ಮನೆಯಲ್ಲೇ ಕುಳಿತು ಪ್ರತಿದಿನ ಸಾವಿರಾರು ರೂ. ಗಳಿಸಿ ;1.62 ಲ.ರೂ. ಪಂಗನಾಮ
ಕಾರವಾರ:
ವಾಟ್ಸಾಪ್ನಲ್ಲಿ ಅಪರಿಚಿತ ನಂಬರ್ನಿಂದ ಬಂದ ಮನೆಯಲ್ಲೇ ಕುಳಿತು ಪ್ರತಿದಿನ ಸಾವಿರಾರು ರೂ. ಗಳಿಸಿ ಎಂಬ ಮೆಸ್ಸೇಜ್ ನೋಡಿ ಮರುಳಾದ ಕಾರವಾರ ನಗರದ ಬಿಎಸ್ಎನ್ಎಲ್ ಕಚೇರಿ ಉದ್ಯೋಗಿಯೋರ್ವರು ಲಕ್ಷಾಂತರ ರೂ. ಪಂಗನಾಮ ಹಾಕಿಸಿಕೊಂಡಿದ್ದಾರೆ.
ಹರಿಯಾಣ ರಾಜ್ಯದ ಸಂದೀಪ ಕೃಷ್ಣ ಕುಮಾರ ಹಣ ಕಳೆದುಕೊಂಡವರು. ಸಂದೀಪ ಅವರಿಗೆ ಆ.2 ರಂದು ವಾಟ್ಸಾಪ್ನಲ್ಲಿ ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿದ್ದು ಅದರಲ್ಲಿ ‘ಗೂಗಲ್ನಲ್ಲಿ ಹೊಟೇಲ್ ರಿವ್ಯೂ ಮಾಡಿ ಮನೆಯಲ್ಲೇ ಕುಳಿತು 2700 ರಿಂದ 6000 ರೂ.ವರೆಗೆ ಪ್ರತಿದಿನ ಹಣ ಗಳಿಸಬಹುದು ಎಂದು ನಮೂದಾಗಿತ್ತು

ಮನೆಯಲ್ಲೇ ಕುಳಿತು ಪ್ರತಿದಿನ ಸಾವಿರಾರು ರೂ. ಗಳಿಸಿ ;1.62 ಲ.ರೂ. ಪಂಗನಾಮ
. ಈ ಬಗ್ಗೆ ಅವರು ಕೆಲಸ ಮಾಡಲು ಒಪ್ಪಿಗೆ ಇದೆ ಎಂದು ರಿಪ್ಲೆ ಮಾಡಿದಾಗ ಟೆಲಿಗ್ರಾಂ ಲಿಂಕ್ ಬಂದಿದ್ದು ಅದನ್ನು ಓಪನ್ ಮಾಡಿದಾಗ ಚಾಟ್ ಮಾಡಿದ ಆರೋಪಿತರು ಅದರಲ್ಲಿ ವೈಯಕ್ತಿಕ ವಿವರ ಪಡೆದಿದ್ದಾರೆ. ಬಳಿಕ ಆರೋಪಿತರು 3 ಹೊಟೆಲ್ಗಳ ಲಿಂಕ್ ಕಳುಹಿಸಿ ಅವುಗಳಿಗೆ 5 ಸ್ಟಾರ್ ರಿವ್ಯೂ ನೀಡುವಂತೆ ಹೇಳಿದ್ದಾರೆ.
ರಿವ್ಯೂ ನೀಡಿದ ಬಳಿಕ 150 ರೂ. ಗಳನ್ನು ವ್ಯಕ್ತಿಯ ಖಾತೆಗೆ ಜಮಾ ಮಾಡಲಾಗಿದೆ. ಇದಾದ ಬಳಿಕ ಆ.3 ರಂದು ಒಟ್ಟೂ 21 ಟಾಸ್ಕ್ಗಳನ್ನು ಪೂರ್ತಿಗೊಳಿಸಿದರೆ 1900 ರೂ. ನೀಡುವುದಾಗಿ ಆರೋಪಿತರು ತಿಳಿಸಿದ್ದು ಜೊತೆಗೆ 3 ಪ್ರಿಪೇಡ್ ಟಾಸ್ಕ್ ಮಾಡಿದರೆ ಹೆಚ್ಚಿನ ಲಾಭ ಬರುವುದಾಗಿ ಆಮಿಷವೊಡ್ಡಿದ್ದಾರೆ.
ಇದನ್ನು ನಂಬಿದ ವ್ಯಕ್ತಿಯು ಆರೋಪಿತರು ಹೇಳಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟೂ 1,62,000 ರೂ. ಗಳನ್ನು ಜಮಾ ಮಾಡಿದ್ದಾರೆ. ಆದರೆ ಆ ಬಳಿಕ ತಮಗೆ ಯಾವುದೇ ಲಾಭಾಂಶವೂ ಬಂದಿಲ್ಲ, ಡಿಪಾಸಿಟ್ ಮಾಡಿದ ಹಣವೂ ಬಂದಿಲ್ಲ ಎಂದು ದೂರು ದಾಖಲಿಸಿದ್ದಾರೆ.
Leave a Comment