• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಸ ವಿಲೇವಾರಿಯಲ್ಲಿ ಅಸಡ್ಡೆ ತೊರುತ್ತಿರುವ ಅಧಿಕಾರಿಗಳು ಕಸದಿಂದ ತುಂಬಿದ ರಾಮನಗರ

November 20, 2019 by Sandesh Desai Leave a Comment

watermarked 19 jyd 2

ಜೋಯಿಡಾ –
ಜೋಯಿಡಾ ತಾಲೂಕಿನ ರಾಮನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಕಾಣಿಸುತ್ತಿದ್ದು,ಕಸ ಹಾಕುವ ತೊಟ್ಟಿಗಳು ತುಂಬಿ ತುಳುಕುತ್ತಿದ್ದರು ಸರಿಪಡಿಸುವ ಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತಿರುವುದು ಸಾರ್ವಜನಿಕ ವಲಯದಲ್ಲಿ ಬೇಸರ ಮೂಡಿಸಿದೆ.
ಹಲವಾರು ವರ್ಷಗಳಿಂದಲೂ ಇಲ್ಲಿ ಇದೇ ಸಮಸ್ಯೆ ಇದ್ದು, ಗೋವಾ – ರಾಮನಗರ ಹೆದ್ದಾರಿ ಪಕ್ಕದಲ್ಲಿ ಕಸದ ರಾಶಿಗಳು ಇದ್ದು ,ರಾಮನಗರದ ಶಿವಾಜಿ ಸರ್ಕಲ ಬಳಿ ಕಸದ ತೊಟ್ಟಿಗಳು ತುಂಬಿದರು ಸಂಭಂದಪಟ್ಟ ಅಧಿಕಾರಿಗಳು ಕ್ಯಾರೆ ಮಾಡದಿರುವುದು ಅವರ ನಿರ್ಲಕ್ಷ್ಯ ವನ್ನು ಏತ್ತಿ ತೋರಿಸುತ್ತಿದೆ.

ಪ್ಲಾಸ್ಟಿಕ್ ನಿಷೇದ ರಾಮನಗರದಲ್ಲಿ ಇಲ್ಲವೇ –
ರಾಮನಗರದಲ್ಲಿ ಪ್ಲಾಸ್ಟಿಕ್ ನಿಷೇದ ಇಲ್ಲವೇ ? ರಾಜ್ಯಾದಂತ ಪ್ಲಾಸ್ಟಿಕ್ ನಿಷೇದ ಖಾಯಿದೆ ಜಾರಿಯಲ್ಲಿದ್ದರೂ ರಾಮನಗರದಲ್ಲಿ ಮಾತ್ರ ಪ್ಲಾಸ್ಟಿಕ್ ನಿಷೇದ ಕಾಯಿದೆ ಜಾರಿಯಾದಂತಿಲ್ಲ, ಇಲ್ಲಿನ ಕಸದ ತೊಟ್ಟಿಗಳಲ್ಲಿ ಪ್ಲಾಸ್ಟಿಕ್ ಕಸಗಳೇ ಹೆಚ್ಚಾಗಿ ಕಾಣಿಸುತ್ತಿದ್ದು, ಇದರಿಂದ ಇಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇದವಾಗಿಲ್ಲ ಎಂಬುದು ಕಣ್ಣಿಗೆ ಕಾಣುವಂತಿದೆ, ಇಲ್ಲವಾದರೆ ಗ್ರಾ.ಪಂದವರು ಇಲ್ಲಿನ ಕಸದ ತೊಟ್ಟಿ ಖಾಲಿ ಮಾಡದೇ ವರ್ಷಗಳೇ ಕಳೆದಿವೆಯೋ ಗೊತ್ತಿಲ್ಲ ಕಸದ ತೊಟ್ಟಿಯಲ್ಲಿ ಪ್ಲಾಸ್ಟಿಕ್ ಕಸ ಮಾತ್ರ ರಂಗು ರಂಗಾಗಿ ಕಾಣುತ್ತಿದೆ.

ಜಾನುವಾರುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಕಸ –
ಬೇಕಾಬಿಟ್ಟಿ ಪ್ಲಾಸ್ಟಿಕ್ ಎಸೆಯುದರಿಂದ ,ಪ್ಲಾಸ್ಟಿಕ್ ಗೆ ಅಂಟಿರುವ ಪದಾರ್ಥಗಳನ್ನು ತಿನ್ನಲು ಪಾಪ ದನ,ನಾಯಿ,ಕುರಿಯಂತ ಮೂಕ ಪ್ರಾಣಿಗಳು ಹವಣಿಸುತ್ತಿರುತ್ತವೆ,ಪ್ಲಾಸ್ಟಿಕ್ ನಲ್ಲಿ ಇರುವ ಪದಾರ್ಥ ತಿನ್ನಲು ಹೋಗಿ ಪ್ಲಾಸ್ಟಿಕ್ ನುಂಗುತ್ತವೆ. ಇದರಿಂದ ಪ್ರಾಣಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸೇರುವ ಸಾಧ್ಯತೆ ಹೆಚ್ಚಿದ್ದು , ಸಂಭಂದ ಪಟ್ಟ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.
ಒಟ್ಟಾರೆಯಾಗಿ ರಾಮನಗರದಲ್ಲಿ ಕಸ ಸ್ವಚ್ಚತೆ ನಡೆಸಿ ವರ್ಷಗಳೇ ಆದಂತೆ ಕಾಣುತ್ತಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಕಸ ವಿಲೇವಾರಿಯಲ್ಲಿ ಅಸಡ್ಡೆ ತೊರುತ್ತಿರುವ ಅಧಿಕಾರಿಗಳು, ಕಸ ಹಾಕುವ ತೊಟ್ಟಿಗಳು, ಕಸದಿಂದ ತುಂಬಿದ ರಾಮನಗರ, ಗೋವಾ - ರಾಮನಗರ, ಪ್ಲಾಸ್ಟಿಕ್ ಗೆ ಅಂಟಿರುವ ಪದಾರ್ಥ, ಪ್ಲಾಸ್ಟಿಕ್ ನಿಷೇದ ರಾಮನಗರ, ಬೇಕಾಬಿಟ್ಟಿ ಪ್ಲಾಸ್ಟಿಕ್ ಎಸೆಯುದರಿಂದ, ಹೆದ್ದಾರಿ ಪಕ್ಕದಲ್ಲಿ ಕಸದ ರಾಶಿಗಳು ಇ

Explore More:

About Sandesh Desai

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...