• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅರಣ್ಯ ಇಲಾಖೆಯ ಟ್ರೀ ಪಾರ್ಕಗೆ ಉದ್ಘಾಟನೆ ಭಾಗ್ಯ ಯಾವಾಗ..?

October 4, 2019 by kasim hattiholi Leave a Comment

watermarked khanapur tree park

ಖಾನಾಪುರ

ನಂದಗಡ-ಖಾನಾಪೂರ ನಡುವಿನ ಕೌಂದಲ್ ಗ್ರಾಮದ ಹತ್ತಿರ ಹೆದ್ದಾರಿ ಪಕ್ಕದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾನಾಪುರ ವಲಯ ಅರಣ್ಯ ಇಲಾಖೆ ನಿರ್ಮಿಸಿದ ಟ್ರೀ ಪಾರ್ಕಗೆ ವರ್ಷ ಕಳೆದರು ಅರಣ್ಯ ಇಲಾಖೆ ನಿರ್ಲಕ್ಷದಿಂದ ಇನ್ನು ಬಿಡುಗಡೆ ಭಾಗ್ಯ ಕಂಡಿಲ್ಲ್ಲ.

ಅರಣ್ಯ ಇಲಾಖೆ ಇದನ್ನು ಲೋಕಸಭೆ ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿತ್ತು. ಚುನಾವಣೆ ಮುಗಿದ ನಂತರ ಲೋಕಾರ್ಪಣೆಗೊಳಿಸಬೇಕಾಗಿತ್ತು. ಆದರೆ ಇವತ್ತಿಗೂ ಯಾವ ಅಧಿಕಾರಿಗಳು ಇದನ್ನು ಉಧ್ಘಾಟಿಸಬೇಕು ಎನ್ನುವತ್ತ ಗಮನ ಹರಿಸುತ್ತಿಲ್ಲ. ಅರಣ್ಯ ಇಲಾಖೆ ನೀಡಿದ ಅನುದಾನ ಏನೊ ಬಳಿಕೆಯಾಗಿದೆ. ಆದರೆ ಸಾರ್ವಜನಿಕರಿಗೆ ಅದನ್ನು ಮುಕ್ತ ಗೊಳಿಸಿಲ್ಲ. ಬಿಡುಗಡೆ ಭಾಗ್ಯ ಕಾಣದೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಹಲವು ಸಾಮಗ್ರಿಗಳು ತುಕ್ಕು ಹಿಡಿಯುತ್ತ ಸಾಗಿವೆ.

ಅರಣ್ಯ ಇಲಾಖೆ ಇಲ್ಲಿ 41 ಹೆಕ್ಟರ ಭೂಮಿ ಹೊಂದಿದ್ದು ಅಂದರೆ ಕನಿಷ್ಟ 102 ಏಕರ ಇದರ ಸ್ವಾಧಿನದಲ್ಲಿದೆ. ಇಷ್ಟು ವಿಸ್ತೀರಣದಲ್ಲಿ 5 ಎಕರ ಮಾತ್ರ ಬಳಿಸಿ ಟ್ರೀ ಪಾರ್ಕ ನಿರ್ಮಾಣ ಮಾಡಲಾಗಿದೆ.

