• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದಟ್ಟ ಕಾಡಿನ ಮದ್ಯೆ ಶಿವನ ದರ್ಶನ.

February 20, 2020 by Sandesh Desai 1 Comment

watermarked 19 jyd 1

ಜೋಯಿಡಾ –
ದಟ್ಟವಾದ ಕಾಡು ,ಎತ್ತನೋಡಿದರತ್ತ ಹಚ್ಚ ಹಸಿರು,ಪಕ್ಷಿಗಳ ಕಲರವ,ಕಾಳಿನದಿಯ ಹರಿಯುವ ಪಕ್ಕದಲ್ಲಿಯೇ ಇದೆ ಬೃಹದಾಕಾರದ ಶಿವ ದೇವನ ಪ್ರಸಿದ್ದ ಜೋಯಿಡಾ ತಾಲೂಕಿನ ಕವಳಾ ಗುಹೆ.
    ಜೋಯಿಡಾ ತಾಲೂಕಿನ ಪ್ರಸಿದ್ಧ ಕ್ಷೇತ್ರದಲ್ಲಿ ಒಂದಾದ ಕವಳಾ ಗುಹೆಯಲ್ಲಿ ವರ್ಷಕ್ಕೆ ಒಂದು ಬಾರಿ ಮಾತ್ರ ಶಿವರಾತ್ರಿಯ ದಿನದಂದು ಇಲ್ಲಿ ಪ್ರವೇಶ ಇರುವುದು ವಿಶೇಷವಾಗಿದೆ. ಶಿವರಾತ್ರಿಯಂದು ಸಾವಿರಾರು ಜನರು ಇಲ್ಲಿಗೆ ಆಗಮಿಸಿ ಶಿವನ ದರ್ಶನ ಪಡೆದು ತಮ್ಮ ಕಷ್ಟಗಳನ್ನು ಪರಿಹರಿಸು ಎಂದು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.

ಗುಹೆಯೊಳಗೆ ಶಿವ –
  ಕವಳಾ ಗುಹೆಯಲ್ಲಿ ವರ್ಷಕ್ಕೆ ಒಂದು ಬಾರಿ  ಶಿವರಾತ್ರಿಯಂದು ಮಾತ್ರ ಶಿವನ ದರ್ಶನಕ್ಕೆ ಅವಕಾಶವಿದ್ದು,ಇಲ್ಲಿಗೆ ಬರಲು ಭಕ್ತರು ಮುಗಿಬೀಳುತ್ತಾರೆ, ಬೃಹದಾಕಾರದ ಕಲ್ಲಿನ ಗುಹೆಯಲ್ಲಿ ಶಿವಲಿಂಗವಿದ್ದು ,ಕಪ್ಪು ಮತ್ತು ನೆರಳೆ ಬಣ್ಣದಿಂದ ಕೂಡಿದ ಲಿಂಗವಾಗಿದೆ. ವರ್ಷಕ್ಕೆ ಒಂದು ಬಾರಿ ನಡೆಯುವ ಈ ಜಾತ್ರೆಗೆ ತಾತ್ಕಾಲಿಕ ವಿದ್ಯುತ್ ನೀಡಲಾಗಿದೆ.

