ಕಾರವಾರ:
ಸಾಂಕ್ರಾಮಿಕ ರೋಗ ತಡೆಗೆ ಅಗತ್ಯ ಕ್ರಮ ಜರುಗಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕಕುಮಾರ ಹೇಳಿದರು.
ಶುಕ್ರವಾರ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಡೇಂಗ್ಯು, ಮಲೆರಿಯಾ, ಹಂದಿ ಜ್ವರ, ಇಲಿ ಜ್ವರ, ಚಿಕನ್ಗುನ್ಯಾ ಸೇರಿದಂತೆ ವಿವಿಧ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಆಂದೋಲನವನ್ನು ಹಮ್ಮಿಕೊಂಡಿರುವ ಬಗ್ಗೆ ತಿಳಿಸಿದರು. ಈಗಾಗಲೇ ಗ್ರಾಮ ಪಂಚಾಐತ ಸದಸ್ಯರಿಗೆ ಹಾಗೂ ವಿವಿಧ ಸಿಬ್ಬಂದಿಗೆ ಆರೋಗ್ಯ ಜಾಗೃತಿ ಬಗ್ಗೆ ತಿಳುವಳಿಕೆ ನೀಡಲಾಗಿದೆ. ಈ ವರ್ಷ ಯಾವದೇ ಚಿಕನ್ ಗುನ್ಯ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ ಎಂದು ಅವರು ವಿವರಿಸಿದರು.
ಜೂನ್ನಿಂದ ಶಾಲೆಗಳು ಆರಂಭವಾಗಲಿದ್ದು, ಅಲ್ಲಿನ ಮಕ್ಕಳಿಗೆ ರೋಗಗಳ ಬಗ್ಗೆ ಮಾಹಿತಿ ನೀಡಲಾಗುವದು. ರೋಗ ತಡೆಯಲು ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ಅರಿವು ನೀಡಲಾಗುವದು ಎಂದರು. ಮಳೆಗಾಲದ ಆರಂಭದ ದಿನಗಳಾದ ಜೂನ್ನಲ್ಲಿ ಮಲೆರಿಯಾ ಹಾಗೂ ಜುಲೈನಲ್ಲಿ ಡೇಂಗ್ಯುಜ್ವರ ಹರಡುವ ಸಾಧ್ಯತೆ ಹೆಚ್ಚಳವಾಗಿರುತ್ತದೆ. ವಲಸೆ ಕಾರ್ಮಿಕರಿಂದ ರೋಗ ಹರಡುವ ಸಾಧ್ಯತೆ ಇದ್ದು, ವಲಸೆ ಕಾರ್ಮಿಕರು ಶುಚಿತ್ವದತ್ತ ಗಮನ ಕೊಡಬೇಕು ಎಂದು ಅವರು ಕಿವಿಮಾತು ಹೇಳಿದರು. ಕಳೆದ ವರ್ಷ 93 ಡೆಂಗ್ಯು ಪ್ರಕರಣಗಳು ಪತ್ತೆಯಾಗಿದೆ ಎಂದು ಹೇಳಿದರು.
ನಗರದ ಬೈತಖೋಲ್ದಲ್ಲಿ ನಗರ ಆರೋಗ್ಯ ಕೇಂದ್ರ ಸ್ಥಾಪಿಸಲಾಗುವದು ಎಂದು ತಿಳಿಸಿದರು. ಜಿಲ್ಲಾ ಅಶ್ರೀತ ರೋಗ ನಿಯಂತ್ರಣಾಧಿಕಾರಿ ಡಾ. ರಮೇಶ ರಾವ್ ಇದ್ದರು
Leave a Comment