ಜೋಯಿಡಾ : ಜೋಯಿಡಾ ತಾಲೂಕಿನ ಗುಂದದ ಶ್ರೀ ಕೃಷ್ಣ ಹೆಗಡೆ ಇವರಿಗೆ ಏಷೀಯಾ ವೇದಿಕ್ ಕಲ್ಚರಲ್ ರಿಸರ್ಚ್ ಸಂಸ್ಥೆ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಲಾಗಿದೆ.

ಸದ್ಯ ಬೆಂಗಳೂರಿನಲ್ಲಿ ತಮ್ಮದೇ ಕಲ್ಪತರು ಫೌಂಡೇಶನ್ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕೃಷ್ಣ ಹೆಗಡೆ ಇವರೆಗೆ, ಜ್ಯೋತಿಷ್ಯ, ವೇದ ಆಗಮ ವಿಷಯದಲ್ಲಿ ಮಾಡಿರುವ ಸಾಧನೆಯನ್ನು ಗಮನಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಲಾಗಿದೆ.
ಶ್ರೀ ಅನಂತ ಹೆಗಡೆ ಮತ್ತು ಶ್ರೀಮತಿ ಸುಶೀಲಾ ಹೆಗಡೆ ಇವರ ಮಗನಾಗಿರುವ ಶ್ರೀ ಕೃಷ್ಣ ಹೆಗಡೆ ಇವರ ಈ ಸಾಧನೆಯಗೆ ತಂದೆ ತಾಯಿ ಹಾಗೂ ಊರನಾಗರಿಕರು ಅಭಿನಂದಿಸಿದ್ದಾರೆ.
Leave a Comment