• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕುಂಕುಮದ ಮಹತ್ವ ಹಾಗೂ ಪರಿಶುದ್ಧವಾದ ಕುಂಕುಮ ತಯಾರಿಸುವ ವಿಧಾನ.

February 18, 2020 by KV Parthasarathi Kshatriya Leave a Comment

watermarked 79306829 264499994510868 5197143193912606720 n

ಹೆಣ್ಣಿನ ಹಣೆಯ ಮೇಲಿನ ಕುಂಕುಮ ನಮ್ಮ ಸನಾತನ ಧರ್ಮ ಹಾಗೂ ಸಂಸ್ಕೃತಿಯ ಪ್ರತೀಕ.ಅಲಂಕಾರದಲ್ಲಿ ಕುಂಕುಮಕ್ಕೆ ಪ್ರಥಮ ಸ್ಥಾನ. ಮನೆಗೆ ಆಗಮಿಸಿದ ಮುತೈದೆಯರಿಗೆ ಗೌರವಪೂರ್ವಕವಾಗಿ ಅರಸಿಣ ಕುಂಕುಮ ಕೊಡುವ ಪದ್ಧತಿ ಇಂದಿಗೂ ಇದೆ ಮುಂದೆಯೂ ಇರುತ್ತೆ.
ಯೋಗಶಾಸ್ತ್ರದ ಪ್ರಕಾರ ಗಂಗಾ ಯಮುನಾ ಸರಸ್ವತಿ ಎಂಬ ಮೂರು ನಾಡಿಗಳ ಸಂಗಮ ಸ್ಥಳ ಹಣೆ. ಈ ಸ್ಥಳದಲ್ಲಿ ಕುಂಕುಮ ಇಡುವುದರಿಂದ ಬಿಸಲಿನ ಅತಿ ನೀಲ ಕಿರಣಗಳು ದೇಹವನ್ನು ಭಾದಿಸಲಾರವು. ಕುಂಕುಮವು ಶರೀರ ಹಾಗೂ ರಕ್ತನಾಳಗಳಲ್ಲಿನ ಉಷ್ಣತೆಯನ್ನು ಕಡಿಮೆ ಮಾಡಿ, ರಕ್ತದೊತ್ತಡ ಹಾಗೂ ಆಂತರಿಕ ರಕ್ತಸ್ರಾವವನ್ನು ನಿಯಂತ್ರಿಸುತ್ತದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿಯೂ ಕುಂಕುಮ ಬಹು ಸಹಕಾರಿ.

watermarked 79985293 264518571175677 2418944977179508736 o


ಪೂಜೆ ಮಾಡುವಾಗ ಹೆಬ್ಬೆರಳು ಹಾಗೂ ಮಧ್ಯದ ಬೆರಳಿಂದ ಹಣೆಗೆ ಕುಂಕುಮ ಇಟ್ಟುಕೊಂಡರೆ ಮನದಲ್ಲಿನ ಬಯಕೆಗಳು ಈಡೇರುತ್ತವೆ. ಹಣೆಗೆ ಕುಂಕುಮ ಇಡುವಾಗ ಹೆಬ್ಬೆರಳಿನಿಂದ ತಿದ್ದಿಕೊಂಡರೆ ಉತ್ತಮ ಶಕ್ತಿ ಬರುತ್ತದೆ. ಮಧ್ಯದ ಬೆರಳಿಂದ ತಿದ್ದಿಕೊಂಡರೆ ಆಯುರಾರೋಗ್ಯ ಲಭಿಸುತ್ತದೆ. ತೋರು ಬೆರಳಿಂದ ತಿದ್ದಿಕೊಂಡರೆ ಸರ್ವ ಸ್ವಾತಂತ್ರ್ಯ ಸಿಗುತ್ತದೆ ಎಂಬ ನಂಬಿಕೆ ಗುರು ಹಿರಿಯರಲ್ಲಿದೆ.
ಇದೆಲ್ಲ ಪರಿಶುದ್ಧವಾದ ಕುಂಕುಮದಿಂದ ಮಾತ್ರ ಸಾಧ್ಯವೇ ವಿನಹ ಮಾರುಕಟ್ಟೆಗಳಲ್ಲಿ ಸಿಗುವ ರಾಸಾಯನಿಕ ಮಿಶ್ರಣದ ಕುಂಕುಮದಿಂದಲ್ಲ.ನಾನಾ ರೀತಿಯ ಕುಂಕುಮಗಳು ಮಾರುಕಟ್ಟೆಯಲ್ಲಿ ದೊರೆತರು, ಅವೆಲ್ಲ ಕಲಬೆರಕೆ ಕುಂಕುಮಗಳೇ…!

