• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಭಟ್ಕಳ ಗ್ರಾಮೀಣ ಠಾಣೆ ಎಎಎಸೈಯಿಂದ ಕರಾಟೆ ಶಿಕ್ಷಕನ ಮೇಲೆ ಲಾಠಿಯಿಂದ ತಳಿತದ ಆರೋಪ;‘ಹಲ್ಲೆಕ್ಕೊಳಗಾದ ಗಂಡ ಮಡದಿಯಿಂದ ಶಾಸಕ ಸುನೀಲ ನಾಯ್ಕ ಬಳಿ ಹಲ್ಲೆಯ ಬಗ್ಗೆ ದೂರು’

June 9, 2021 by bkl news Leave a Comment

ಭಟ್ಕಳ: ತಾಲೂಕಿನ ಹೆಬಳೆ ಗಾಂಧಿ ನಗರದ ವೃತ್ತಿಯಲ್ಲಿ ಕರಾಟೆ ಶಿಕ್ಷಕ ಲಾಕ್ ಡೌನ ಹಿನ್ನೆಲೆ ಮನೆಯಂಗಳದಲ್ಲಿ ತರಕಾರಿ ವ್ಯಾಪಾರಿ ಮಾಡುತ್ತಿದ್ದು ಇವರ ಮನೆಯ ಎದುರಿಗೆ ಬೀದಿ ಬದಿ ಮಾವಿನ ಹಣ್ಣು ವ್ಯಾಪಾರ ಮಾಡುವ ಮಹಿಳೆಯರು ಇಟ್ಟ ಬಾಕ್ಸ ಯಾರದೆಂಬುದು ವಿಚಾರಿಸದೇ ಭಟ್ಕಳ ಗ್ರಾಮೀಣ ಠಾಣೆ ಎಎಸೈ ಓರ್ವರು ಏಕಾಏಕಿ ಶಿಕ್ಷಕನ ಮೇಲೆ ಲಾಠಿಯಿಂದ ಥಳಿಸಿದ್ದ ಆರೋಪದ ಮೇರೆಗೆ ನಾವು ಏನು ತಪ್ಪು ಮಾಡದೇ ನಮ್ಮ ಮೇಲೆ ಶನಿವಾರದಂದು ಹಲ್ಲೆಗೆ ಮುಂದಾಗಿರುವ ಎಎಎಸೈ ಅವರ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ಶಾಸಕ ಸುನೀಲ ನಾಯ್ಕ ಅವರನ್ನು ಭೇಟಿ ಮಾಡಿ ದೂರು ನೀಡಿ ಆದ ಅನ್ಯಾಯ ವ್ಯಕ್ತಪಡಿಸಿದ್ದಾರೆ.

Screenshot 20210609 101146 WhatsApp

ತಾಲೂಕಿನ ಹೆಬಳೆ ಗಾಂಧಿನಗರ ನಿವಾಸಿ ಹಾಗೂ ಹಲ್ಲೆಗೊಳಗಾದ ಕರಾಟೆ ಶಿಕ್ಷಕ ಉಮೇಶ ರಾಮಾ ಮೋಗೇರ ಎಂಬುವವರ ಮನೆಯ ಬಳಿ ಊರಿನಲ್ಲಿ ಬೀದಿ ಬದಿ ಹಾಗೂ ಮನೆಗೆ ಬುಟ್ಟಿಯಲ್ಲಿ ಮಾವಿನಹಣ್ಣು ವ್ಯಾಪಾರ ಮಾಡುವ ಮಹಿಳೆಯರು ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಎಂದಿನಂತೆ ಶನಿವಾರ ಭಟ್ಕಳದಲ್ಲಿ ಲಾಕ್ ಡೌನ ಇದ್ದ ಹಿನ್ನೆಲೆ ಮನೆಯ ಪಕ್ಕದಲ್ಲಿ ಶಿಕ್ಷಕ ಉಮೇಶ ಅವರು ತರಕಾರಿ ಅಂಗಡಿ ಮಾಡಿಕೊಂಡಿದ್ದು ಮೂರು ದಿನದ ಲಾಕ್ ಡೌನ ಹಿನ್ನೆಲೆ ಬಂದ್ ಮಾಡಿದ್ದರು. ಆದರೆ ಮಾವಿನಹಣ್ಣು ವ್ಯಾಪಾರ ಮಾಡುವ ಮಹಿಳೆಯರು 10-12 ಬುಟ್ಟಿನಲ್ಲಿ ಬಾಕ್ಸ ಇಟ್ಟು ತೆರಳಿದ್ದರು.

