ನಾಗರಿಕರೇ ದ್ವಿಚಕ್ರ ವಾಹನಗಳನ್ನು ಮನೆಯಿಂದ ಹೊರ ತೆಗೆಯುವ ಮುನ್ನ ಜಾಗ್ರತೆ ಇರಲಿ. ನಿಮ್ಮ ವಾಗನಗಳಿಗೆ ಎರಡು ಕಡೆ ಕನ್ನಡಿ (ಮಿರರ್) ಹಾಗೂ ಇಂಡಿಕೇಟರ್ ಇಲ್ಲದೆ ಹೋದರೆ 500/- ದಂಡ ತರಬೇಕಾಗುತ್ತದೆ…!

ನಗರದ ವ್ಯಾಪ್ತಿ ರಸ್ತೆ ಅಪಘಾತ ಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಸಂಚಾರ ವಿಭಾಗದ ಪೋಲೀಸರು ಈಗ ವಾಹನಗಳಿಗೆ ಎರಡು ಕಡೆ ಕನ್ನಡಿ ಹಾಗೂ ಇಂಡಿಕೇಟರ ದೀಪಗಳ ಅಳವಡಿಕೆಯನ್ನು ಕಡ್ಡಯಗೊಳಿಸಿದ್ದಾರೆ. ಮುಂದಿನವಾರದಿಂದ ಈ ನಿಯಮ ಚಾರಿಗೆ ಬರಲಿದ.ಈ ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ. ದಂಡ ವಿಧಿಸಲಾಗುತ್ತದೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ನಗರದಲ್ಲಿ ಸಂಭವಿಸುತ್ತಿರುವ ಅಪಘಾತಗಳಲ್ಲಿ ಹೆಚ್ಚನದಾಗಿ ದ್ವಿಚಕ್ರ ವಾಹನಗಳೇ ತುತ್ತಾಗುತ್ತಿದ್ದು ಮರಣ ಪ್ರಮಾಣದಲ್ಲಿ ಸಹ
ದ್ವಿಚಕ್ರ ಸವಾರರ ಸಾವಿನ ಪ್ರಮಾಣವೇ ಅಧಿಕವಾಗಿದೆ ಎಂಬುದು ಅಪಘಾತಗಳ ವಿಮರ್ಶೆಯಿಂದ ಗೊತ್ತಾಗಿದೆ. ಈ ದ್ವಿಚಕ್ರ ವಾಹನಗಳ ಅಪಘಾತಘಳು ಪ್ಯೆಕಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದೆ ಸೈಡ್ ಮೀರರ್ ಗಳನ್ನು ಅಳವಡಿಸಿಕೊಳ್ಲದೆ ಹಾಗೂ ಇಂಡಿಕೇಡರ್ ದೀಪಗಳನ್ನು ಬಳಸದೆ ಅಡ್ಡಾದಿಡ್ಡಿಯಾಗಿ ಚಲಾ ಯಿಸುವುದರಿಂದ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಸ್ಯೆಡ್ ಮಿರರ್ ಮತ್ತು ಇಂಡಿಕೇಟರ್ ದೀಪಗಳ ಬಳಸದಿರುವ ದ್ವಿಚಕ್ರ ವಾಹನಗಳ ವಿರುದ್ದ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ ಎಂದು ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.
Leave a Comment