• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಟಿಪಿಎಂಎಸ್ ಸಂಘದಲ್ಲಿ ಗೋಬ್ಬರ ಲೆಕ್ಕಪತ್ರದಲ್ಲಿ 26.50 ಲಕ್ಷ ರೂ. ಗೊಂದಲವಾಗಿದ್ದು ನೀಜ – ಆಡಳಿತ ಮಂಡಳಿ ಸ್ಪಷ್ಟಣೆ.ಮ್ಯಾನೇಜರ್- ಕ್ಲರ್ಕ ಅವ್ಯವಹಾರ, ಹಣ ತುಂಬಲು ಸೂಚನೆ- ಆಡಳಿತ ಮಂಡಳಿ ತಪ್ಪಿತಸ್ಥರಲ್ಲ.

October 7, 2020 by Yogaraj SK Leave a Comment

ಹಳಿಯಾಳ :- ಹಳಿಯಾಳ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ(ಟಿಪಿಎಂಎಸ್)ದಲ್ಲಿ ಗೊಬ್ಬರ ಲೆಕ್ಕಪತ್ರದಲ್ಲಿ 26 ಲಕ್ಷ 50 ಸಾವಿರದ ಗೊಂದಲ ಆಗಿರುವುದು ನೀಜ ಎಂದು ಒಪ್ಪಿಕೊಂಡಿರುವ ಟಿಪಿಎಂಎಸ್ ಸಂಘದ ಕಾಂಗ್ರೇಸ್ ಬೆಂಬಲಿತ ಆಡಳಿತ ಮಂಡಳಿ ಇದರಲ್ಲಿ ಆಡಳಿತ ಮಂಡಳಿಯ ತಪ್ಪಿಲ್ಲ ಹಾಗೂ ಆಡಳಿತ ಮಂಡಳಿ ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

watermarked 6 hly 2


ಮಂಗಳವಾರ ಸಂಘದ ಕಚೇರಿಯಲ್ಲಿ ನಡೆಸಿದ ಮಹತ್ವಪೂರ್ಣ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷೆ ಮಂಜುಳಾ ಗೌಡಾ ಆಡಳಿತ ಮಂಡಳಿಯ ಅಧಿಕಾರವಿಲ್ಲದ 3 ತಿಂಗಳ ಅವಧಿಯಲ್ಲಿ ಸಂಘದಲ್ಲಿ ಆಗಿರುವ ಪ್ರಮಾದದ ಬಗ್ಗೆ ಕಳೆದ 20 ದಿನಗಳ ಹಿಂದೆಯಷ್ಟೇ ಆಡಳಿತ ಮಂಡಳಿ ಗಮನಕ್ಕೆ ಬಂದಿದ್ದು ಕೂಡಲೇ ಸಭೆ ಕರೆದು ಮ್ಯಾನೇಜರ್ ಅವರಿಗೆ ಎಚ್ಚರಿಕೆ ನೀಡಿ ಗೊಬ್ಬರ ವ್ಯವಹಾರದ 26.50 ಲಕ್ಷ ರೂ. ಹಣವನ್ನು ಸಂಘಕ್ಕೆ ತುಂಬಲು ಸೂಚಿಸಲಾಗಿದೆ.

