ಕಾರವಾರ ;
ನ್ಯಾಯಬೆಲೆ ಅಂಗಡಿಗಳಲ್ಲಿ ಇದುವರೆಗೆ ಇ-ಕೆವೈಸಿ ಮಾಡಿಸದೆ ಇರುವ ಪಡಿತರ ಚೀಟಿದಾರರಿಗೆ ಇ-ಕೆವೈಸಿಯನ್ನು ಮಾಡಿಸಿಕೊಳ್ಳಲು ಅಂತಿಮ ಕಾಲಾವಕಾಶ ನೀಡಲಾಗಿದೆ. ಅಗಸ್ಟ್ ತಿಂಗಳಲ್ಲಿ ಇ-ಕೆವೈಸಿ ಮಾಡಲು ಕೊನೆಯ ಅವಕಾಶ ನೀಡಲಾಗಿದ್ದು. ನ್ಯಾಯಬೆಲೆ ಅಂಗಡಿಗಳಲ್ಲಿ ಆಗಸ್ಟ್ 1ರಿಂದ10ರವರೆಗೆ ಇ-ಕೆವೈಸಿಯನ್ನು ಮಾಡಲಾಗುವುದು.

ನಂತರ ಇ-ಕೆವೈಸಿ ಮಾಡದೇ ಪಡಿತರ ಚೀಟಿದಾರರ ಪಡಿತರವನ್ನು ತಡೆಹಿಡಿಯಲಾಗುವುದು. ಇ-ಕೆವೈಸಿ ಸಂಗ್ರಹಣೆಗೆ ಯಾರಾದರೂ ಹಣ ಕೇಳಿದ್ದಲ್ಲಿ ಅಥವಾ ದೂರುಗಳಿದ್ದಲ್ಲಿ ಮತ್ತು ಇತರೆ ಮಾಹಿತಿಗೆ ಸಂಬಂಧಪಟ್ಟಂತೆ ಆಯಾ ತಾಲೂಕು ತಾಸಿಲ್ದಾರರು ಮತ್ತು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರವಾರ ಕಚೇರಿ ದೂರವಾಣಿ ಸಂಖ್ಯೆ; 08382 -226464, ಕಾರವಾರ ತಹಶೀಲ್ದಾರರ ಕಚೇರಿ:9448609712,08382-226331, ಅಂಕೋಲ ತಶಿಲ್ದಾರ ಕಚೇರಿ:9845397078,08388-230243, ಕುಮಟಾ:9481557642,08386-222054, ಹೊನ್ನಾವರ:9980135812,08387-220262, ಭಟ್ಕಳ:8105180342,08385-226422, ಶಿರಸಿ ;9739717754,08384-226383, ಸಿದ್ದಾಪುರ;8861641607,08389-230127, ಎಲ್ಲಾಪುರ;8867113551,08419-261129, ಮುಂಡಗೋಡ್:9448893878,08301-222122, ಹಳಿಯಾಳ;7483441715,08284-220134, ದಾಂಡೇಲಿ;7676781182, ಜೋಯಿಡಾ;9448825842,08383-282723, ಅನ್ನು ಸಂಪರ್ಕಿಸಬಹುದಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಂಜುನಾಥ ರೇವಣಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment