• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

1994 ರಲ್ಲೇ ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಯವರ ಪಾದ ಹಳಿಯಾಳಕ್ಕೂ ಸ್ಪರ್ಶಿಸಿತ್ತು – ದೇವರ ಭೆಟಿಯ ನೆನಪುಗಳನ್ನು ಬಿಚ್ಚಿಟ್ಟ ಚಂದ್ರಕಾಂತ ಅಂಗಡಿ.

January 22, 2019 by Yogaraj SK 1 Comment

watermarked 22 hly 1 1

ಹಳಿಯಾಳ:- ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣಕ್ಕೂ ಭೆಟಿ ನೀಡಿದ್ದರು ಎನ್ನುವುದು ಈಗ ಇತಿಹಾಸವೇ ಸರಿ.
ಪ್ರಸ್ತುತ ಬಸವ ಕೇಂದ್ರದ ಅಧ್ಯಕ್ಷ ಹಾಗೂ ಅಂಗಡಿ ಗ್ಯಾಸ್ ಸೇವಾ ಸಂಸ್ಥೆಯ ಮಾಲಿಕ ಚಂದ್ರಕಾಂತ ಅಂಗಡಿ ಅವರ ನಿವಾಸಕ್ಕೆ 1994ರಲ್ಲಿ ಶ್ರೀಗಳು ಆಗಮಿಸಿದ್ದರು. ಅಂದು ಅವರನ್ನು ಪಟ್ಟಣದ ಹಲವು ಗಣ್ಯರು ಭೆಟಿ ನೀಡಿ ಆಶೀರ್ವಾದ ಪಡೆದಿದ್ದರು ಎಂದು ಅಂಗಡಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
1994ರಲ್ಲಿ ಜಿಲ್ಲೆಯ ಜೋಯಿಡಾದ ಪುಣ್ಯಕ್ಷೇತ್ರ ಉಳವಿ ಚೆನ್ನಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀಗಳು ದೇವರ ದರ್ಶನ ಪಡೆದು. ಅಲ್ಲಿಂದ ನೆರವಾಗಿ ಸಾಯಂಕಾಲದ ಹೊತ್ತಿಗೆ ಹಳಿಯಾಳ ಪಟ್ಟಣದ ಧಾರವಾಡ ರಸ್ತೆಯ ಎಪಿಎಮ್‍ಸಿ ಪಕ್ಕದಲ್ಲಿರುವ ಅಂಗಡಿ ಅವರ ಮನೆಗೆ ಭೇಟಿ ನೀಡಿದರು.

Shivakumar swamiji haliyal visit
ಈ ಸಂದರ್ಭದಲ್ಲಿ ಶ್ರೀಗಳನ್ನು ಸನ್ಮಾನಿಸಿ ಗೌರವಿಸಲಾಗಿತ್ತು. ಬಳಿಕ ಶ್ರೀಗಳು ಇಲ್ಲಿ ಇಷ್ಟಲಿಂಗ ಪೂಜೆಯನ್ನು ನೆರವೆರಿಸಿಕೊಂಡು ಬಂದ ಭಕ್ತರಿಗೆ ದರ್ಶನ ನೀಡಿ ಬಳಿಕ ಧಾರವಾಡ-ಹುಬ್ಬಳ್ಳಿ ಮಾರ್ಗವಾಗಿ ತುಮಕೂರಿಗೆ ತೆರಳಿದ್ದರು.
ಚಂದ್ರಕಾಂತ ಅವರ ಸಂಬಂಧಿ ನಿವೃತ್ತ ಎಸ್ಪಿಯಾಗಿದ್ದ ಸಿದ್ದಗಂಗಾ ಮಠದ ಆಡಳಿತಾಧಿಕಾರಿಯಾಗಿದ್ದ ದಿ.ಎಸ್‍ಎಸ್ ಹಸಬಿ ಅವರು ಅಂದು ಶ್ರೀಗಳು ಹಳಿಯಾಳಕ್ಕೆ ಭೇಟಿ ನೀಡಲು ಕಾರಣ ಕರ್ತರಾಗಿದ್ದರು. ಅವರು ಕೂಡ ಕಳೆದ ವರ್ಷ ಲಿಂಗೈಕ್ಯರಾಗಿದ್ದಾರೆಂದು ತಿಳಿಸಿದ ಅಂಗಡಿ ಅಂದು ಶ್ರೀಗಳ ದರ್ಶನ ಪಡೆದ ಅನೇಕರು ಇಂದು ಉನ್ನತ ಮಟ್ಟದ ಅಧಿಕಾರಿಗಳಾಗಿರುವುದು ನಿಜಕ್ಕೂ ಅಂದು ದೇವರೇ ನಮ್ಮ ಮನೆಗೆ ಆಗಮಿಸದಂತೆ ಭಾಸವಾಗಿತ್ತು ಎಂದು ತಮ್ಮ ಅನುಭವ ಮಾಧ್ಯಮದವರೊಂದಿಗೆ ಹಂಚಿಕೊಂಡರು.

Shivakumar swamiji haliyal visit
ಅಂದು ಶ್ರೀಗಳನ್ನು ಭೇಟಿ ಮಾಡಿದ್ದ ಪುಟ್ಟ ಬಾಲಕಿಯಾಗಿದ್ದ ಸವಿತಾ ಹೂಗಾರ ಇಂದು ಗುಲ್ಬರ್ಗಾ ಪೋಲಿಸ್ ವರಿಷ್ಠಾಧಿಕಾರಿಯಾಗಿದ್ದಾರೆ. ಉಲ್ಲಾಸ ಅಂಗಡಿ ಲಂಡನ್‍ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆಂದರು. ಅಂದು ಶ್ರೀಗಳು ಭೇಟಿ ನೀಡಿದ ಸಂದರ್ಭದಲ್ಲಿ ಇಂದಿನ ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಶೀವುದೇವ ದೇಸಾಯಿಸ್ವಾಮಿ, ಖ್ಯಾತ ವಕೀಲರಾದ ಮಹಾದೇವಿ, ಪ್ರಕಾಶ ಅಂಗಡಿ ಇನ್ನಿತರರು ಇದ್ದರು ಎಂದು ಹೇಳಿದರು.

watermarked 22 hly 4 1 watermarked 22 hly 5

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: 1994 ರಲ್ಲೇ ನಡೆದಾಡುವ ದೇವರು, Shivakumar swamiji haliyal visit, the moonlight shop, Thousand Dasohi Siddaganga Math, touched the feet of Shiva Kumaraswamy's feet, touching God in 1994, which unleashed the memories of God's presence, ಇಷ್ಟಲಿಂಗ ಪೂಜೆ, ಉಳವಿ ಚೆನ್ನಬಸವೇಶ್ವರ ದೇವಸ್ಥಾನ, ಜೋಯಿಡಾದ ಪುಣ್ಯಕ್ಷೇತ್ರ, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠ, ದೇವರ ಭೆಟಿಯ ನೆನಪುಗಳನ್ನು ಬಿಚ್ಚಿಟ್ಟ ಚಂದ್ರಕಾಂತ ಅಂಗಡಿ, ಶತಾಯುಷಿ, ಶಿವಕುಮಾರ ಸ್ವಾಮೀಜಿಯವರ ಪಾದ ಹಳಿಯಾಳಕ್ಕೂ ಸ್ಪರ್ಶಿಸಿತ್ತು, ಹಲವು ಗಣ್ಯರು ಭೆಟಿ ನೀಡಿ ಆಶೀರ್ವಾದ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Comments

  1. Vishnu Nachnekar says

    January 22, 2019 at 10:51 pm

    Oh super

    Reply

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...