• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರು ಅವರಿಂದ ಹಳಿಯಾಳದಲ್ಲಿ ಮತಯಾಚನೆ‌.

October 23, 2020 by Yogaraj SK Leave a Comment

ಹಳಿಯಾಳ :- ಪಶ್ಚಿಮ ಪದವೀಧರರ ಮತ ಕ್ಷೇತ್ರದಲ್ಲಿ ಕಳೆದ 6 ವರ್ಷಗಳ ಅವಧಿಯಲ್ಲಿ ನನ್ನ ಸೇವೆ ಮತ್ತು ಸಾಧನೆಯನ್ನು ನೋಡಿ ನನಗೆ ಮತ ನೀಡಿ ಎಂದು ಪಶ್ಚಿಮ ಪದವೀಧರ ಮತ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರು ಮತದಾರರಲ್ಲಿ ವಿನಂತಿಸಿದರು.

watermarked IMG 20201023 WA0092


ಪಶ್ಚಿಮ ಪದವೀಧರ ಮತ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆ ಗುರುವಾರ ಹಳಿಯಾಳ ಕ್ಷೇತ್ರಕ್ಕೆ ಮತಯಾಚನೆಗೆ ಆಗಮಿಸಿದ ಅವರು ಇಲ್ಲಿಯ ಪ್ರಸಿದ್ದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಹಳಿಯಾಳ ನ್ಯಾಯಾಲಯ, ಹವಗಿ ಡಿಗ್ರಿ ಕಾಲೇಜ್, ತಹಶೀಲ್ದಾರ್ ಕಾರ್ಯಾಲಯ ಹಾಗೂ ಹಲವು ಕಡೆಗಳಲ್ಲಿ ಪದವಿಧರ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡಿ ಬಳಿಕ ವಿ.ಡಿ ಹೆಗಡೆ ಪದವಿ ಪೂರ್ವ ಮಹಾವಿದ್ಯಾಲಯಲ್ಲಿ ನಡೆದ ಮತದಾರರ ಸಭೆಯಲ್ಲಿ ಮಾತನಾಡಿದರು.

watermarked IMG 20201023 WA0093


ಕಳೆದ 6 ವರ್ಷಗಳ ಅವಧಿಯಲ್ಲಿ ನನ್ನ ಮತಕ್ಷೇತ್ರಕ್ಕೆ ನಾನು ಸಲ್ಲಿಸಿರುವ ಸೇವೆಯನ್ನು
‘ಸದನದಲ್ಲಿ ಸಂಕನೂರ್’ ಮತ್ತು ‘ಸ್ಪಂದನೆ ಮತ್ತು ಸಾಧನೆ’ ಎಂಬ ಎರಡು ಪುಸ್ತಕಗಳಲ್ಲಿ ಸವಿಸ್ತಾರವಾಗಿ ದಾಖಲಿಸಿದ್ದು ಮತದಾರರಿಗೆ ಆ ಪುಸ್ತಕಗಳನ್ನು ನೀಡಿ ಮತಯಾಚನೆ ಮಾಡುತ್ತಿದ್ದೇನೆ. ನಾನು ನೀಡಿರುವ ಸೇವೆ, ಸಾಧನೆ ಮತ್ತು ಸ್ಪಂದನೆಗಳನ್ನು ಗಣನೆಗೆ ತೆಗೆದುಕೊಂಡು ಮತ್ತೊಮ್ಮೆ ನನ್ನನ್ನು ಪುನರಾಯ್ಕೆ ಮಾಡಬೇಕು ಎಂದು ಅಭ್ಯಥಿ ಸಂಕನೂರು ವಿನಂತಿಸಿದರು.

