• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಳಚಿತು ಹಳಿಯಾಳ ಮಾಧ್ಯಮಲೋಕ ಹಿರಿಯ ಕೊಂಡಿ ಹಿರಿಯ ಪತ್ರಕರ್ತ ಬಿಆರ್ ವಿಭೂತೆ ಇನ್ನೂ ನೆನಪು ಮಾತ್ರ.

November 15, 2020 by Yogaraj SK Leave a Comment

ಹಳಿಯಾಳ: ಇಲ್ಲಿನ ಹಿರಿಯ ಪತ್ರಕರ್ತ ಬಿ ಆರ್ ವಿಭೂತೆ(79) ಹೃದಯಾಘಾತದಿಂದ ವಿಧಿವಶರಾಗುವ ಮೂಲಕ ಹಳಿಯಾಳ ಪತ್ರಿಕಾ ಕ್ಷೇತ್ರದಲ್ಲಿನ ಅತ್ಯಂತ ಹಿರಿಯ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ.ಹಳಿಯಾಳದ ಪತ್ರಿಕಾ ಕ್ಷೇತ್ರದಲ್ಲಿ ಸುಮಾರು_35 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿದ ಹಿರಿಮೆ ಅವರದು.

125110869 1317889578565435 556780164137694432 n
124874602 1317889615232098 3798474134667045832 n

ಹಳಿಯಾಳದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘವನ್ನು ಪ್ರಪ್ರಥಮಬಾರಿಗೆ ಹುಟ್ಟು ಹಾಕಿದ್ದು ಅವರೇ, ಹೀಗಾಗಿ ಹಳಿಯಾಳ_ಕಾರ್ಯನೀರತ ಪತ್ರಕರ್ತರ_ಸಂಘದ_ಸಂಸ್ಥಾಪಕ‌_ಅಧ್ಯಕ್ಷರಾಗಿದ್ದರೂ ಕೂಡ. ವಿಭುತೆ ಅವರಿಗೆ ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ತೀವ್ರವಾದ ಆಸಕ್ತಿ ಮತ್ತು ಪ್ರೌಡಿಮೆಗಳಿದ್ದವು. ಹೀಗಾಗಿ ಬಹುಭಾಷಾ ಪತ್ರಕರ್ತರಾಗಿ ಕನ್ನಡ, ಇಂಗ್ಲೀಷ್ ಹಾಗೂ ಮರಾಠಿ ಪತ್ರಿಕೆಗಳಿಗೆ ಅವರು ವರದಿಗಾರನಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದರು. ಅವರ ಪತ್ರಿಕಾ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಮಟ್ಟದ_ಶಾಮರಾವ್ ದತ್ತಿ_ಪ್ರಶಸ್ತಿಯನ್ನೂ ಹಾಗೂ ಕರ್ನಾಟಕ_ರಾಜ್ಯ ಮಾಧ್ಯಮ_ಅಕಾಡೆಮಿ_ಪ್ರಶಸ್ತಿಯನ್ನು_ನೀಡಿ ಅವರನ್ನು ಗೌರವಿಸಲಾಗಿತ್ತು. ಕೇವಲ ಇಲ್ಲಿನ ಮಾಧ್ಯಮ ಕ್ಷೇತ್ರದಲ್ಲಿನ ಸೇವೆ ಮಾತ್ರ ಅಲ್ಲದೇ, ಹವ್ಯಾಸಿ ಗಾಯಕರಾಗಿ ಅವರು ಸಂಗೀತ ಕ್ಷೇತ್ರದಲ್ಲಿ ಕೂಡ ಗಮನಾರ್ಹ ಕೊಡುಗೆ ನೀಡಿದ್ದರು. ಹಳೆಯ_ಚಿತ್ರ_ಸಂಗೀತ_ಪ್ರೇಮಿಗಳ_ಸಂಘ (OFMLA– ಓಲ್ಡ್ ಫಿಲ್ಮ್ ಮ್ಯೂಸಿಕ್ ಲವರ್ ಅಸೋಸಿಯೇಷನ್)ಕೂಡ ಅಸ್ತಿತ್ವಕ್ಕೆ ತಂದು, ಪ್ರತಿವರ್ಷ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಏರ್ಪಡಿಸಿ ಹಳಿಯಾಳ ಜನರ ಮನಗೆದ್ದಿದ್ದರು. ಗಣಿತ ಮತ್ತು ಇಂಗ್ಲಿಷ್ ಶಾಸ್ತ್ರಗಳಲ್ಲೂ ಅವರಿಗೆ ತೀವ್ರ ವಾದ ಆಸಕ್ತಿ ಇತ್ತಾದ್ದರಿಂದ, ಎಲ್ಲಾ ವಯೋಮಾನದ ಆಸಕ್ತರಿಗೆ ಅವರು ಟ್ಯೂಷನ್ ಶಿಕ್ಷಕರಾಗಿ ಬೋಧನೆ ಮಾಡಿದ್ದರು.ಮೂಲತಃ ಹುಬ್ಬಳ್ಳಿಯವರಾಗಿದ್ದ ಅವರು ನೌಕರಿಯ ನಿಮಿತ್ಯ ಹಳಿಯಾಳಕ್ಕೆ ವಲಸೆ ಬಂದಿದ್ದರು. ಒಂದು ಕಾಲದಲ್ಲಿ ಹಾಲಿ ಶಾಸಕ ಆರ್ ವಿ ದೇಶಪಾಂಡೆ ಅವರ ಸಹವರ್ತಿ ಆಗಿದ್ದ ಅವರು ಎಲ್ ಐ ಸಿ ಯ ಡೆವೆಲೆಪ್ಮೆಂಟ್ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಅದರ ಜೊತೆ ಜೊತೆಗೆ ಸಕ್ರಿಯ ಸಾರ್ವಜನಿಕ ಜೀವನದಲ್ಲಿ ಅವರು ತೊಡಗಿಸಿಕೊಂಡಿದ್ದರಾದರೂ, ನಂತರ ನೌಕರಿ ಬಿಟ್ಟು ಪೂರ್ಣಾವಧಿಯ ಪತ್ರಕರ್ತರಾಗಿ ಅಖಾಡಕ್ಕೆ ಧುಮುಕಿದ್ದರು.ಅವರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಸಂತಾಪ:- ಅವರ ನಿಧನಕ್ಕೆ ಹಳಿಯಾಳ ಕಾರ್ಯನಿರತ ಪತ್ರಕರ್ತರ ಸಂಘ, ಹಿರಿಯ ನಾಗರೀಕರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಪಂಚಾಯತ ಕಾವಲು ಸಂಘ, ಮಂಜು ಡ್ಯಾನ್ಸ್ ಕರಾಟೆ‌ ಸ್ಕೂಲ್, ಕಾಂಗ್ರೇಸ್ ಪಕ್ಷ, ಬಿಜೆಪಿ ಘಟಕ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಹಳಿಯಾಳದಲ್ಲಿಯೇ ಸಂಜೆ 3 ಗಂಟೆಯ ಸುಮಾರಿಗೆ ನೆರವೇರಿಸಲಾಗುವುದು ಎಂದು ಪರಿವಾರದ ಮೂಲಗಳು ತಿಳಿಸಿವೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: amateur singer, Being a Hubli, English, he has a keen interest in Kannada, hindi, Journalists, Marathi, Nakkuri, old-fashioned music lover's association, outdoor press, tuition teacher, Vibhuti., ಇಂಗ್ಲಿಷ್ ಭಾಷೆಗಳಲ್ಲಿ ತೀವ್ರವಾದ ಆಸಕ್ತಿ, ಟ್ಯೂಷನ್ ಶಿಕ್ಷಕ, ಪತ್ರಕರ್ತರ ಸಂಘ, ಮರಾಠಿ, ವಿಭುತೆ ಅವರಿಗೆ ಕನ್ನಡ, ಹವ್ಯಾಸಿ ಗಾಯಕ, ಹಳಿಯಾಳದ ಪತ್ರಿಕಾ ಕ್ಷೇತ್ರ, ಹಳೆಯ_ಚಿತ್ರ ಸಂಗೀತ ಪ್ರೇಮಿಗಳ ಸಂಘ, ಹಿಂದಿ, ಹುಬ್ಬಳ್ಳಿಯವರಾಗಿದ್ದ ಅವರು ನೌಕರಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...