ಇದೇ ವೇಳೆ ಡ್ಯೂಟಿಗೆ ಬಂದ ಗ್ರಾಮೀಣ ಠಾಣಾ ಎಎಸೈ ಹಾಗೂ ಇಬ್ಬರು ಸಿಬ್ಬಂದಿಗಳು ಬಂದಿರುವುದನ್ನು ಕಂಡ ರಸ್ತೆಯಲ್ಲಿದ್ದ ಕೆಲ ಯುವಕರು ಶಿಕ್ಷಕನ ಮನೆಯ ಅಂಗಳಕ್ಕೆ ಓಡಿ ಬಂದಿದನ್ನೇ ಕಂಡ ಎಎಸೈ ಮಾವಿನಹಣ್ಣಿನ ಬಾಕ್ಸ ಯಾರದ್ದೆಂಬುದು ವಿಚಾರಿಸುತ್ತಾ ಏಕಾಏಕಿ ಕೈಯಲ್ಲಿದ್ದ ಲಾಠಿಯನ್ನು ಹಿಡಿದು ವ್ಯಾಪಾರಿ ಉಮೇಶ ಮೇಲೆ ತಳಿಸಿದ್ದಾರೆ. ತೀರಾ ಲಾಠಿಯ ನೋವಿನಿಂದ ಹೆದರಿ ಶಿಕ್ಷಕ ಉಮೇಶ ಮನೆಯೊಳಗೆ ಓಡಿದ್ದು ಮನೆಯೊಳಗಿನಿಂದ ಬಂದ ಆತನ ಮಡದಿ ಬೀಸಿದ ಲಾಠಿ ಹಿಡಿಯಲು ಹೋಗಿ ಆಕೆಯ ಕೈಗೂ ಸಹ ಬಲವಾದ ಪೆಟ್ಟು ಬಿದ್ದಿದ್ದು ನಮ್ಮ ಮೇಲೆ ಎಎಸೈ ಹಲ್ಲೆ ನಡೆಸಿ ದೈಹಿಕವಾಗಿ ಘಾಸಿ ಮಾಡಿದ್ದಾರೆಂದು ಶಾಸಕ ಸುನೀಲ ನಾಯ್ಕ ಸೋಮವಾರದಂದು ಭಟ್ಕಳ ಸರಕಾರಿ ಆಸ್ಪತ್ರೆಗೆ ಭೇಟಿಗೆ ಬಂದ ವೇಳೆ ದೂರು ನೀಡಿ ಎಎಸೈ ಅವರ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.


ಮೂರು ದಿನದ ಬಳಿಕ ಸರಕಾರಿ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಬಂದ ಶಿಕ್ಷಕ ಉಮೇಶ ಹಾಗೂ ಆತನ ಮಡದಿ ತೆರಳಿದ್ದು ಸದ್ಯ ಚಿಕಿತ್ಸೆ ಪಡೆದುಕೊಂಡಿದ್ದು ಎಎಸೈ ಮೇಲೆ ದೂರು ನೀಡುವುದಾಗಿ ಶಾಸಕರ ಬಳಿ ಹೇಳಿದ್ದಾರೆ ಎಂಬುದು ತಿಳಿದು ಬಂದಿದೆ.
ಉಮೇಶ ರಾಮಾ ಮೋಗೇರ- ಕರಾಟೆ ಶಿಕ್ಷಕ.‘ನಾನು ಓರ್ವ ಕರಾಟೆ ಶಿಕ್ಷಕನಾಗಿದ್ದು ಲಾಕ್ ಡೌನ ಹಿನ್ನೆಲೆ ಮನೆಯ ಪಕ್ಕದಲ್ಲಿ ತರಕಾರಿ ಅಂಗಡಿ ಹಾಕಿಕೊಂಡಿದ್ದೇನೆ. ಲಾಕಡೌನನಿಂದ ಕರಾಟೆ ತರಬೇತಿ ಇಲ್ಲದೇ ಜೀವನ ನಡೆಸುತ್ತಿದ್ದ ವೇಳೆ ಗ್ರಾಮೀಣ ಠಾಣೆ ಎಎಸೈ ಅವರು ತನಗೆ ಹಾಗೂ ನನ್ನ ಮಡದಿ ಮೇಲೆ ಲಾಠಿಯಿಂದ ಥಳಿಸಿದ್ದಾರೆ. ಈ ಹಿಂದಿನಿಂದಲೂ ನನಗೆ ಪೋಲೀಸರೆಂದರೆ ಹೆಮ್ಮೆಯಿದ್ದು ಇಂತಹ ಪೋಲೀಸರ ವರ್ತನೆಯಿಂದ ಉತ್ತಮ ಪೋಲೀಸರಿಗೂ ಕೆಟ್ಟ ಹೆಸರು ಬರಲಿದೆ. ಈ ಬಗ್ಗೆ ಶಾಸಕರು, ಪೋಲೀಸ ಮೇಲಾಧಿಕಾರಿಗಳು ಎಎಸೈ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News, Trending Tagged With: ಏಕಾಏಕಿ ಶಿಕ್ಷಕನ ಮೇಲೆ ಲಾಠಿಯಿಂದ ಥಳಿಸಿದ್ದ, ಪೋಲೀಸರ ವರ್ತನೆ, ಬೀದಿ ಬದಿ ಮಾವಿನ ಹಣ್ಣು ವ್ಯಾಪಾರ, ಮಾವಿನಹಣ್ಣಿನ ಬಾಕ್ಸ ಯಾರದ್ದೆಂಬುದು, ಶಿಕ್ಷಕನ ಮೇಲೆ ಲಾಠಿಯಿಂದ ತಳಿತ, ಹೆಬಳೆ ಗಾಂಧಿನಗರ ನಿವಾಸಿ ಹಾಗೂ ಹಲ್ಲೆ

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...