watermarked IMG 20201023 WA0097


ಕಳೆದೊಂದು ಅವಧಿಯಲ್ಲಿ ನಾನು ಸಂಕಲ್ಪ ಮಾಡಿದ್ದ ಎಲ್ಲಾ ಕೆಲಸಗಳನ್ನು ನನ್ನಿಂದ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಕಾರಣ ಆ ಅವಧಿಯ ಬಹುತೇಕ ಭಾಗದಲ್ಲಿ ರಾಜ್ಯದಲ್ಲಿ ಬಿಜೆಪಿಯೇತರ ಸರಕಾರಗಳು ಅಸ್ತಿತ್ವದಲ್ಲಿದ್ದವು. ಈಗ ರಾಜ್ಯದಲ್ಲಿ ನಮ್ಮದೇ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದೆ. ಮೇಲಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೌಕರರ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಈ ಅವಧಿಯಲ್ಲಿ ನನಗೆ ಮತ್ತೊಮ್ಮೆ ಅಧಿಕಾರ ವಹಿಸಿಕೊಟ್ಟರೆ, ಬಾಕಿ ಉಳಿದಿರುವ ನನ್ನ ಸಂಕಲ್ಪದ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳಿದರು.

watermarked IMG 20201023 WA0096

ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಜನ ಪ್ರತಿನಿಧಿಯಾದವರು ಸಾಮಾನ್ಯವಾಗಿ ಅಭ್ಯರ್ಥಿಯಾದಾಗ ಮಾಡಿದ ಸಂಕಲ್ಪಗಳನ್ನೆಲ್ಲ ಸಾಕಾರ ಮಾಡುವುದಕ್ಕೆ ಆಗುವುದಿಲ್ಲ ಆದರೂ ಈ ವಿಷಯದಲ್ಲಿ ವಿಪ ಸದಸ್ಯ ಸಂಕನೂರು ಅವರ ಸಾಧನೆ ಮತ್ತು ಸ್ಪಂದನೆ ಬೇರೆಯವರಿಗಿಂತ ವಿಸ್ತಾರವಾಗಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದ ಹೆಗಡೆ ಮತದಾರರು ಬಹುಮತಗಳ ಅಂತರದೊಂದಿಗೆ ಅವರನ್ನೇ ಮತ್ತೊಮ್ಮೆ ವಿಧಾನ ಪರಿಷತ್‍ಗೆ ಕಳಿಸುವಂತೆ ಕೊರಿದರು.

watermarked IMG 20201023 WA0095


ಈ ಸಂದರ್ಭದಲ್ಲಿ ಹಳಿಯಾಳ ಬಿಜೆಪಿ ಅಧ್ಯಕ್ಷ ಅಜೋಬಾ ಕರಂಜೆಕರ, ಪ್ರಮುಖರಾದ ಮಂಗೇಶ ದೇಶಪಾಂಡೆ, ಶಿವಾಜಿ ನರಸಾನಿ, ಅನಿಲ ಮುತ್ನಾಳ, ಪುರಸಭೆ ಸದಸ್ಯರಾದ ರೂಪಾ ಗಿರಿ, ಶಾಂತಾ ಹಿರೇಕರ, ಚಂದ್ರಕಾಂತ ಕಮ್ಮಾರ, ರಾಜೇಶ್ವರಿ ಹಿರೇಮಠ, ಉದಯ ಹೂಲಿ, ಸಂಗೀತಾ ಜಾಧವ, ಸಂತೋಷ ಘಟಕಾಂಬಳೆ, ಮುಖಂಡರಾದ ಜಯಲಕ್ಷ್ಮೀ ಚವ್ವಾಣ, ರತ್ನಮಾಲಾ ಮುಳೆ, ಯಲ್ಲಪ್ಪಾ ಹೊನ್ನೊಜಿ, ಉಮೇಶ ದೇಶಪಾಂಡೆ ಇತರರು ಇದ್ದರು.

watermarked IMG 20201023 WA0094

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News, Other Tagged With: Graduate Vote, SV Sankanoor Voter, Vidhan Sabha Elections, Visit Mahaganapathi Temple, voting, Worship, ಎಸ್ ವಿ ಸಂಕನೂರು ಮತದಾರ, ಪದವೀಧರ ಮತ ಕ್ಷೇತ್ರ, ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ, ವಿಧಾನ ಪರಿಷತ್ ಚುನಾವಣೆ, ಹಳಿಯಾಳ ಕ್ಷೇತ್ರಕ್ಕೆ ಮತಯಾಚನೆಗೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...