ಗೋಕರ್ಣ:-
ಅನೇಕ ವಿದೇಶೀಯರು ತಾವುಳಿದ ಮನೆಯ ಶೆಕೆ ಝಳ ತಡೆಯಲಾರದೇ ತೆಂಗಿನ ಗರಿಯನ್ನು ಹಾಸುವ ಕಾಯಕದಲ್ಲಿದ್ದಾರೆ. ಅನೇಕರು ಮರಳಿನ ಬಿಸಿಯ ಬೇಗೆಯಲ್ಲಿ ಸೋತಿದ್ದು ಮೈಮೇಲೆ ಒದ್ದೆ ಅರಿವೆ ಹೊದ್ದು ಕಡಲ ಆಸ್ವಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಇನ್ನೂ ಅನೇಕರು ಗೋಕರ್ಣದ ಬೀಚ್ ಖುಶಿ ಮುಗಿಸಿ ಉತ್ತರ ಭಾರತದ ಕಡೆ ಸಾಗುತ್ತಿದ್ದಾರೆ. ವಿದೇಶೀಯರು ಹೀಗಾದರೆ ಸ್ವದೇಶೀಯರು ಇತ್ತ ಊರ ಹೆಂಗಳೆಯರನೇಕರು ತಮ್ಮ ಆಳದ ಬಾವಿಯ ನೀರ ಸೇದಿ ಹೈರಾಣಾಗುತ್ತಿದ್ದಾರೆ. ನೀರಿನ ಅಭಾವ ಈ ಭಾಗದ ಹನೇಹಳ್ಳಿ ಹಾಗು ಗೋಕರ್ಣ ಗ್ರಾ,ಪಂ ವ್ಯಾಪ್ತಿಯಲ್ಲಿ ಈಗಲೇ ಬುಗಿಲೆದ್ದಿದ್ದು ಸರಕಾರದ ನೀರು ಸರಬರಾಜಿಗಾಗಿ ಕಾಯುವ ಹಂತ ತಲಿಪಿದ್ದಾರೆ. ಇಲ್ಲಿನ ಬಿದ್ರಗೇರಿ ಹೋಬಳಿಯ ನೂರಕ್ಕೂ ಹೆಚ್ಚಿನ ಹಾಲಕ್ಕಿ ರೈತರು ಇರುವ ಒಂದೇ ಕೆರೆಯ ಅಲ್ಪ ನೀರನ್ನು ಸಂಸಾರದ ಎಲ್ಲ ಕಾರ್ಯಕ್ಕೂ ಬಳಸಿಕೊಳ್ಳುತ್ತಿದ್ದಾರೆ. ಕೆಲವರು ಕುಡಿಯುವ ನೀರಿಗಾಗಿ ರೈತರು ಒಂದೆರಡು ಕಿ.ಮಿ. ನಡೆದು ಸಾಗುತ್ತಿದ್ದಾರೆ.
ಗುಂಡಬಾಳಾ ಗಂಗಾವಳಿ ನದಿ ನೀರ “ಗೋಕರ್ಣ ನೀರು ಸರಬರಾಜು ಯೋಜನೆ” ಕಳೆದ ದಶಕಗಳಿಂದ ನಡೆಯುತ್ತಿದ್ದರೂ ಇನ್ನೂ ಇಲ್ಲಿನ ಹಾಲಕ್ಕಿಗಳಿಗೆ ಹಾಗು ಅನೇಕ ಸಾರ್ವಜನಿಕ ಹೋಬಳಿಗಳಿಗೆ ತಲುಪದೇ ಬಾವಿಯಾಳವನ್ನೇ ಅನುಸರುಸುವ ಪರಿಸ್ತಿತಿ ಬಂದಿದೆ. ಈ ಭಾಗದ ಮೂರು ಗ್ರಾ.ಪಂ ವ್ಯಾಪ್ತಿಗೆ 13 ಕೋಟಿ ನೀರಿನ ಸರಬರಾಜಿಗಾಗಿ ಬಂದಿದೆ ಎಂಬ ಸುತ್ತೋಲೆಯಿದ್ದರೂ ಈ ಭಾಗಕ್ಕಿನ್ನೂ ಬಂದಿಲ,್ಲ ಶ್ರಮಿಕರು,ದಲಿತರು, ರೈತರು, ಹಾಲಕ್ಕಿಗಳು ಈಬಾಗದಲ್ಲಿದ್ದು ನೀರಿನ ಪರದಾಟ ಬೇಸಿಗೆಯ ಪ್ರಾರಂಬದ ಮುನ್ನವೇ ಬಂದಿದೆ. ತಾ.ಪಂ ಗ್ರಾ.ಪಂ ಜಿ.ಪಂಗಳ ಜನಪ್ರತಿನಿಧಿಗಳು ಸರಕಾರ ಕೊಡಮಾಡಿದ ಯೋಜನೆಯಲ್ಲಿ ತಮ್ಮ ತಮ್ಮ ಹೆಚ್ಚಿನ ಮತದಾರರ ಮತ ಬೀಳುವ ಜಗವನರಿತು ತಮ್ಮವರಿರುವ ಕಡೆ ಟ್ಯಾಂಕರ್ ಹಾಗು ಪೈಪ್ ಅಳವಡಿಸಿದ್ದಾರೆಯೇ ಹೊರತು ನೀರಿನ ಚಿಂತನೆ ನೀರಿಗಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ತಿಪ್ಪಸಗಿ,ಕಡಿಮೆ, ಗೊನೆಹಳ್ಳಿ, ಸಿದ್ದೇಶ್ವರ, ತೊರ್ಕೆ, ದೇವಣ ಗೋಕರ್ಣದ ಅನೇಕ ಕಡೆ ನೀರಿಲ್ಲದ ಬವಣೆ ಹೆಚ್ಚಾಗಿದೆ. ಬಿಸಿಲ ಬೇಗುದಿಗೆ ಭೂಮಿ ಕಾದು ನೀರಿನ ಪೈಪ್ಗಳೂ ಅಲ್ಲಲ್ಲಿ ಒಡೆದು ವಾರಕ್ಕೊಮ್ಮೆ ಬರುವ ನೀರು ಸೀಳಿದ ಪೈಪ್ನಿಂದ ಸೋರುತ್ತಿದೆ. ನೀರೇ ಇಲ್ಲದ ಹಾಲಕ್ಕಿಗಳನೇಕರು ಮರುಕ ಪಡುತ್ತಿದ್ದಾರೆ ಕೇಳುವವರಾರು ? ಈ ಎಲ್ಲದರ ಜತೆ ಶ್ರೀ ಕ್ಷೇತ್ರದ ಗಟಾರ ನಾಲಾ ಅನೇಕ ಬಾವಿಗಳು ರಾಡಿ ಮಾಲಿನ್ಯ ನೀರಿನಿಂದ ಭರ್ತಿಯಾಗಿದ್ದು ಹೊಲಸುನಾರುವ ವಾಸನೆ ಅನೇಕರಿಗೆ ವಾಕರಿಕೆ ಬರುವಂತೆಯೂ ಮಾಡುತ್ತಿದೆ
-pushpahas bastikar
Leave a Comment