• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚಂಡಮಾರುತ ತಣ್ಣಗಾದ ಮೇಲು ಭಟ್ಕಳ ಬಂದರು, ತಲಗೋಡ, ಕರಿಕಲ್ ಗ್ರಾಮದ ನಿವಾಸಿಗರಲ್ಲಿ ಆತಂಕ

May 20, 2021 by bkl news Leave a Comment

ಭಟ್ಕಳ: ಪ್ರಕ್ರತಿಯ ಮುನಿಸೋ ಅಥವಾ ವಾತಾವರಣದ ವೈಪರೀತ್ಯವೋ ಕೋರೋನಾ ವೇಳೆಯೇ ಈ ವರ್ಷ ಜಲ ಗಂಡಾಂತರದಿಂದ ಕರಾವಳಿಯ ಭಟ್ಕಳದ ಸಮುದ್ರ ತೀರ ಪ್ರದೇಶದ ಜನರಿಗೆ ಚಂಡಮಾರುತದ ಅಬ್ಬರದಿಂದ ಸಮುದ್ರ ತಡೆಗೋಡೆ, ರಸ್ತೆ ಸಹಿತ ವಿದ್ಯುತ ಕಂಬಗಳೆಲ್ಲವೂ ನಾಶಗೊಂಡು ಮನೆಗಳಿಗೆ ನೀರು ನುಗ್ಗಿದ್ದರ ಹಿನ್ನೆಲೆ ಇವೆಲ್ಲವೂ ಶೀಘ್ರದಲ್ಲಿ ಸರಿಪಡಿಸಿದ್ದಲ್ಲಿ ಅನೂಕೂಲವಾಗಲಿದ್ದು ಇಲ್ಲವಾದಲ್ಲಿ ಮುಂಬರಲಿರುವ ಮಳೆಗಾಲ ಸ್ಥಳೀಯ ಮೀನುಗಾರ ಜನರ ಬದುಕನ್ನು ಕಸಿದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ವ್ಯಕ್ತವಾಗಿದೆ.

IMG 20210520 WA0125


ಅದೆಷ್ಟೋ ವರ್ಷದ ಹಿಂದೆ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸಮುದ್ರದ ಶಿಲೆಯ ತಡೆಗೋಡೆಗಳು ತೌಕ್ತೆ ಚಂಡಮಾರುತದ ರಭಸದ ಹೊಡೆತಕ್ಕೆ ಸಮುದ್ರ ಪಾಲಾಗಿದ್ದು, ಹಿಂದೆಂದು ಕಂಡು ಕೇಳರಿಯದ ಚಿತ್ರಣವನ್ನು ಸಮುದ್ರ ತೀರದ ಜನರು ನೋಡಿ ಆತಂಕಕ್ಕೊಳಗಾಗಿದ್ದಾರೆ. 
ಪ್ರಮುಖವಾಗಿ ಇಲ್ಲಿನ ಮಾವಿನಕುರ್ವೆ ಬಂದರು, ತಲಗೋಡ, ಕರಿಕಲ್‌ ಭಾಗವೂ ಸಮುದ್ರ ತೀರದ ಪ್ರದೇಶದ ವ್ಯಾಪ್ತಿಗೆ ಬರಲಿದ್ದು, ಜನರು ಹಾಕಲಾದ ತಡೆಗೋಡೆಗಳಿಂದ ಮಳೆಗಾಲ ಹಾಗೂ ಇಂತಹ ಚಂಡಮಾರಿತದ ಸಮಯದಲ್ಲಿ‌ ನೆಮ್ಮದಿ ನಿದ್ರೆಗೆ ಜಾರುತ್ತಿದ್ದ ಕಡಲವಾಸಿಗಳು ಈ ಚಂಡಮಾರುತಕ್ಕೆ ತಡೆಗೋಡೆಗಳೆಲ್ಲವೂ ಸಮುದ್ರ ಪಾಲಾಗಿವೆ‌. ಇದು ಅವರಿಗೆ ಮುಂಬರಲಿರುವ ಮಳೆಗಾಲದಲ್ಲಿ ಎಲ್ಲಿ‌ ಸಮುದ್ರದ ನೀರು ಉಕ್ಕಿ ಬಂದು ಮತ್ತೆ ನಿರಾಶ್ರೀತರಾಗುತ್ತೇವೆ ಎನ್ನುವ ಭಯದಲ್ಲಿ ತಾಲ್ಲೂಕಿನ ಕಡಲತೀರವಾಸಿಗಳು ಚಿಂತಾಕ್ರಾಂತರಾಗಿದ್ದಾರೆ.