watermarked 19 jyd 1a

ಇಕ್ಕಟ್ಟಾದ ದಾರಿ –
ಕವಳಾ ಗುಹೆಗೆ ಸಾಗಲು ಎರಡು ಮಾರ್ಗಗಳಿದ್ದು ಒಂದು ಜೋಯಿಡಾ ತಾಲೂಕಿನ ಪಣಸೋಲಿಯಿಂದ ಕಾಡಿನ ಮದ್ಯೆ ಸಾಗುವ ದಾರಿಯಾದರೇ ಇನ್ನೊಂದು ಅಂಬಿಕಾನಗರದ ನಾಗಝರಿಯಿಂದ ಸಾವಿರಾರು ಮೆಟ್ಟಿಲುಗಳನ್ನು ಹತ್ತಿ ಸಾಗಬಹುದಾಗಿದೆ ,ಅಲ್ಲದೇ ಕವಳಾ ಗುಹೆಯೊಳಗೆ ಶಿವನ ದರ್ಶನ ಪಡೆಯಲು ಇಕ್ಕಟ್ಟಾದ ದಾರಿ ಇದ್ದು ,ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿವರಾತ್ರಿಗೆ ಬಂದರೆ ಬೆಳಗ್ಗೆಯಿಂದ ಸಂಜೆಯವರೆಗೆ ಕಾಯಬೇಕು ಶಿವನ‌ ದರ್ಶನಕ್ಕೆ, ಸರದಿ ಸಾಲಿನಲ್ಲಿ ನಿಂತು‌ ಶಿವನ‌ ದರ್ಶನ ಪಡೆಯಲು ಸಾವಿರಾರು ಜನರು ಭಕ್ತಿಯಿಂದ ಕಾಯುವುದು ವಿಶೇಷ.ಪಣಸೋಲಿಯ ದಾರಿಯಿಂದ ಕವಳಾಗೆ ಬಂದರೆ ಬರುವಾಗ ಇಳಿಜಾರು ಹಾಗೂ ಹೋಗುವಾಗ ಘಟ್ಟವಾಗಿದೆ. ಆದರೆ ಅಂಬಿಕಾನಗರದಿಂದ ಬಂದರೆ ಬರುವಾಗ ಘಟ್ಟ ಹೋಗುವಾಗ ಇಳಿಜಾರು ಇದೆ. ಹೀಗಾಗಿ ಕೆಲ‌ ಭಕ್ತರು ಖಾಸಗಿ ವಾಹನದಲ್ಲಿ ಪಣಸೋಲಿ ಯಿಂದ ಬಂದು ಅಂಬಿಕಾನಗರದ ಮೂಲಕ ಸಾಗುತ್ತಾರೆ. ಹೀಗೆ ಮಾಡುವುದರಿಂದ ಘಟ್ಟ ಎರುವ ಸಮಸ್ಯೆ ಇರುವುದಿಲ್ಲ.

ಅರಣ್ಯ ಇಕಾಕೆಯಿಂದ ನೀರಿನ ವ್ಯವಸ್ಥೆ-
    ಜೋಯಿಡಾ ತಾಲೂಕು ಹೆಚ್ಚಿನ ಪ್ರದೇಶ ಅರಣ್ಯವೇ ಆಗಿದ್ದರಿಂದ ಇಲ್ಲಿ ಅರಣ್ಯ ಇಲಾಕೆ ಕಾಡಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ. ಶಿವರಾತ್ರಿ ಯಂದು ಕವಳಾಗೆ ಸಾಗುವ ಭಕ್ತರಿಗೆ ನೀರು ಹಾಗೂ ಬೆಲ್ಲ ವಿತರಿಸುತ್ತಾರೆ. ಘಟ್ಟ ಪ್ರದೇಶದಲ್ಲಿ ಭಕ್ತಾಧಿಗಳಿಗೆ ನೀರಿನ ವ್ಯವಸ್ಥೆ ಅರಣ್ಯ ಇಲಾಕೆ ಕಲ್ಪಿಸಿದೆ. ಅರಣ್ಯಕ್ಕೆ ಯಾರು ಬೆಂಕಿ ಹಾಕಬಾರದು ಎಂದು ತಿಳುವಳಿಕೆ ನೀಡಿದೆ.ಕಾಡಿನ ಮದ್ಯದಲ್ಲಿ ಅರಣ್ಯ ಇಲಾಕೆ ಸಿಬ್ಬಂದಿಗಳು ಬೆಂಕಿಯಿಂದ

ಸಾವಿರಾರು ಭಕ್ತರ ಆಗಮನ –
   ಜೋಯಿಡಾ ಹಾಗೂ ದಾಂಡೇಲಿಯಿಂದ ಅಷ್ಟೇ ಅಲ್ಲದೆ ಹೊರ ಜಿಲ್ಲೆ,ರಾಜ್ಯಗಳಿಂದಲೂ ಶಿವರಾತ್ರಿಯಂದು ಜನರು ಇಲ್ಲಿಗೆ ಆಗಮಿಸುತ್ತಾರೆ. ಹಿಂದೆ ಜಾತ್ರೆಗೆ ಒಂದೆರಡು ಸಾವಿರ ಸಂಖ್ಯೆಯಲ್ಲಿ ಆಗುತ್ತಿದ್ದ ಜನರ ಸಂಖ್ಯೆ ಈಗ ಐವತ್ತು  ಸಾವಿರ ಜನರ ಆಸುಪಾಸಿದೆ.

