
#ಧಾರವಾಡ: ಲಾಕಡೌನ್ ನಿಂದಾಗಿ ನಿಲ್ಲಿಸಲಾಗಿದ್ದ ಬಸ್ ಸಂಚಾರವನ್ನು ಮೇ.18 ರಿಂದ #ಪುನರಾರಂಭಿಸುವಂತೆ ಕೆಲ ಬಸ್ ಘಟಕ (ಡಿಪೊ)ಗಳಿಗೆ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ ಎಂದು ಹೆಳಲಾಗುತ್ತಿದೆ.
ಧಾರವಾಡ, ದಾಂಡೇಲಿ, ಸವದತ್ತಿ ಹಾಗೂ ಹಳಿಯಾಳ ಡಿಪೊಗಳಿಗೆ ಮೇ.18 ರಿಂದ ಬಸ್ ಗಳ ಸಂಚಾರವನ್ನು ಪುನರಾರಂಭಿಸುವಂತೆ ಆದೇಶ ಹೊರಡಿಸಲಾಗಿದೆ.
ಒಟ್ಟು 150 ಬಸ್ ಗಳು ಸಂಚಾರ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
Leave a Comment