• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಜಾತ್ರಾ ರಥೋತ್ಸವದ ನಿಮಿತ್ತ ಶಾಂತಿಪಾಲನ ಸಭೆ

February 17, 2021 by bkl news Leave a Comment

ಭಟ್ಕಳ: ಕೋವಿಡ ಕಾರಣದಿಂದ ಸ್ಥಗಿತಗೊಂಡಿದ್ದ ಭಟ್ಕಳ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಜಾತ್ರಾ ರಥೋತ್ಸವವೂ ಫೆ.೨೬ರಂದು ನಡೆಯಲಿದ್ದು, ಈ ಪ್ರಯುಕ್ತ ಬುಧವಾರ ಇಲ್ಲಿನ ಮಿನಿವಿಧಾನಸೌಧದಲ್ಲಿರುವ ಸಹಾಯಕ ಅಯುಕ್ತರ ಕಚೇರಿಯಲ್ಲಿ ಹಿಂದೂ-ಮುಸ್ಲಿಮ್ ಸಮುದಾಯದೊಂದಿಗೆ ಶಾಂತಿಪಾಲನ ಸಭೆ ನಡೆಯಿತು.

IMG 20210217 WA0096

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸಿಲ್ದಾರ್ ರವಿಚಂದ್ರ ರಥೋತ್ಸವಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ತಾಲೂಕಾಡಳಿತ ನೀಡಲಿದೆ ಕೋವಿಡ್ ಮುಂಜಾಗ್ರತ ನಿಯಮಗಳನ್ನು ಪಾಲಿಸುತ್ತ ಶಾಂತರೀತಿಯಲ್ಲಿ ರಥೋತ್ಸವ ಆಚರಿಸುವಂತೆ ಎರಡು ಸಮುದಾಯಗಳಲ್ಲಿ ಮನವಿ ಮಾಡಿಕೊಂಡಿರು.ಹನುಮಂತ ದೇವಸ್ಥಾನದ ಅರ್ಚಕರು ಮಾತನಾಡಿ ‘ಫೆ.೧೯ರಂದು ಜಾತ್ರಾ ಮಹೋತ್ಸವದ ಮೊದಲದಿನದ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಪ್ರತಿ ವರ್ಷದಂತೆ ಉಳಿದೆಲ್ಲ ಕಾರ್ಯಕ್ರಮವೂ ಜರುಗಲಿದೆ. ಫೆ. ೨೪ರಂದು ಹೂವಿನ ರಥ(ಚಿಕ್ಕ ರಥ)ವೂ ನಡೆಯಲಿದೆ. ಹಾಗೂ ಫೆ.೨೬ರಂದು ಮಹಾರಥೋತ್ಸವ ಹಾಗೂ ಫೆ.೨೮ರಂದು ಓಕುಳಿ ನಡೆಯಲಿದೆ. ಇವೆಲ್ಲವೂ ಧಾರ್ಮಿಕವಾಗಿ ನಡೆಸಿಕೊಂಡು ಬಂದಿರುವAತಹದ್ದಾಗಿದ್ದು, ಎಲ್ಲದಕ್ಕೂ ಸಹಕಾರ ನೀಡಬೇಕು ಎಂದರು.ಇದೇ ಸಂಧರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಸದ್ಯ ರಥ ಕಟ್ಟುವ ಕಾರ್ಯವೂ ಆರಂಭಗೊAಡಿದ್ದು ದೇವಸ್ಥಾನ ಮಾರ್ಗದ ರಸ್ತೆಯಲ್ಲಿ ವಿಪರೀತ ವಾಹನಗಳ ಓಡಾಟವಾಗಲಿದೆ. ಎರಡು ಕಡೆಯಿಂದ ಬರುವ ವಾಹನಗಳು ದೇವಸ್ಥಾನದ ಹಿಂಬದಿಯಿAದ ಓಡಾಟ ನಡೆಸಿದ್ದು ಅಪಘಾತದ ಜೊತೆಗೆ ಇಕ್ಕಟಿನ ರಸ್ತೆಯಾದ ಹಿನ್ನೆಲೆ ಮಾರಿಗುಡಿ ದೇವಸ್ಥಾನದಿಂದ ಮುಂಡಳ್ಳಿ ಯಕಡೆಗೆ ತೆರಳುವ ಏಕಮುಖ ಸಂಚಾರದ ರಸ್ತೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಿ ಭಾರಿವಾಹನ, ಕಾರು, ಆಟೋ ರಿಕ್ಷಾಗಳು ಸಂಚರಿಸುವAತೆ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.