IMG 20191213 WA0004

ಸಂಗಮೇಶ ಪಾಟೀಲ್ – ವಲಯ ಅರಣ್ಯಾಧಿಕಾರಿ ,ಫಣಸೋಲಿ
   ಕವಳಾದಲ್ಲಿ ಶಿವರಾತ್ರಿ ದಿನದಂದು ಜಾತ್ರೆ ನಡೆಯುತ್ತದೆ. ಅರಣ್ಯ ಇಲಾಕೆಯಿಂದ ಭಕ್ತರಿಗೆ ಬೆಲ್ಲ,ನೀರು.ಕಡಲೆಕಾಯಿ ವಿತರಿಸಲಾಗುತ್ತದೆ, ಈ ಬಗ್ಗೆ ಜಾತ್ರೆಯಲ್ಲಿ ಏನು ತೊಂದರೆ ಆಗದಂತೆ  ಪಣಸೋಲಿ ಗ್ರಾಮಸ್ಥರ ಜೊತೆ ಸಭೆ ನಡೆಸಿದ್ದೇವೆ.

ಪ್ರಭು ಗಂಗೋಳ್ಳಿ – ಸಿ.ಪಿ.ಐ.ದಾಂಡೇಲಿ
   ವರ್ಷಕ್ಕೆ ಒಮ್ಮೆ ನಡೆಯುವ ಕವಳಾ ಜಾತ್ರೆಗೆ ,ಅರಣ್ಯ ಇಲಾಕೆ,ಹಾಗೂ ಸಂಭಂದಪಟ್ಟ ಎಲ್ಲಾ ಇಲಾಕೆಗಳು ಸೇರಿ‌‌ ಸಭೆ ನಡೆಸಿದ್ದೇವೆ. ನಮ್ಮ ಪೋಲಿಸ್ ಇಲಾಕೆಯಿಂದ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲಾಗಿದೆ . ಜಾತ್ರೆಯಲ್ಲಿ ತಂಟೆ ತಕರಾರು ಆಗದಂತೆ ನಮ್ಮ ಇಲಾಕೆ ನೋಡಿಕೊಳ್ಳುತ್ತದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Joida, ಸಂಸ್ಕೃತಿ-ಕಲೆ Tagged With: ಅಂಬಿಕಾನಗರದ ನಾಗಝರಿಯಿಂದ ಸಾವಿರಾರು ಮೆಟ್ಟಿಲು, ಎತ್ತನೋಡಿದರತ್ತ ಹಚ್ಚ ಹಸಿರು, ಕಪ್ಪು ಮತ್ತು ನೆರಳೆ ಬಣ್ಣ, ಕವಳಾ ಗುಹೆ., ಕಾಳಿನದಿ, ಗುಹೆಯೊಳಗೆ ಶಿವ, ದಟ್ಟ ಕಾಡಿನ ಮದ್ಯೆ ಶಿವನ ದರ್ಶನ, ದಟ್ಟವಾದ ಕಾಡು, ಪಕ್ಷಿಗಳ ಕಲರವ, ಬೃಹದಾಕಾರದ ಕಲ್ಲಿನ ಗುಹೆ, ಶಿವಲಿಂಗವಿದ್ದು, ಸಂಜೆಯವರೆಗೆ ಕಾಯಬೇಕು ಶಿವನ‌ ದರ್ಶನ, ಸಾವಿರಾರು ಭಕ್ತರ ಆಗಮನ

Explore More:

About Sandesh Desai

Reader Interactions

Trackbacks

  1. Maha Shivaratri - Why we celebrate? - Canara Buzz says:
    February 21, 2020 at 11:13 am

    […] Suggested Read: ದಟ್ಟ ಕಾಡಿನ ಮದ್ಯೆ ಶಿವನ ದರ್ಶನ. […]

    Reply

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...