ಅಂಕೋಲಾ : ಅಂಗಡಿಯಲ್ಲಿ ಮಟಕಾ ಆಡಿಸುತ್ತಿದ್ದ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಓರ್ವನನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಬಳಲೆ ಕನ್ನಡ ಶಾಲೆಯ ಬಳಿ ನಡೆದಿದೆ.
ಮಂಜು ಯಾನೆ ಹನುಮಂತ ನಾಯ್ಕ ವಶದಲ್ಲಿರುವಾತ. ಮಾದನಗೇರಿ ಬಳಲೆಯಲ್ಲಿ ಅಂಗಡಿಯೊAದನ್ನು ಇಟ್ಟುಕೊಂಡಿದ್ದ ಈತ ಹಣದ ಲಾಭಕ್ಕಾಗಿ ಮಟಕಾ ಜೂಜು ನಡೆಸುತ್ತಿದ್ದ ಎನ್ನಲಾಗಿದೆ.
ಬಂಧಿತನಿAದ ರೂ. 2780 ಹಾಗೂ ಓಸಿಆಟಕ್ಕೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಎಸ್ಐ ಪ್ರೇಮನಗೌಡ ಪಾಟೀಲ ದಾಳಿಯ ನೇತ್ರತ್ವ ವಹಿಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment