• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸರ್ವೋಚ್ಚ ನ್ಯಾಯಾಲಯ ತೀರ್ಪು ಮರು ಪರಿಶೀಲನೆ ಆಗಬೇಕು- ಬುಡಕಟ್ಟು , ಆದಿವಾಸಿ ಜನರಿಂದ ಪ್ರತಿಭಟನೆ- ಸರ್ಕಾರಕ್ಕೆ ಮನವಿ ಸಲ್ಲಿಕೆ.

March 2, 2019 by Yogaraj SK Leave a Comment

sup-rim court tirpu maru parishilane madi - aadivasigalinda pratibhatane

ಹಳಿಯಾಳ : ಆದಿವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸಬೇಕೆಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಹಾಗೂ ಗ್ರೀನ್ ಇಂಡಿಯಾ ಟ್ರಸ್ಟ್ ಸಹಯೋಗದಲ್ಲಿ ತಾಲೂಕಿನ ಆದಿವಾಸಿಗಳು ಹಳಿಯಾಳ ಪಟ್ಟಣದಲ್ಲಿ ಪ್ರತಿಭಟನಾ ಮೆರವಣ ಗೆ ನಡೆಸಿದರು.
ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಬುಡಕಟ್ಟ ಆದಿವಾಸಿ ಸಿದ್ದಿ ಜನಾಂಗದವರು ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆಯ ಜಿಲ್ಲಾಧ್ಯಕ್ಷ ದಿಯೋಗ್ ಸಿದ್ದಿ ಮತ್ತು ಗ್ರೀನ ಇಂಡಿಯಾದ ಡಾ.ಪಿ.ಮಹೇಂದ್ರಕುಮಾರ ಅವರ ನೇತೃತ್ವದಲ್ಲಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣ ಗೆಯನ್ನು ನಡೆಸಿ ಇಲ್ಲಿಯ ಮಿನಿವಿಧಾನಸೌಧಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲದಾರ ವಿದ್ಯಾಧರ ಅವರಿಗೆ ಸಲ್ಲಿಸಿದರು.
ಸುಪ್ರಿಂ ಕೋರ್ಟನ ನ್ಯಾಯಾಧೀಶರಾದ ಅರುಣ ಮಿಶ್ರಾ, ನವೀನ ಸಿನ್ಹಾ ಮತ್ತು ಇಂದಿರಾ ಬ್ಯಾನರ್ಜಿ ಅವರ ತ್ರಿಸದಸ್ಯ ಪೀಠವು ಬೆಂಗಳೂರು ಮೂಲದ ವೈಲ್ಡ್ ಲೈಫ್ ಫಸ್ಟ್ ಸೇರಿದಂತೆ ಮತ್ತೀತರರ ಸಂಘ ಸಂಸ್ಥೆಗಳು ಹಾಗೂ ಕೆಲವು ಸ್ವಯಂ ಘೋಷಿತ ಪರಿಸರವಾದಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಅರ್ಜಿಯ ವಿಚಾರಣೆ ನಡೆಸಿ ದೇಶದ 16 ರಾಜ್ಯಗಳ ಒಟ್ಟೂ 10 ಲಕ್ಷಕ್ಕೂ ಅಧಿಕ ಜನರನ್ನು ಕಾಡಿನಿಂದ ಎತ್ತಂಗಡಿ ಮಾಡಲು ಆದೇಶ ಹೊರಡಿಸಿದ್ದು ಆದಿವಾಸಿಗಳಿಗೆ ಭರ ಸಿಡಿಲು ಬಡಿದಂತಾಗಿದೆ. ಆದ್ದರಿಂದ ಸುಪ್ರಿಂ ಕೋರ್ಟ ಆದೇಶವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
2006 ರಲ್ಲಿ ಕೇಂದ್ರ ಸರ್ಕಾರವು ಸಹ ಆದಿವಾಸಿಗಳಿಗಾಗಿ ಜಾರಿಗೆ ತಂದಂತಹ ಬುಡಕಟ್ಟು ಅಧಿನಿಯಮದ ಪ್ರಕಾರ ಈ ದೇಶದಲ್ಲಿರುವ ಆದಿವಾಸಿಗಳು ತೆಲೆ ತಲಾಂತರಿಂದ ಈ ಕಾಡಿನೊಳಗೆ ಹಕ್ಕುಗಳನ್ನು ದಾಖಲಿಸಿರದ ಕಾರಣ ಅನುಸೂಚಿತ ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯ ರಹವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯತೆಗೊಳಿಸುವ ಕಾರಣಕ್ಕಾಗಿಯೇ ಈ ಮಸೂದೆಯನ್ನು ಜಾರಿಗೊಳಿಸಲಾಗಿದ್ದು ಇದೀಗ ಆದಿವಾಸಿಗಳು ಅರಣ್ಯ ಬಿಟ್ಟು ಹೊರಗೆ ಬರಬೇಕಾದ ಅನಿವಾರ್ಯತೆ ಉಂಟಾಗಿದ್ದು ಸರಿಯಾದ ಕ್ರಮವಾಗಿಲ್ಲ ಎಂದಿದ್ದಾರೆ.
ಢೊಂಗಿ ಪರಿಸರವಾದಿಗಳ ಪಿಐಎಲ್ ಅರ್ಜಿಗೆ ಸರ್ಕಾರದ ಪರವಾಗಿ ವಕಾಲತ್ತು ವಹಿಸಬೇಕಾದ ವಾದಿಗಳು ಗೈರುಹಾಜರಿಯಾಗಿದ್ದರ ಪರಿಣಾಮ ಆದಿವಾಸಿಗಳ ಮೂಲ ಬದುಕಿಗೆ ಬೆಂಕಿ ಇಟ್ಟಂತಾಗಿದೆ. ಆದಿವಾಸಿಗಳ ಪರವಾಗಿ ಇರಬೇಕಾಗಿದ್ದ ಸರ್ಕಾರಗಳು ಮತ್ತು ಮಾನವ ಹಕ್ಕು ಭೋದಿಸುವ ಸಂಸ್ಥೆಗಳು ಮೌನ ವಹಿಸಿದ್ದು ಧ್ವನಿಯಿಲ್ಲದ ಆದಿವಾಸಿಗಳ ಪರವಾಗಿ ನಿಲ್ಲಬೇಕಾಗಿದೆ. ಈ ದೇಶದ ಮೂಲ ನಿವಾಸಿಗಳಾದ ಆದಿವಾಸಿಗಳು ಕಾಡಿನ ಜೀವ ಪರಿಸರದ ಒಂದು ಅವಿಭಾಜ್ಯ ಅಂಗ. ಕೋರ್ಟ ಆದೇಶದಿಂದ ಆದಿವಾಸಿಗಳ ಬದುಕು ಅತಂತ್ರವಾಗಿದ್ದು ಆದೇಶವನ್ನು ಮರುಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಇಮಾಮ್ ಸಿದ್ದಿ, ನನ್ನೇಸಾಬ ಸಿದ್ದಿ, ಬಿಯಾಮಾ ಸಿದ್ದಿ, ಮೇರಿ ಸಿದ್ದಿ, ನತಾಲ ಸಿದ್ದಿ, ಅಂಥೋನ್ ಸಿದ್ದಿ, ಚಾಂಧಸಾಬ ಸಿದ್ದಿ, ಮಮತಾಜ್ ಸಿದ್ದಿ, ಮಂಗೇಲ್ ಸಿದ್ದಿ, ಮೈಕಲ್ ಸಿದ್ದಿ, ಮನವೆತ್ ಜಾಕಿ, ಸಂಗೀತಾ ಸಿದ್ದಿ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Canara News Tagged With: appeal to government, District Tribunal Expression Forum, Green India Trust, Indira Banerjee, New Sinha, Protest by tribal people, Sangolli Rayanna circle, Supreme Court, Supreme Court judge Judge Aruna Mishra, Supreme Court verdict should be re-examined, town's main street, tribal Adivasi Siddhi race

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...