watermarked 6 hly 1


ಇದರಲ್ಲಿ ಆಡಳಿತ ಮಂಡಳಿಯವರ ಯಾವುದೇ ತಪ್ಪಿಲ್ಲ ಎಂದ ಅವರು ಈಗಾಗಲೇ ತಪ್ಪಿತಸ್ಥ ಕ್ಲರ್ಕ ಪ್ರಕಾಶ ಅಮರಾಪುರ ಅವರಿಂದ 12 ಲಕ್ಷ ರೂ. ತುಂಬಿಸಿಕೊಳ್ಳಲಾಗಿದ್ದು ಉಳಿದ 14.50 ಲಕ್ಷ ರೂ. ದುಡ್ಡನ್ನು ಹಂತ ಹಂತವಾಗಿ ತುಂಬಲು ಕಾಲಾವಕಾಶ ನೀಡಲಾಗಿದೆ ಎಂದರು. ಸಂಘವು ಸತತ ಲಾಭದಲ್ಲಿ ಮುಂದುವರೆಯುತ್ತಿದೆ. ಇಲ್ಲಿ ಕಾಂಗ್ರೇಸ್‍ನೊಂದಿಗೆ ಬಿಜೆಪಿಯ ಸದಸ್ಯ ಇದ್ದು ಎಲ್ಲರೂ ಒಂದೆ ಎಂದು ರೈತರ ಶ್ರೇಯೋಭಿವೃದ್ದಿಗೆ ದುಡಿಯುತ್ತಿದ್ದು ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಸಂಘದ ಕಚೇರಿಗೆ ಆಗಮಿಸಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಆಡಳಿತ ಮಂಡಳಿ ಹಾಗೂ ವಿಪ ಸದಸ್ಯ ಘೋಟ್ನೇಕರ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿರುವುದನ್ನು ಖಂಡಿಸುವುದಾಗಿ ಹೇಳಿದರು.
ಆಡಳಿತ ಮಂಡಳಿಗೆ ಯಾವುದೇ ಸಂಘ ಸಂಸ್ಥೆಗಳ ದುಡ್ಡು ತಿನ್ನುವಂತಹ ದರಿದ್ರತನ ಬಂದಿಲ್ಲ ಈಗಾಗಲೇ ಆರೋಪ ಮಾಡುವ ಕೆಲವು ಜನ ಬ್ಯಾಂಕುಗಳನ್ನು ದಿವಾಳಿ ತೆಗೆದಿದ್ದು ಅವರಿಗೆ ನೆನಪಿಲ್ಲವೇ ಎಂದು ಮಂಜುಳಾ ಗೌಡಾ ಕಿರಿಕಾರಿದರು.
ಹಿರಿಯ ನಿರ್ದೇಶಕ ಸುರೇಂದ್ರ ಶಿವಣ್ಣವರ ಮಾತನಾಡಿ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಬಿಜೆಪಿಯವರ ಆರೋಪದಲ್ಲಿ ಸತ್ಯಾಂಶವಿಲ್ಲ. ಗೊಬ್ಬರ ಮಾರಾಟ ಹಾಗೂ ಹಣದ ಭ್ರಷ್ಟಾಚಾರದ ವಿಷಯದಲ್ಲಿ ಆಡಳಿತ ಮಂಡಳಿ ಭಾಗಿಯಾಗಿಲ್ಲ. ಮ್ಯಾನೇಜರ್ ಈಶ್ವರ ಪಾಟೀಲ್ ಹಾಗೂ ಗುಮಾಸ್ತ ಪ್ರಕಾಶ ಅಮರಾಪುರ ಲೆಕ್ಕಪತ್ರದಲ್ಲಿ ಹೆಚ್ಚು ಕಡಿಮೆ ಮಾಡಿರುವುದು ಬೆಳಕಿಗೆ ಬಂದಿದ್ದು ಅವರಿಂದ ಸಂಪೂರ್ಣ 29.50 ಲಕ್ಷ ರೂ. ವನ್ನು ಸಂಘಕ್ಕೆ ಭರಿಸಿಕೊಳ್ಳುತ್ತೇವೆ ಎಂದ ಅವರು ಆದರೇ ಮಾಜಿ ಶಾಸಕರು ಆಡಳಿತ ಮಂಡಳಿ ಹಾಗೂ ಈ ಸಂಘಕ್ಕೆ ಸಂಬಂಧಪಡದ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ವಿರುದ್ದ ಟೀಕೆ ಮಾಡಿರುವುದನ್ನು ತೀವೃವಾಗಿ ಖಂಡಿಸುತ್ತೇವೆ ಎಂದ ಅವರು ಘೊಟ್ನೇಕರ ಅವರ ಬಗ್ಗೆ ಟೀಕೆ ಮಾಡುವ ಯೋಗ್ಯತೆ ಹೆಗಡೆ ಅವರಿಗಿಲ್ಲ ಎಂದರು.
ಸಂಘದ ವ್ಯವಸ್ಥಾಪಕ ಈಶ್ವರ ಪಾಟೀಲ್ ಮಾತನಾಡಿ 2020-21ನೇ ಸಾಲಿಗೆ ಈವರೆಗೆ 2666 ಟನ್ ಗೊಬ್ಬರ ಸರ್ಕಾರದಿಂದ ಬಂದಿದ್ದು 13 ಸೊಸೈಟಿ ಹಾಗೂ ಟಿಪಿಎಮ್‍ಎಸ್ ಸಂಘಕ್ಕೆ ಹಂಚಿಕೆ ಮಾಡಲಾಗಿದ್ದು. ಈ ಸಂಘಕ್ಕೆ ಮಾತ್ರ 26.50 ಲಕ್ಷ ರೂ. ಮೊತ್ತದ 389 ಟನ್ ಗೊಬ್ಬರ ಬಂದಿದ್ದು ಅದೆಲ್ಲವನ್ನು ಮಾರಾಟ ಮಾಡಲಾಗಿದೆ. ಆದರೇ ಟಿಪಿಎಂಎಸ್ ಸಂಘದ ಕ್ಲರ್ಕ(ಗುಮಾಸ್ತ) ಪ್ರಕಾಶ ಅಮರಾಪುರ ಇದೆಲ್ಲವನ್ನು ಮಾರಾಟ ಮಾಡಿ ಹಣವನ್ನು ಸೊಸೈಟಿಗೆ ತುಂಬಿಲ್ಲ ಈವರೆಗೆ ಸರಿಯಾದ ಲೆಕ್ಕ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಕ್ಲರ್ಕ ಪ್ರಕಾಶ ಅಮರಾಪುರ ಗೊಬ್ಬರವನ್ನು ಮಾರಾಟ ಮಾಡಿದ್ದು ನೀಜ, ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿಗೂ ಮಾರಾಟ ಮಾಡಿದ್ದೇವೆ. ಸಾಕಷ್ಟು ರೈತರು ಹಣ ಕೊಡಬೇಕಿದ್ದು ವಸೂಲಿ ಮಾಡಿ ಸಂಘಕ್ಕೆ ಸಂಪೂರ್ಣ ಹಣ ತುಂಬುತ್ತೇನೆ, ಕಾಲಾವಕಾಶ ನೀಡಬೇಕು ಎಂದು ವಿನಂತಿಸಿಕೊಂಡ.
ಸುದ್ದಿಗೊಷ್ಠಿಯಲ್ಲಿ ಅಧ್ಯಕ್ಷ ಮೇಘರಾಜ ಪಾಟೀಲ್, ನಿರ್ದೇಶಕರಾದ ರೇಷ್ಮಾ ಪಾಟೀಲ್, ಅಶೋಕ ಮೇಟಿ, ಅನಂತ ಘೊಟ್ನೇಕರ, ಅಸ್ಪಾಕಹ್ಮದ ಪುಂಗಿ, ಬಾಬು ಮಿರಾಶಿ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಗೊಬ್ಬರ ಲೆಕ್ಕಪತ್ರದಲ್ಲಿ 26 ಲಕ್ಷ 50 ಸಾವಿರದ ಗೊಂದಲ, ಟಿಪಿಎಂಎಸ್ ಸಂಘದ ಕಾಂಗ್ರೇಸ್ ಬೆಂಬಲಿತ ಆಡಳಿತ, ತಪ್ಪಿತಸ್ಥ ಕ್ಲರ್ಕ ಪ್ರಕಾಶ ಅಮರಾಪುರ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...