರೇಸ್ ಪಕ್ಷದಲ್ಲಿ ಜನಪ್ರತಿನಿಧಿ ಹಾಗೂ ಮುಖಂಡರಾಗಿರುವ ಅನೇಕ ಪ್ರಮುಖರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Trending Tagged With: ಅನೇಕ ಸರ್ಕಾರಗಳು ರಚನೆಯಾದ ಸಂದರ್ಭ, ಅಶ್ವಾರೂಢ ಶಿವಾಜಿ ಪುಥ್ಥಳಿಗೆ ಮಾಲಾರ್ಪಣೆ, ಘೊಟ್ನೇಕರ ಅವರಿಗೆ ನಿಗಮ ಅಥವಾ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿ, ಪ್ರತಿಭಟನಾ ಮೆರವಣ ಗೆ-ಮನವಿ ಸಲ್ಲಿಕೆ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿ, ಮರಾಠಾ ಭವನದಿಂದ ಮರಾಠಾ ಸಮುದಾಯ, ರಾಜಕೀಯವಾಗಿ ನಿರ್ಲಕ್ಷ್ಯ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ, ಹಳಿಯಾಳ ತಾಲೂಕಾ ಕ್ಷತ್ರಿಯ ಮರಾಠಾ ಪರಿಷತ್ ಆಗ್ರಹ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...