ಶಿರಸಿ : ಕಳೆದ ಹಲವು ತಿಂಗಳುಗಳಿAದ ನಕಲಿ ರೇಷನ್ ಕಾರ್ಡ್ ಹಾಗೂ ಮರಣ ಮತ್ತು ಜನನ ಪ್ರಮಾಣಪತ್ರವನ್ನು ಮಡಿಕೊಡುತ್ತಿದ್ದ ಆರೋಪಿಯ ಅಂಗಡಿ ಮೇಲೆ ಶಿರಸಿ ನಗರಠಾಣೆ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿರುವ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.

ಸಯ್ಯದ್ ಮುಜಾಮಿಲ್ ಮನ್ಸೂರ್, ಮುಸ್ಲಿಂಗಲ್ಲಿ ಶಿರಸಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಕಳೆದ ಹಲವು ತಿಂಗಳುಗಳಿAದ ನೂರಾರು ಜನರಿಗೆ ನಕಲಿ ರೇಷನ್ ಕಾರ್ಡ್ ಹಾಗೂ ನಕಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಮಾಡಿಕೊಡುವುದರ ಮೂಲಕ ಸರಕಾರಕ್ಕೆ ಹಾಗೂ ಸಾರ್ವಜನಿಕ ವಲಯಕ್ಕೆ ವಂಚನೆ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಈ ಹಿನ್ನಲೆಯಲ್ಲಿ ಶಿರಸಿ ನಗರಸಭೆ ಪೌರಾಯುಕ್ತ ಕೇಶವ ಎಂ. ಚೌಗುಲೆ 3-4 ದಿನಗಳ ಹಿಂದೆ ನಗರಠಾಣೆಯಲ್ಲಿ ದೂರು ದಾಖಲೆ ಮಾಡಿದ್ದರು. ಇದನ್ನು ಆಧರಿಸಿ ತನಿಖೆ ಕೈ ಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಈ ಯಶ್ವಸಿ ಕಾರ್ಯಾಚರಣೆಯಲ್ಲಿ ಪಿ,ಎಸ್.ಐ ರಾಜಕುಮಾರ ಅವರ ಕೈಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ಇನ್ನಷ್ಟು ತನಿಖೆ ಮುಂದುವರಿದಿದೆ. ನಕಲಿ ರೇಷನ್ ಕಾರ್ಡ್ ಹಾಗೂ ಜನನ-ಮರಣ ಪ್ರಮಾಣಪತ್ರ ಎಷ್ಟು ಜನರಿಗೆ ಕೊಟ್ಟಿದ್ದಾನೆ ಎಂಬ ಬಗ್ಗೆ ತೀವ್ರ ತನಿಖೆ ಕೈಗೊಳ್ಳಲಾಗಿದೆ.
Leave a Comment