ಈ ಯೋಜನೆಗೆ ಅರಣ್ಯ ಇಲಾಖೆಯ ಹಿಂದಿನ ಹಿರಿಯ ಆಧಿಕಾರಿ ಎಸಿಎಫ್ ಸಿ.ಬಿ.ಪಾಟೀಲ ಮತ್ತು ಹಿಂದಿನ ಆರ್‍ಎಫ್‍ಒ ಎಸ್.ಎಸ್.ನಿಂಗಾಣ ಅವರ ಪ್ರಾಮಾಣಿಕ ಪರಿಶ್ರಮ ಬಹಳವಿದೆ. ಈ ಯೋಜನೆಗೆ ಇಲಾಖೆ ಅನುದಾನ ಮಾತ್ರ ದೊರಕಿದ್ದು ಕೇವಲ 20 ಲಕ್ಷ ರೂಪಾಯಿಗಳಲ್ಲಿ ಇದಕ್ಕೊಂದು ಒಳ್ಳೆಯ ರೂಪ ನೀಡಿದ್ದಾರೆ. ಇಲಾಖೆ ಯೋಜನೆಗಳಿಗೆ ಬಳಿಸಿ ಉಳಿಸಿದ ಹಣ ಕೂಡ ಇಲ್ಲಿ ಬಳಿಸಿ ಇನ್ನಷ್ಟು ಮೆರಗು ನೀಡಲಾಗಿದೆ. ಇದಕ್ಕೆ ಚಾಲನೆ ನೀಡಿದ ಎಸಿಎಫ್ ಸಿ.ಬಿ.ಪಾಟೀಲ ನಿವೃತ್ತರಾದರು ಟ್ರೀ ಪಾರ್ಕ ಕನಸು ಕಟ್ಟಿ ಕೊಟ್ಟಿದ್ದಾರೆ. ಈ ಕನಸಿಗೆ ರೂಪ ನೀಡಿದ ಆರ್‍ಎಫ್‍ಒ ನಿಂಗಾಣಿ ಲೋಂಡಾಕ್ಕೆ ವರ್ಗಾವಣೆಯಾದರು. ಇದರಿಂದ ಟ್ರೀ ಪಾರ್ಕ ಕೆಲಸಗಳು ನಿಧಾನ ಗತಿಯಲ್ಲಿ ಸಾಗಿದವು ಎನ್ನಬಹುದು.

IMG 20190926 WA0133

ಇಲ್ಲಿ ಏನೇನಿದೆ ;
ಟ್ರೀ ಪಾರ್ಕ ಒಳಗಡೆ ಕಾಲಿಟ್ಟರೆ ದಟ್ಟ ಅರಣ್ಯ ಪರಿಸರ ಅನುಭವವಾಗುತ್ತದೆ. ಟ್ರೀ ಪಾರ್ಕನಲ್ಲಿ ಹಲವು ವಿವಿದ ಆಯುರ್ವೆದ ದಿವ್ಯ ಜೌಷಧಿಗಳ ಸಸಿಗಳನ್ನು ಬೆಳಿಸಿ ಪೋಷಣೆ ಮಾಡಲಾಗಿದೆ. ಒಳಗೆ ಕಾಲಿಟ್ಟರೆ ಹಲವು ದಿವ್ಯ ಜೌಷಧಿಗಳ ಪರಿಚಯ ಜನರಿಗೆ ಆಗುತ್ತದೆ. ಟ್ರೀ ಪಾರ್ಕನಲ್ಲಿ ಬರುವ ಮಕ್ಕಳು ಸಾಹಸದಲ್ಲಿ ತೊಡಗಿ ಕೊಳ್ಳಲು ಹಲವು ರೋಚಕ ಆಟದ ವ್ಯವಸ್ಥೆಗಳನ್ನು ಮಾಡಲಾಗಿದೆ.

ಇದರಲ್ಲಿ ಪ್ರಮುಖವಾಗಿ ಹಗ್ಗ ನಡಿಗೆ ಮತ್ತು ಕಟ್ಟಿಗೆ ತುಂಡಿನ ಮೇಲಿನ ಸಾಹಸಗಳು ರೋಚಕವಾಗಿವೆ. ಮಕ್ಕಳಿಗೆ ಮಜವಾಗಿ ಆಡಲು ಜೋಕಾಲಿ ತಿರುಗಣಿ ಮತ್ತು ಜಾರು ಬಂಡಿ ಕೂಡನಿರ್ಮಿಸಲಾಗಿದೆ. ಕುಟುಂಬ ಸಮೇತ ತೆರಳಿದರೆ ಮಜವಾಗಿ ಸಮಯ ಕಳೆಯಬಹುದಾಗಿದೆ. ಮಕ್ಕಳಂತು ಇಲ್ಲಿ ಬಂದರೆ ಅವರಿಗೆ ಅದು ಸ್ವರ್ಗವೆ ಸರಿ.

ನಿತ್ಯ ಪರಿಸರ ಮಾಲಿನ್ಯದಲ್ಲಿ ಸಂಚರಿಸುವರಿಗೆ ಶುದ್ಧ ಆಮ್ಲಜನಕ ಸೇವನೆ ಇಲ್ಲಿ ಮಾಡಬಹುದು. ಪಾರ್ಕ ಒಳಗಡೆ ಒಂದು ಬಂಡೆಯನ್ನು ಸುತ್ತಲಿನ ಹಳ್ಳಿ ಗ್ರಾಮಸ್ಥರು ಹೊಂಡ ದೇವರು ಎಂದು ಪೂಜಿಸುತ್ತಾರೆ. ಇಲ್ಲಿ ಗ್ರಾಮೀಣ ಜನಪದ ಸೊಬಗಿನ ಸೊಗಡು ತೋರಿಸುವ ರಾಕ್ ಗಾರ್ಡನ ನಿರ್ಮಾಣ ಮಾದರಿ ಮಾಡಿದರೆ ಇದು ಇನ್ನು ಹೆಚ್ಚು ಆಕರ್ಷಣೆಯಾಗುತ್ತದೆ.

IMG 20190926 WA0134

ನೂತನವಾಗಿ ಆಗಮಿಸಿರುವ ಎಸಿಎಫ್ ಶಶಿಧರ ಇದಕ್ಕೆ ಮುತುವರ್ಜಿ ವಹಿಸಿದ್ದಾರೆ. ಸರಕಾರದ ಹಣ ಇದಕ್ಕೆ ಸದಬಳಕೆಯಾಗಿದೆ. ಈಗಿನ ಅಧಿಕಾರಿಗಳು ಉದ್ಘಾಟನೆಗೆ ಯಾಕೆ ಮುಂದಾಗುತ್ತಿಲ್ಲ. ಇವರಿಗೆ ಯಾವುದಾದರೂ ರಾಜಕೀಯ ಒತ್ತಡವಿದೆಯೋ? ಬೆಳಗಾವಿ ಹಿರಿಯ ಅಧಿಕಾರಿಗಳಾದ ಸಿಸಿಎಫ್ ಮತ್ತು ಡಿಎಫ್‍ಒ ಇದರತ್ತ ಚಿತ್ತ ಹರಿಸ ಬೇಕಿದೆ.

ಕೋಟ್ಸ್;
“ಟ್ರೀ ಪಾರ್ಕನಲ್ಲಿ ಟಿಕೇಟ್, ಪುಡ್ ಕೋಟ್ ತಾಯಾರಿಸಲಾಗುತ್ತಿದೆ. ಈಗಾಗಲೇ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲಿಯೇ ಟ್ರೀ ಪಾರ್ಕ ಉದ್ಘಾಟಿಸಲಾಗುವುದೆಂದು” ಖಾನಾಪುರ ವಲಯ ಎಸಿಎಫ್ ಶಶಿಧರ ತಿಳಿಸಿದ್ದಾರೆ”.

“ಟ್ರೀ ಪಾರ್ಕ ನಿರ್ಮಾವಾಗಿದ್ದರು ಅರಣ್ಯ ಇಲಾಖೆ ಉದ್ಘಾಟನೆಗೆ ಯಾಕೆ ಮುಂದಾಗುತಿಲ್ಲ. ತಕ್ಷಣ ಟ್ರೀ ಪಾರ್ಕ ಲೋಕಾರ್ಪಣೆಗೊಳಿಸಿ ಸಾರ್ವಜನಿಕರಿಗೆ ವಾಯು-ವಿಹಾರ ಕೈಗೊಳ್ಳಲು ಅನುವು ಮಾಡಿಕೊಡಬೇಕು.
ಈಶ್ವರ.ಜಿ.ಸಂಪಗಾವಿ, ಗೌರವ ಅಧ್ಯಕ್ಷರು ಕಸಾಪ ಖಾನಾಪುರ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Other Tagged With: 102 ಏಕರ ಇದರ ಸ್ವಾಧಿನಅರಣ್ಯ ಇಲಾಖೆಯ, ಟ್ರೀ ಪಾರ್ಕಗೆ ಉದ್ಘಾಟನೆ ಭಾಗ್ಯ ಯಾವಾಗ., ಲಕ್ಷಾಂತರ ರೂಪಾಯಿ ಖರ್ಚು, ಲೋಕಾರ್ಪಣೆ

Explore More:

About kasim hattiholi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...