ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮದ ಸಂತೇಗುಳಿ ಶಾಲೆ ಹಾಗೂ ಅಂಚೇಕಛೇರಿ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಒಳಪ್ರವೇಶಿಸಿದ ಕಳ್ಳರು ಶಾಲಾ ಕೊಠಡಿಯ ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ. ಅದೇ ಕಂಪೌಡ ಒಳಗಡೆ ಇರುವ ಅಂಚೇಕಚೇರಿ ಬಾಗಿಲ ಬೀಗ ಮುರಿದು ಒಳಪ್ರವೇಶಿಸಿ ಕಛೇರಿ ಒಳಗಿನ ಗೊಡ್ರೆಜ್ ಬೀಗ ಮುರಿದ ಕಳ್ಳತನಕ್ಕೆ ಯತ್ನಿಸಿದ್ದು, ಕಾಗದಪತ್ರಗಳು ಚೆಲ್ಲಾಪಿಲ್ಲಿಯಾಗಿದೆ. ಆದರೆ ಯಾವುದೇ ಹಣ ಹಾಗೂ ಕಾಗದಪತ್ರಗಳು ಸಮಸ್ಯೆ ಉಂಟಾಗಿಲ್ಲ.

ಅAಚೆ ಕಚೇರಿಗೆ ಹಣದ ಉದ್ದೇಶವಿಟ್ಟು ಕಳ್ಳತನ ಮಾಡಿದ್ದರೂ, ಶಾಲೆಗೆ ಟಿವಿ ಹಾಗೂ ಕಂಪ್ಯೂಟರ್ ಕದಿಯಲು ಬಂದಿರಬಹುದೆAದು ಅಂದಾಜಿಸಲಾಗಿದೆ. ಮಂಗಳವಾರ ಶಾಲೆ ಬಾಗಿಲು ತೆರೆಯುವಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಹೊನ್ನಾವರ ಠಾಣಿಯ ಪಿಎಸೈ ಮಹಾಂತೇಶ, ಸಿಬ್ಬಂದಿಗಳಾದ ಮಹಾವೀರ, ಶೇಖರ್, ಶಿವಾನಂದ ಚಿತ್ರಗಿ ತಂಡ ಭೇಟಿ ನೀಡಿ ಸಮೀಪದ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ವಶಕ್ಕೆ ಪಡೆದಿದ್ದಾರೆ.
ಗ್ರಾ.ಪಂ. ಉಪಾಧ್ಯಕ್ಷ ಕಿರಣ ಹೆಗಡೆ, ಪಿಡಿಓ ಮಹೇಶ ನಾಯ್ಕ, ಶಿಕ್ಷಣ ಇಲಾಖೆ ಅಂಚೆ ಇಲಾಖೆ ಅಧಿಕಾರಿಗಳು ಘಟನೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
Leave a Comment