• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಭಟ್ಕಳ ಪುರಸಭೆ ಅಂಗಡಿ ಹರಾಜು ಪ್ರಕ್ರಿಯೆ: ಮೊದಲ‌ ಹಂತದಲ್ಲಿ 9ಪುರಸಭೆ ಅಂಗಡಿ ಹರಾಜು ಯಶಸ್ವಿ’ಬಿಗಿ ಪೋಲಿಸ್ ಬಂದೋಬಸ್ತನಲ್ಲಿ ಶಾಂತಿಯುತ ಹರಾಜು’

October 19, 2021 by bkl news Leave a Comment

ಭಟ್ಕಳ: ಇಲ್ಲಿನ ಪುರಸಭೆಯ ಮೊದಲ ಹಂತದ 27 ಅಂಗಡಿಗಳ ಪೈಕಿ 9 ಅಂಗಡಿಗಳ ಹರಾಜು, 3 ಅಂಗಡಿಗಳ ಮರು ಹರಾಜು ಪ್ರಕ್ರಿಯೆ ನಡೆದಿದ್ದು, ಬಿಗಿ ಪೋಲಿಸ್ ಬಂದೋಬಸ್ತನಲ್ಲಿ ಸೋಮವಾರದಂದು ಸಹಾಯಕ ಆಯುಕ್ತೆ ಮಮತಾ ದೇವಿ ಜಿ. ಎಸ್. ಅವರ ನೇತ್ರತ್ವದಲ್ಲಿ ಪುರಸಭೆ ಸಭಾಗ್ರಹದಲ್ಲಿ ಶಾಂತಿಯುತವಾಗಿ ನಡೆಯಿತು.

ಪುರಸಭೆ ಖಾಲಿ ಇರುವ 27 ಹಳೆ ಅಂಗಡಿ ಮಳಿಗೆಗಳ ಹರಾಜಿಗೆ ಸಂಬಂಧಿಸಿದಂತೆ 67 ಅರ್ಜಿಗಳು ಬಂದಿದ್ದವು. ಈ ಪೈಕಿ ಕೆಲವು ಅಂಗಡಿಗಳು ಯಾರೂ ಅರ್ಜಿ ಸಲ್ಲಿಸಿಲ್ಲವಾಗಿದೆ ಎಂದು ತಿಳಿದು ಬಂದಿದೆ.ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಸಹಾಯಕ ಆಯುಕ್ತೆ ಮಮತಾದೇವಿ ಜಿ. ಎಸ್. ಅವರ ನೇತ್ರತ್ವದಲ್ಲಿ ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಆರಂಭದಲ್ಲಿ ಪುರಸಭೆ ಸಮುದಾಯ ಸಂಘಟನಾಧಿಕಾರಿ ವೇಣುಗೋಪಾಲ ಶಾಸ್ತ್ರಿ ಅವರು 12 ವರ್ಷದ ಅವಧಿಗೆ ಮಾಸಿಕ ಲೈಸೆನ್ಸ್ ನಾತೆಯಿಂದ ಅಂಗಡಿ ಮಳಿಗೆಯನ್ನು ತಾಬೆಗೆ ಪಡೆದುಕೊಳ್ಳುವ ಬಗ್ಗೆ 22 ಅಂಶಗಳುಳ್ಳ ಷರತ್ತುಗಳನ್ನು ಅರ್ಜಿ ಸಲ್ಲಿಸಿದ ಹರಾಜುದಾರರ ಎದುರು ಸವಿವರವಾಗಿ ಓದಿದರು.

