ಯಲ್ಲಾಪುರ : ದೇಶವೇ ಕೋವಿಡ್-19 ಸಂಕಷ್ಟದಿಂದ ನಲುಗುತ್ತಿದೆ. ಆದರೂ ಕೂಡ ಇದರಿಂದ ಅಭಿವೃದ್ದಿ ಕೆಲಸಗಳಿಗೆ ಹಿನ್ನಡೆಯಾಗದಂತೆ ಹಲವು ಯೋಜನೆಗಳನ್ನು ಕಾರ್ಯರೂರೂಪಕ್ಕೆ ತರಲಾಗುತ್ತಿದೆ. ಹತ್ತು ಹಲವು ಕಾಮಗಾರಿಗೆ ಚಾಲನೆ ನೀಡಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೈಮೀರಿ ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ಶನಿವಾರ ಪಪಂ ವತಿಯಿಂದ ನಿರ್ಮಿಸಲಾಗುವ ಪಟ್ಟಣದ ಬಸ್ ನಿಲ್ದಾಣದಿಂದ ಸರಕಾರಿ ಪಪೂ ಕಾಲೇಜ್ ಗೆ ತೆರಳುವ ರಸ್ತೆ ಕಾಮಗಾರಿಗೆ sಭೂಮಿ ಪೂಜೆಯನ್ನು ನೇರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿಜಯಮಿರಾಶಿ, ಶಿರೀಷ ಪ್ರಭು ,ಪಪಂ ಮುಖ್ಯಾಧಿಕಾರಿ ಅರುಣ ನಾಯ್ಕ,ಸದಸ್ಯರಾದ ಸೋಮೇಶ್ವರ ನಾಯ್ಕ, ಸತೀಶನಾಯ್ಕ, ಸುನಂದಾದಾಸ, ರವಿ ಪಾಠಣಕರ, ಜ್ಯೋತಿ ನಾಯ್ಡು, ಪ್ರಶಾಂತ ತಳವಾರ,ಮುಂತಾದವರು ಇದ್ದರು.

Leave a Comment