ಇದಕ್ಕೆ ಸಿಪಿಐ ದಿವಾಕರ ಅವರು ಈ ಬಗ್ಗೆ ಒಂದು ಬಾರಿ ಸ್ಥಳ ಭೇಟಿ ನಡೆಸಿ ರಸ್ತೆಯಲ್ಲಿನ ಪಾರ್ಕಿಂಗ ವ್ಯವಸ್ಥೆಗೆ ಒಂದೂ ಸೂಕ್ತ ಕ್ರಮ ಜರುಗಿಸಿ ಬಳಿಕ ವ್ಯವಸ್ಥಿತವಾಗಿ ದ್ವಿಮುಖ ವಾಹನ ಸಂಚಾರಕ್ಕೆ ಅನುವು ಮಾಡಲಿದ್ದೇವೆ ಎಂದರು.ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ಪರ್ವೇಜ ಕಾಶೀಂಜಿ ಮಾತನಾಡಿ ‘ಕೋವಿಡನಿಂದ ಎಲ್ಲಾ ಧರ್ಮದ ಹಬ್ಬ, ಊರ ಜಾತ್ರೆಗೆ ಸಮಸ್ಯೆಯಾಗಿದೆ. ಆದರೆ ಈಗ ಕೋರೋನಾ ಇಳಿಮುಖವಾಗುತ್ತಿದ್ದು ಜನರು ಜಾಗೃತರಾಗಿಯೇ ಹಬ್ಬದ ಆಚರಣೆ ಮಾಡಬೇಕು ಹಾಗೂ ಊರ ರಥೋತ್ಸವ ಕಳೆದ ವರ್ಷ ನಿಂತಿದ್ದರ ಹಿನ್ನೆಲೆ ಫೆ.೨೬ರಂದು ನಡೆಸಲು ತೀರ್ಮಾನಿಸಿದಂತೆ ಉತ್ತಮ ರೀತಿಯಲ್ಲಿ ನಡೆಯಲಿ ಹಾಗೂ ಜಾತ್ರಾ ರಥೋತ್ಸವಕ್ಕೆ ಪುರಸಭೆಯಿಂದ ಆಗಬೇಕಾದ ಎಲ್ಲಾ ಸಹಕಾರ ನೀಡಲಿದ್ದೇವ ಎಂದರು.ಸಭೆಯಲ್ಲಿ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು, ಹಿರಿಯರಾದ ಶಂಕರ ಶೆಟ್ಟಿ, ನಾಮಧಾರಿ ಸಮಾಜದ ಗೌರವಧ್ಯಕ್ಷ ಎಂ.ಆರ್.ನಾಯ್ಕ, ತಂಝೀಮ್ ಹಾಗೂ ಜಿ.ಡಿ.ಎಸ್ ಮುಖಂಡ ಇನಾಯತುಲ್ಲಾ ಶಾಬಂದ್ರಿ, ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝರ‍್ರಹ್ಮಾನ್ ನದ್ವಿ ರುಕ್ನುದ್ದೀನ್, ಮಾಜಿ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ಮುಂತಾದವರು ಇದ್ದರು.

IMG 20210217 WA0097

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News Tagged With: ಆಟೋ ರಿಕ್ಷಾಗಳು ಸಂಚರಿಸುವ, ಕಾರು, ದೇವಸ್ಥಾನದ ಆಡಳಿತ ಮಂಡಳಿ, ದೇವಸ್ಥಾನದ ಜಾತ್ರಾ ರಥೋತ್ಸ, ಭಾರಿವಾಹನ, ಮಿನಿವಿಧಾನಸೌಧ

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...