Screenshot 20211019 214631 WhatsApp


ನಂತರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪುರಸಭೆ ಮಾಜಿ ಸದಸ್ಯ ವೆಂಕಟೇಶ ನಾಯ್ಕ ಮಾತನಾಡಿ ‘ಸದ್ಯ ಹರಾಜು ಪ್ರಕ್ರಿಯೆ ನಡೆಯುತ್ತಿರುವ ಅಂಗಡಿ‌ ಮಳಿಗೆಗಳಿರುವುದು ಹಳೆ ಪುರಸಭೆ ಕಟ್ಟಡದಲ್ಲಿದ್ದು, ಆದರೆ ಆ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಹರಾಜಿನಲ್ಲಿ ಅಂಗಡಿಕಾರರು ಅಂಗಡಿ ಪಡೆದು ಸಾವಿರಾರು ಗಟ್ಟಲೇ ಹಣ ಬಾಡಿಗೆ ನೀಡಿ ಕಟ್ಟಡ ಏನಾದರು ಬಿದ್ದರೆ ಅದಕ್ಕೆ ಪೂರಕ ವ್ಯವಸ್ಥೆ ಇದೆಯಾ? ಅಂಗಡಿಕಾರ ತನ್ನ ಸಂಸಾರ ಸಾಗಿಸಲು ಅಂಗಡಿ ಪಡೆದು ಅಂಗಡಿಯಲ್ಲಿ ಇರುವ ವೇಳೆ ಅನಾಹುತ ಆದರೆ ಏನು ಗತಿ ಯಾರು ಹೊಣೆಯಾಗಲಿದ್ದಾರೆ. ಅದಕ್ಕೆ ಪುರಸಭೆಯಿಂದ ಅಂಗಡಿಕಾರನಿಗೆ ಯಾವುದಾದರು ಪರಿಹಾರ ನೀಡಲಿದ್ದಾರೆಯೇ ಎಂದು ಪ್ರಶ್ನಿಸಿದರು.


ಇದಕ್ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಪರ್ವೇಕ್ ಕಾಶಿಂಜೀ ‘ಅಂಗಡಿ ಹರಾಜಿನಲ್ಲಿ ಪಡೆದ ಅಂಗಡಿಕಾರರಿಗೆ ಸಾಮಾನ್ಯ ಷರತ್ತುಗಳನ್ನು ಓದಿ ತಿಳಿಸಲಾಗಿದೆ. ಈಗ ಕಟ್ಟಡ ಶಿಥಿಲಾವಸ್ಥೆಗೆ ಬಂದಿರುವ ಬಗ್ಗೆ ಹರಾಜಿನಲ್ಲಿ ಮಾತನಾಡುವುದು ಸರಿಯಲ್ಲ. ಒಂದು ವೇಳೆ ಕಟ್ಟಡ ಶಿಥಿಲಾವಸ್ತೆಯಲ್ಲಿದ್ದಲ್ಲಿ ಈ ಬಗ್ಗೆ ಗಮನ ಹರಿಸಿ ಒಂದು ನೋಟಿಸ್ ನೀಡಿ ಅವರನ್ನು ಖುಲ್ಲಾ ಪಡಿಸಿ ತದನಂತರ ಪರ್ಯಾಯ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು. ಸದ್ಯಕ್ಕೆ ಯಾವುದೇ ನಿಖರ ಭರವಸೆ ನೀಡಲು ಸಾಧ್ಯವಿಲ್ಲ ಪ್ರತ್ಯುತ್ತರಿಸಿದರು.


ತದನಂತರ ಪುರಸಭೆ ಸಮುದಾಯ ಸಂಘಟನಾಧಿಕಾರಿ ವೇಣುಗೋಪಾಲ ಶಾಸ್ತ್ರಿ ಹಾಗೂ ಪುರಸಭೆ ತೆರಿಗೆ ವಸೂಲಿ ಸಹಾಯಕ ಲೂಯಿಸ್ ಡಿಸೋಜಾ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು.ಪುರಸಭೆಯ 27 ಅಂಗಡಿಗಳ ಹರಾಜು ಪ್ರಕ್ರಿಯೆ ಆರಂಭಗೊಂಡಿದ್ದು ಅರ್ಜಿ ಸಲ್ಲಿಸಿದ 67 ಮಂದಿ ಬಿಡ್ ದಾದರು ಅಂಗಡಿ ಹರಾಜಿನಲ್ಲಿ ಪಾಲ್ಗೊಂಡರು.ಒಟ್ಟು 9 ಅಂಗಡಿಯನ್ನು ಬಿಡ್ ದಾರರು ಹರಾಜು ಮೂಲಕ ಸರಕಾರದ ನಿಗದಿತ ಬೆಲೆಗಿಂತ 4-5 ಪಟ್ಟು ಹೆಚ್ಚು ಬೆಲೆಗೆ ಹರಾಜು ಕೂಗಿ ಸ್ಪರ್ಧೆಗಿಳಿದ ಅವರು ತಮಗೆ ಅನುಕೂಲವಾದ ಬಾಡಿಗೆ ಮೊತ್ತಕ್ಕೆ ಅಂಗಡಿಗಳನ್ನು ಹರಾಜು ಕೂಗಿ ಪಡೆದುಕೊಂಡರು. 


ಈ ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಕಾಯ್ದಿರಿಸಿದ ಅಂಗಡಿ ಹರಾಜು ಹಾಕುವ ವೇಳೆ ಹರಾಜಿನಲ್ಲಿ ಭಾಗವಹಿಸಿದ ದಲಿತ ಯುವ ಮುಖಂಡ ದಿನೇಶ್ ಪಾವಸ್ಕರ ಮಾತನಾಡಿ ‘ಪುರಸಭೆ ಅಧಿಕಾರಿಗಳು ನೈಜ ದಲಿತರು ಯಾರು ಎಂದು ನೀವು ಸರಿಯಾಗಿ ದಾಖಲಾತಿ ಪರಿಶೀಲನೆ ಮಾಡದೇ ಹರಾಜು ಪ್ರಕ್ರಿಯೆ ನಡೆಸಿದ್ದು ಸರಿ ಅಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಪುರಸಭಾ ಅಧಿಕಾರಿಗಳು ನೀವು ಕಾನೂನಿನ ವಿರುದ್ಧವಾಗಿ ಈ ಹರಾಜು ಪ್ರಕ್ರಿಯೆ ನಡೆಸುತ್ತಿದ್ದೀರಿ. ಇದರಿಂದ ನೈಜ ದಲಿತರಿಗೆ ಅನ್ಯಾಯ ಆಗುತ್ತಿದೆ ಎಂದು ಹರಾಜು ಪ್ರಕ್ರಿಯೆಯ ವೇಳೆ ಗಟ್ಟಿ ಧ್ವನಿಯಲ್ಲಿ ನೇರ ಆರೋಪ ಮಾಡಿದರು.
ಪುರಸಭೆ ಅಧಿಕಾರಿಗಳು ಮೊದಲು ನೈಜ ದಲಿತರು ಯಾರು ಎಂದು ಅವರ ಜಾತಿ ಪ್ರಮಾಣ ಪತ್ರ ಸರಿಯಾಗಿ ಇದೆಯೋ , ಇಲ್ಲ ಎಂದು ಪರಿಶೀಲಿಸಿ ಈ ಹರಾಜು ಪ್ರಕ್ರಿಯೆ ನಡೆಸಬೇಕಿತ್ತು ಎಂದ ಆಗ್ರಹಿಸಿದರು.


ಈ ಸಂದರ್ಭದಲ್ಲಿ ತಹಸೀಲ್ದಾರ ರವಿಚಂದ್ರ, ಪುರಸಭಾ ಮುಖ್ಯಾಧಿಕಾರಿ ರಾಧಿಕಾ ಎಸ್.ಎಸ್., ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಫಯಾಜ್ ಮುಲ್ಲಾ, ಪುರಸಬಾ ಸದಸ್ಯರು ಉಪಸ್ಥಿತರಿದ್ದರು. 
ಈ ಹರಾಜು ಪ್ರಕ್ರಿಯೆಗೆ ಸಿ.ಪಿ.ಐ ದಿವಾಕರ ನೇತೃತ್ವದಲ್ಲಿ ನಗರ ಠಾಣೆ ಪಿ.ಎಸ್.ಐ ಸುಮಾ ಆಚಾರ್ಯ, ಹೆಚ್. ಕುಡಗುಂಟಿ, ಗ್ರಾಮೀಣ ಠಾಣೆ ಪಿ.ಎಸ್.ಐ ಭರತ್ ಕುಮಾರ್ ಹಾಗೂ ಪೋಲೀಸ್ ಸಿಬ್ಬಂದಿಗಳು ಬಿಗಿ ಬಂದೋಬಸ್ತ ಒದಗಿಸಿದರು.

IMG 20211010 WA0065
IMG 20211010 WA0066
IMG 20211010 WA0064

shri devaki krishna wash point karki naka honavar contact; sachin mesta 9538529046,8310014860

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News Tagged With: ಅಂಗಡಿ ಪಡೆದು ಅಂಗಡಿ, ಕಟ್ಟಡ ಶಿಥಿಲಾವಸ್ಥೆ, ಪುರಸಭೆ ಖಾಲಿ ಇರುವ 27 ಹಳೆ ಅಂಗಡಿ ಮಳಿಗೆ, ಸಾವಿರಾರು ಗಟ್ಟಲೇ ಹಣ ಬಾಡಿಗೆ ನೀಡಿ ಕಟ್ಟಡ ಏನಾದರು ಬಿದ್ದರೆ

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...