IMG 20210520 WA0124


ಸದ್ಯ ಈ ಭಾಗದ ಕಡಲತೀರದ ಮಕ್ಕಳಲ್ಲಿ ಚಂಡಮಾರುತದಿಂದಾದ ದೊಡ್ಡ ಹೊಡೆತವೇ ತಡೆಗೋಡೆ ನೀರು ಪಾಲಾಗಿ ಅಂದಾಜು 300-400 ಮೀ. ದೂರದ ಕಡಲ ತೀರದ ಪ್ರದೇಶವನ್ನು ಸಮುದ್ರ ಆವರಿಸಿದ್ದು ರಸ್ತೆ ಹಾಗೂ ಮಣ್ಣುಗಳು ಕುಸಿತಕ್ಕೊಳಗಾಗಿ ಒಂದು ರೀತಿ ಸೇತುವೆ ಮಾದರಿಯಲ್ಲಿ ಮಾರ್ಪಟ್ಟಿದೆ.
ಈ‌ ಪ್ರದೇಶಗಳಲ್ಲಿ ಹಾನಿಯಾದ ತಡೆಗೋಡೆ ಹಾಗೂ ರಸ್ತೆಯ ಅಂದಾಜು ಮೊತ್ತ ಕೋಟಿಗೂ ಅಧಿಕವಾಗಿದ್ದು, ಒಂದು ಮಾಹಿತಿಯ ಪ್ರಕಾರ ಮಳೆಗಾಲದ ಪೂರ್ವದಲ್ಲಿ ತಡೆಗೋಡೆ ಪುನರ್ ನಿರ್ಮಾಣ ಕಷ್ಟಸಾಧ್ಯವಾಗಿದ್ದರು ಸಹ ತಕ್ಕ‌ಮಟ್ಟಿಗೆ ತಾತ್ಕಾಲಿಕ ತಡೆಗೋಡೆಯನ್ನು ಮರಳು ತುಂಬಿದ ಚೀಲವನ್ನು ಮಣ್ಣು ಕುಸಿದ ಜಾಗದಲ್ಲಿ ಹಾಕಿ ಬಳಿಕ ಅಳಿದುಳಿದ ಬಂಡೆ ಕಲ್ಲನ್ನು ತಡೆಗೋಡೆಯನ್ನಾಗಿ ಹಾಕುವ ಬಗ್ಗೆ ತಿಳಿದು ಬಂದಿದೆ. ಈಗಾಗಲೇ ಸ್ಥಳಕ್ಕೆ ತಡಗೋಡೆ ನಿರ್ಮಾಣದ ಇಂಜಿನಿಯರ ಹಾಗೂ ಗುತ್ತಿಗೆದಾರರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಈ ಕಾರ್ಯವೂ ಬಹಳ ಸವಾಲಾಗಿದ್ದು ಆದರೆ ಸದ್ಯಕ್ಕೆ ಇದರ ತಾತ್ಕಾಲಿಕ ಕೆಲಸವನ್ನು ಮಾಡುವ ಭರವಸೆ ನೀಡಿದ್ದಾರೆ.

IMG 20210520 WA0123


ಬದುಕು ಮೂರಾಬಟ್ಟೆ:ಕೇವಲ ತಡೆಗೋಡೆಯಿಂದ ಈ ಭಾಗದ ಸುಮಾರು 20-30  ನಿವಾಸಿಗರ ಮನೆಗೆ ನೀರು ನುಗ್ಗಿ ಮನೆಯ ಆಹಾರ ಪದಾರ್ಥಗಳು, ವಸ್ತುಗಳು, ಬಟ್ಟೆಗಳು ಹಾನಿಯಾಗಿದೆ. ಇದರ ಪರಿಣಾಮವಾಗಿ ಮನೆಯಲ್ಲಿ ವ್ರದ್ದರು, ಮಕ್ಕಳು, ಮಹಿಳೆಯರು ವಾಸವಿರಲು ಸಾದ್ಯವಾಗದೇ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಅತ್ತ ಕೋರೊನಾ ಹಿನ್ನೆಲೆ ಜನರು ಬೇರೆ ಅವರ ಮನೆಗೆ ತೆರಳಲು ಭಯಪಡುವ ದಿನದಲ್ಲಿ ಅನಿವಾರ್ಯವಾಗಿ ಸಂಬಂಧಿಕರ ಮನೆಗೆ ತೆರಳಬೇಕಾದ ಸ್ಥಿತಿ ಉದ್ಬವಿಸಿದೆ.
ಒಟ್ಟಾರೆ ಚಂಡಮಾರುತದ ಅಬ್ಬರ ತಣ್ಣಗಾದರು ಸಹ ಭಟ್ಕಳದ ಮಾವಿನಕುರ್ವೆ, ಬಂದರು, ತಲಗೋಡ, ಕರಿಕಲ್ ಗ್ರಾಮದ ನಿವಾಸಿಗರಲ್ಲಿ ಆತಂಕ ಹಾಗೇಯೇ ಇದ್ದು, ಸದ್ಯ ಸಚಿವರು, ಶಾಸಕರಾದಿಯಲ್ಲಿ ಭೇಟಿ‌ ನೀಡಿ ಕೊಟ್ಟ ಭರವಸೆಯಂತೆ ಶೀಘ್ರವಾಗಿ ಕೆಲಸಗಳು ನಡೆದಲ್ಲಿ ನಿವಾಸಿಗರು ನೆಮ್ಮದಿಯಿಂದ ಬದುಕಲು ಸಾದ್ಯವಿದ್ದು ಇಲ್ಲವಾದರೆ ಈಗಿರುವ ಪರಿಸ್ಥಿತಿ ಇನ್ನಷ್ಟು ಹದಗೆಡುವದಂತು ಸತ್ಯ.

ತೌಕ್ತೆ ಚಂಡಮಾರುತದಿಂದ ಹಾನಿಯಾದ ಶಿಲೆಯ ತಡೆಗೋಡೆ ಹಾಗೂ ಸಂಪರ್ಕ ರಸ್ತೆಗಳು ಮಳೆಗಾಲಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಕಾರಣ‌ ಕಷ್ಟಸಾಧ್ಯವಾಗಿದೆ. ಮಳೆಗಾಲದ ಪೂರ್ವದಲ್ಲಿ ಸರ್ಕಾರ ತಾತ್ಕಾಲಿಕ ತಡಗೋಡೆ ನಿರ್ಮಾಣ ಮಾಡದೇ ಇದಲ್ಲಿ ಮಳೆಗಾಲದಲ್ಲಿ ಬರುವ ದೈತ್ಯಾಕಾರದ ಸಮುದ್ರದ ಅಲೆಗಳು ಕಡಲತೀರದ ಮನೆ ಹಾಗೂ ಕೃಷಿ ಭೂಮಿಗೆ ನುಗ್ಗಿ‌ ಅನಾಹುತ ಸೃಷ್ಠಿಸುವುದು ಖಂಡಿತ. ಭಟ್ಕಳ ಶಾಸಕ ಸುನೀಲ‌ ನಾಯ್ಕ ಈಗಾಗಲೇ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಮಾಹಿತಿ ಪಡೆದುಕೊಂಡಿದ್ದು  ಶೀಘ್ರವೇ ಪುನರ್ ನಿರ್ಮಾಣ ಮಾಡಿಕೋಡುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಮುಖಂಡ ರಮೇಶ ಖಾರ್ವಿ  ತಿಳಿಸಿದ್ದಾರೆ.


ಚಂಡಮಾರುತದ ಅಬ್ಬರ ಇಳಿದು ಇಂದು 2-3 ದಿನಗಳು ಕಳೆದಿದ್ದು, ಈ ಸಮುದ್ರ ತೀರದ ರಸ್ತೆಯಲ್ಲಿ ಸಂಚಾರ ಮಾಡುವುದು ಯಾವತ್ತಿದ್ದರು ಆತಂಕವೇ ಸರಿ. ಇದರ ಹಿನ್ನಲೆ ಸದ್ಯಕ್ಕೆ ದ್ವಿ ಚಕ್ರ ವಾಹನ ಹೊರತಾಗಿ ಉಳಿದೆಲ್ಲ ವಾಹನದ ಸಂಚಾರ ಬಂದ್ ಮಾಡಲಾಗಿದೆ. ಒಂದಾನು ವೇಳೆ ಈ ನೀರು ಪಾಲಾದ ತಡೆಗೋಡೆ, ರಸ್ತೆಯ ಸಂಚಾರ ಶೀಘ್ರದಲ್ಲಿ ಆಗದಿದ್ದರೆ ಮೀನುಗಾರಿಕೆ ವಾಹನ ಸಂಚಾರಕ್ಕೆ ತೊಂದರೆಯಾಗಲಿದ್ದು, ಮೀನುಗಾರಿಕೆ ನಂಬಿ ಬದುಕು ಸಾಗಿಸುವವರಿಗೆ ಇದು ದುಸ್ಥಿತಿಯೇ ಆಗಲಿದೆ. ಚಂಡಮಾರುತದಿಂದ ವಿದ್ಯುತ ಕಂಬ, ಮನೆಗೆ ಸಂಪರ್ಕವಿರುವ ಕುಡಿಯುವ ನೀರಿನ ಪೈಪಗಳೆಲ್ಲವೂ ಸಮುದ್ರ ಪಾಲಾಗಿದೆ ಎಂಬುದು ಸ್ಥಳೀಯ  ಮೀನುಗಾರ ಮುಖಂಡ ರಾಮಾ ಖಾರ್ವಿ ಅವರ ಅಭಿಪ್ರಾಯವಾಗಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News, Trending Tagged With: ಕಡಲತೀರದ ಮನೆ, ಕೃಷಿ ಭೂಮಿಗೆ ನುಗ್ಗಿ‌ ಅನಾಹುತ ಸೃಷ್ಠಿಸುವುದು, ಕೋಟ್ಯಾಂತರ ರೂ, ಚಂಡಮಾರುತದ ಅಬ್ಬರ, ದೈತ್ಯಾಕಾರದ ಸಮುದ್ರದ ಅಲೆಗಳು, ಬಟ್ಟೆಗಳು ಹಾನಿ, ಮನೆಯ ಆಹಾರ ಪದಾರ್ಥಗಳು, ರಸ್ತೆ ಸಹಿತ, ವಸ್ತುಗಳು, ವಿದ್ಯುತ ಕಂಬ, ವೆಚ್ಚದಲ್ಲಿ ನಿರ್ಮಾಣ, ಸಮುದ್ರ ತಡೆಗೋಡೆ

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...