
ಜೊಯಿಡಾ ;
ಕೇಂದ್ರ ಸರಕಾರದ ಹೊಸ ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆ ವಿರುದ್ದ ಭಾರತ ಕಮ್ಯುನಿಷ್ಟ ಪಕ್ಷ(ಮಾಕ್ರ್ಸವಾದಿ) ಜೋಯಿಡಾ ಶಾಖೆ ಇಂದು ಗುರುವಾರ ಪ್ರತಿಭಟಿಸಿ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ತಹಶೀಲ್ದಾರ ಮುಖೇನ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪೌರತ್ವ ತಿದ್ದುಪಡಿ ಮಸೂದೆ ಮತ್ತು ರಾಷ್ಟ್ರೀಯ ಪೌರರ ದಾಖಲಾತಿ ವಿರುದ್ದ ದೇಶಾದ್ಯಂತ ಎಡಪಕ್ಷಗಳ ನೇತ್ರತ್ವದಲ್ಲಿ ಇಂದು ಪ್ರತಿಭಟನೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಜೋಯಿಡಾದಲ್ಲಿ ಭಾರತ ಕಮ್ಯುನಿಷ್ಟ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಪೌರತ್ವ ತಿದ್ದುಪಡಿ ಕಾಯ್ದೆ ಸಂವಿದಾನದ ಸಂಪೂರ್ಣ ಉಲ್ಲಂಘನೆಯಾಘಿದ್ದು, ಭಾರತೀತ ಗಣತಂತ್ರ ವ್ಯವಸ್ಥೆಯ ಬುದಾಧಿಯನು ಬಡಮೇಲು ಮಾಡುವ ಉದ್ದೇಶ ಇದಾಗಿದೆ ಎಂದು ಆರೋಪಿಸಿದರು.ದೇಶದಲ್ಲಿ ಕೋಮು ವಿಭಜನೆ ಮತ್ತು ಸಾಮಾಜಿಕ ದ್ರುವಿಕರಣವನ್ನು ಇನ್ನಷ್ಟು ತೀಕ್ಷ್ಣಗೊಳಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದರು.
ಜೋಯಿಡಾ ಮುಖ್ಯ ಸರ್ಕಲ್ದಿಂದ ತಹಶೀಲ್ದಾರ ಕಛೇರಿಯವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ ಮುಖೇನ ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಈ ಪೌರತ್ವ ಕಾನೂನನ್ನು ಸಿ.ಪಿ.ಐ ಸೂಚಿಸಿದ ತಿದ್ದು ಪಡಿಯಂತೆ ಬೇರೆ ಬೇರೆ ಧರ್ಮದ ಹೆಸರನ್ನು ತೆಗೆದು “ಹೋರಗಿನಿಂದ ಬಂದವರು” ಎನ್ನುವ ಪದವನ್ನು ಸೇರ್ಪಡೆ ಮಾಡುವುದರೊಂದಿಗೆ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿ ಮನವಿ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಮ್ಯುನಿಷ್ಟ ಪಕ್ಷದ ಜಿಲ್ಲಾ ಸದಸ್ಯ ಪ್ರಮಾನಂದ ವೇಳಿಪ, ಪ್ರಭು ವೇಳಿಪ, ವಿಲಾಸ ನಾಯ್ಕ, ಉತ್ತಮ ಮರಾಠಾ ಮುಂತಾದವರು ಉಪಸ್ಥಿತರಿದ್ದರು.

Leave a Comment