ಹಳಿಯಾಳ:- ನವೀಲನ್ನು ಕೊಂದು ಮಾಂಸ ಸಾಗಿಸುತ್ತಿದ್ದವರ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕೃತ್ಯಕ್ಕೆ ಬಳಸಿದ ಬೈಕ್, ಸಲಕರಣೆಗಳು ಹಾಗೂ ಮಾಂಸವನ್ನು ವಶಕ್ಕೆ ಪಡೆದಿದ್ದು ಪರಾರಿಯಾಗಿರುವ ಇಬ್ಬರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಾಂಬ್ರಾಣಿ ವಲಯದ ಚಿನಗಿನಕೊಪ್ಪ ಗ್ರಾಮದ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ನವಿಲನ್ನು ಕೊಂದು ಚರ್ಮವನ್ನು ಬೇರ್ಪಡಿಸಿ ಮಾಂಸವನ್ನು ಮೊಟರ ಸೈಕಲನಲ್ಲಿ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಲಾಗಿದ್ದು … [Read more...] about ನವೀಲು ಮಾಂಸ ಸಾಗಾಟ ಅರಣ್ಯ ಇಲಾಖೆ ದಾಳಿ – ಆರೋಪಿಗಳು ಪರಾರಿ
Crime
ಹಳಿಯಾಳದ ಬೆಳವಟಗಿಯಲ್ಲಿ ರುಂಡ- ಮುಂಡ ಬೇರ್ಪಡಿಸಿ ಯುವಕನ ಕೊಲೆ.
ಹಳಿಯಾಳ:- ರುಂಡ-ಮುಂಡ ಬೇರ್ಪಡಿಸಿ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಹೃದ್ರವಿದ್ರಾವಕ ದುರ್ಘಟನೆ ತಾಲೂಕಿನ ಬೆಳವಟಗಿ ಗ್ರಾಮ ಸಮೀಪ ನಡೆದಿದ್ದು ಕಳೆದ 3 ದಿನಗಳ ಹಿಂದೆ ಕೊಲೆ ನಡೆದಿದೆ ಎನ್ನಲಾಗಿದ್ದು ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಲೆಯಾದ ದುರ್ದೈವಿಯನ್ನು ನಾಗರಾಜ ಚೆನ್ನಪ್ಪಾ ಕೊಳದಾರ(31) ಎಂದು ಗುರುತಿಸಲಾಗಿದೆ. ಕಳೆದ ಶನಿವಾರದಿಂದ ಇತ ನಾಪತ್ತೆಯಾಗಿದ್ದು ಅಂದಿನಿಂದ ಆತನಿಗಾಗಿ ಕುಟುಂಬದವರು ಹುಡುಕಾಟದಲ್ಲಿದ್ದರು ಮಂಗಳವಾರ … [Read more...] about ಹಳಿಯಾಳದ ಬೆಳವಟಗಿಯಲ್ಲಿ ರುಂಡ- ಮುಂಡ ಬೇರ್ಪಡಿಸಿ ಯುವಕನ ಕೊಲೆ.