watermarked 78954356 264499901177544 6228071413811511296 n

ಪರಿಶುದ್ಧವಾದ ಕುಂಕುಮ ತಯಾರಿಸುವ ವಿಧಾನ:-
1.ಉತ್ತಮವಾದ ಅರಸಿಣ ಕೊಂಬು ಅರ್ಧ kg
ಸ್ಫಟಿಕ 25 ಗ್ರಾಂ
ಬಿಳಿಗಾರ 25 ಗ್ರಾಂ ಸೇರಿಸಿ ಎಲ್ಲವನ್ನು ಪುಡಿ ಮಾಡಿ ನಿಂಬೆರಸ ಬೆರೆಸುವುದು ಸಾಮಾನ್ಯ ಪದ್ಧತಿ.
2. ನಿಂಬೆ ರಸದಲ್ಲಿ ಸ್ಫಟಿಕ ಹಾಗೂ ಬಿಳಿಗಾರ ಪುಡಿ ಸೇರಿಸಿ ಅದರಲ್ಲಿ ಅರಸಿಣ ಕೊಂಬಿನ ಚೂರುಗಳನ್ನು ಹಾಕಿ ಎರಡು ಮೂರುದಿನ ಬಿಟ್ಟು ಆನಂತರ ಅರಸಿಣ ಕೊಂಬಿನ ಚೂರುಗಳನ್ನು ನೆರಳಲ್ಲಿ ಒಣಗಿಸಿ ನುಣ್ಣಿಗೆ ಪುಡಿ ಮಾಡಬೇಕು. ಪುಡಿ ಬಣ್ಣ ಕಡಿಮೆ ಇದ್ದಲ್ಲಿ ಮತ್ತೆ ಸ್ವಲ್ಪ ನಿಂಬೆರಸ ಸೇರಿಸಿದರೆ ಒಳ್ಳೆ ಬಣ್ಣ ಬರುತ್ತೆ.
ಈ ರೀತಿಯಲ್ಲಿ ತಯಾರಿಸಿದ ಕುಂಕುಮ ಪರಿಶುದ್ಧವಾಗಿದ್ದು ಹಣೆಯಲ್ಲಿ ಧರಿಸಿದರೆ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.ಅರಸಿಣ ಮೈಗೆ ಕಾಂತಿ ನೀಡಿದರೆ ಸ್ಫಟಿಕ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.ಸ್ಫಟಿಕ ಕಣ್ಣುಗಳಿಗೆ ತಂಪು ನೀಡುತ್ತೆ. ಬಿಳಿಗಾರ ರಕ್ತವನ್ನು ಶುದ್ಧಗೊಳಿಸುತ್ತದೆ. ಹಾಗೂ ಕಣ್ಣುಗಳನ್ನು ಆರೋಗ್ಯವಾಗಿಡುತ್ತದೆ. ನಿಂಬೆರಸವು ಅರಸಿಣದಲ್ಲಿನ ಉಷ್ಣತೆಯನ್ನು ಕಡಿಮೆಗೊಳಿಸುತ್ತದೆ. ರಕ್ತದಲ್ಲಿ ಕೊಬ್ಬಿನ ಅಂಶ ಬೆಳೆಯದಂತೆ ನೋಡಿಕೊಳ್ಳುತ್ತದೆ.

watermarked 78945784 264499931177541 5991387628828622848 n
watermarked 79813310 264500051177529 5311786642820825088 n
watermarked 80262200 264500021177532 3045022999867555840 n

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, ಮನೆಮದ್ದು Tagged With: ಅರಸಿಣ ಕುಂಕುಮ, ಉತ್ತಮವಾದ ಅರಸಿಣ ಕೊಂಬು, ಕುಂಕುಮಕ್ಕೆ ಪ್ರಥಮ ಸ್ಥಾನ, ಕುಂಕುಮದ ಮಹತ್ವ, ಕುಂಕುಮವು ಶರೀರ, ಗಂಗಾ ಯಮುನಾ ಸರಸ್ವತಿ, ತಯಾರಿಸುವ ವಿಧಾನ, ನೆರಳಲ್ಲಿ ಒಣಗಿಸಿ ನುಣ್ಣಿಗೆ ಪುಡಿ, ಪರಿಶುದ್ಧವಾದ ಕುಂಕುಮ, ಬಿಳಿಗಾರ 25 ಗ್ರಾಂ, ಮುತೈದೆಯರಿಗೆ ಗೌರವಪೂರ್ವಕವಾಗಿ, ಯೋಗಶಾಸ್ತ್ರದ ಪ್ರಕಾರ, ರಕ್ತನಾಳ, ಹೆಣ್ಣಿನ ಹಣೆಯ ಮೇಲಿನ ಕುಂಕುಮ

Explore More:

About KV Parthasarathi Kshatriya

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...