ಲಾಕ್ ಡೌನ್ ಆದೇಶ ಉಲ್ಲಂಘನೆ ಹಳಿಯಾಳದ ಮಸಿದಿಯಲ್ಲಿದ್ದ 20 ಜನರ ವಿರುದ್ದ ಪ್ರಕರಣ ದಾಖಲು
ಹಳಿಯಾಳ:- ಲಾಕ್ಡೌನ್ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪಟ್ಟಣದ 2 ಮಸಿದಿಗಳಲ್ಲಿ ಗುಂಪಾಗಿ ಸೇರಿದ ಸಂದರ್ಭದಲ್ಲಿ ತಿಳುವಳಿಕೆ ಹೇಳಲು ಹೊದ ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 20 ಮಂದಿಯನ್ನು ಬಂಧಿಸಿರುವ ಹಳಿಯಾಳ ಪೋಲಿಸರು ನಿಷೇಧಾಜ್ಞೆ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಷೇಧಾಜ್ಞೆ 144 ಕಲಂ ಜಾರಿಯಲ್ಲಿದೇ ಅಲ್ಲದೇ ಕೊರೊನ ಸೊಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ತುರ್ತು ಪರಿಸ್ಥಿತಿ ಹೊರತುಪಡಿಸಿ … [Read more...] about ಲಾಕ್ ಡೌನ್ ಆದೇಶ ಉಲ್ಲಂಘನೆ ಹಳಿಯಾಳದ ಮಸಿದಿಯಲ್ಲಿದ್ದ 20 ಜನರ ವಿರುದ್ದ ಪ್ರಕರಣ ದಾಖಲು
ಅಕ್ರಮ ಗೋವಾ ಮಧ್ಯ ವಶ
ಜೋಯಿಡಾ - ಜೋಯಿಡಾ ತಾಲೂಕಿನ ಅನಮೋಡ ಅಬಕಾರಿ ಗೇಟ್ ಬಳಿ ದಿನಾಂಕ 18 ಮಾರ್ಚದಂದು ಬೆಳಗಿನ ಜಾವ 1 ಘಂಟೆ ಸುಮಾರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮಧ್ಯ ಹಾಗೂ ಜಿ,ಎ,01 ಇ 9875 ಕಾರವೊಂದನ್ನು ಅನಮೋಡದ ಅಬಕಾರಿ ಪೋಲಿಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತರಾದ ಮಹಮದ್ ಅಲ್ಲಾಸಾಬ ತಾಜೋದ್ದೀನ್, ಮೋಹನ ಎಕನಾಥ ಗಾಂಧೀ ತೆಲಗಾಂಣ ಮೂಲದವರಾಗಿದ್ದು, ವಾಹನ ಚಾಲಕ ಗೌಸಮುದ್ದಿನ ಮಿರ್ ಸಾಭ ಜಮಖಾನ ಪಣಜಿ ಮೂಲದವರಗಿದ್ದು, ಇವರಿಂದ ಗೋವಾ ಅಕ್ರಮ ಸರಾಯಿ … [Read more...] about ಅಕ್ರಮ ಗೋವಾ ಮಧ್ಯ ವಶ
ಹೆಂಡತಿಯ ಅಕ್ಕಂದಿರಿಗೆ ಚೂರಿಯಿಂದ ಇರಿದ ಭೂಪ ಹಳಿಯಾಳದಲ್ಲಿ ನಡೆದ ಘಟನೆ.
ಹಳಿಯಾಳ:- ತನ್ನ ಹೆಂಡತಿಯನ್ನು ಆಕೆಯ ಅಕ್ಕಂದಿರು ತನ್ನಿಂದ ದೂರ ಮಾಡುತ್ತಿದ್ದಾರೆಂದು ಆಕ್ರೋಶಗೊಂಡ ಐನಾತಿ ವ್ಯಕ್ತಿಯೊರ್ವ ಸಹೋದರಿಯರಿಬ್ಬರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿ ಬಳಿಕ ಆರೋಪಿ ಪೋಲಿಸರಿಗೆ ಖುದ್ದು ಶರಣಾಗಿರುವ ವಿಚಿತ್ರ ಘಟನೆ ಹಳಿಯಾಳದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಇಲ್ಲಿಯ ಶಿವಾಜಿಗಲ್ಲಿಯ ಲಿಟಲ್ ಫ್ಲಾವರ್ ಸ್ಕೂಲ್ ನಡೆಸುವ ಜಯಶ್ರೀ ಮಹಾದೇವ ಕಮ್ಮಾರ ಹಾಗೂ ನಿರ್ಮಲಾ ರಾಮಚಂದ್ರ ಪೂಜಾರ ಮಾರಣಾಂತಿಕ ಹಲ್ಲೆಗೊಳಗಾದ … [Read more...] about ಹೆಂಡತಿಯ ಅಕ್ಕಂದಿರಿಗೆ ಚೂರಿಯಿಂದ ಇರಿದ ಭೂಪ ಹಳಿಯಾಳದಲ್ಲಿ ನಡೆದ ಘಟನೆ.




