ಗೋಕರ್ಣ : ಭಾರತದ ಉತ್ತರದ ತುದಿ ಉತ್ತರಖಾಂಡ ರಾಜ್ಯದ ಬದ್ರಿನಾಥ್ನ “ಮೌನಿ ಬಾಬಾ” ಎಂದು ಸುಪ್ರಸಿದ್ದಿಯಾದ ಶ್ರೀ ಧರ್ಮರಾಜ ಭಾರತಿ ಮಹಾಸ್ವಾಮಿಗಳು ಗೋಕರ್ಣದಲ್ಲಿ ಕೆಲದಿನಗಳ ಮಟ್ಟಿಗೆ ಶಿವ ¸ದಬ್ಯುದಯದ ಶಕ್ತಿ ಪಡೆಯಲು ಆಗಮಿಸಿದ್ದಾರೆ. ಶಿವ ಹಾಗು ತೀರ್ಥಗಳ ಕುರಿತು ಅಪಾರ ಜ್ನಾನ ಪಡೆದ ಇವರು ಇಲ್ಲಿನ ತೀರ್ಥ ಕುಂಡ್ಗಳ ಪ್ರಭಾವಲಯಗಳ ಕುರಿತು ಹಾಗು ದೇವತಾ ಸಿದ್ದಿ ಶಕ್ತಿ ವಿಲ್ಪಾವರಗಳ ಆಮೂಲಾಗ್ರ ಅದ್ಯಯನಕ್ಕಾಗಿ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಇವರ ಸಾಧಕ ಶಕ್ತಿ ಹಾಗು ಸಮ್ಮೋಹನ ವಿದ್ಯೆಯ ಕುರಿತು ಅರಿತ ಅನೇಕರು ಈಗಾಗಲೇ ಇವರ ದರುಷನ ಪಡೆದು ತಮ್ಮ ಕೆಲ ನಿವೇದನೆಗಳನ್ನು ತಿಳಿಸಿ ಪರಿಹರಿಸಿಕೊಂಡಿದ್ದಾರೆ ಬಂದವರಲ್ಲಿ ಕಾರವಾರ ಹಾಗು ಹುಬ್ಬಳ್ಳಿ ಬಾಗದ ಅನೇಕ ರಾಜಕಾರಣಿಗಳು, ಉದ್ಯಮಿಗಳು ಸೇರಿದ್ದಾರೆ. ಗೋಕರ್ಣದ ಅಥರ್ವಣ ವೇದ ಪಂಡಿತರಾದ ಆಚಾರ್ಯ ವೇ. ಶ್ರೀಧರ ಅಡಿಗಳ ಮನೆಯಲ್ಲಿ ವಸತಿ ಮಾಡಿ ಜತೆಗೆ ಅನುಷ್ಟಾನ ಜಪತಪ ನಡೆಸುತ್ತಾ ಹಾಗು ಇಲ್ಲಿನ ಸಮುದ್ರ ತೀರದ ಪಕ್ಕದ ಜಠಾಯು ತೀರ್ಥ ಹಾಗು ಮಣಿನಾಗರ ಶತಬಿಂದು ಸಹಸ್ರಬಿಂದು ಸ್ಥಾನದಲ್ಲ್ಲಿ ಸಿದ್ದಿಗಾಗಿ ಅನುಷ್ಟಾನ ಕೈಕೊಂಡಿದ್ದಾರೆ.
ಕುಂಡಲಿನಿ ಶಕ್ತಿ ಜಾಗ್ರತಿ, ಷಟ್ ಚಕ್ರ ಜಾಗರಣ, ಮೂಲ ಬಂಧದ ಹಠ ಯೋಗ ಜಾಗ್ರತಿ ಹಾಗು ಕಲಿಸುವದರೊಂದಿಗೆ ಸ್ವಾಮಿಗಳು ಉತ್ತರಖಾಂಡ ರಾಜ್ಯದ ಬದರಿನಾಥದಲ್ಲಿ ಶಕ್ತಿಪೀಠ ನಾರಾಯಣ ಕ್ರಿಯಾಯೋಗಾಶ್ರಮ ನಡೆಸಿಕೊಂಡು ಕಳೆದ 20 ವರುಷಗಳಿಂದ ಇದ್ದು ಸಿದ್ದಿ ಪಡೆದ ಯೋಗ ಗುರುವಾಗಿದ್ದಾರೆ.
-✍? *ಪುಷ್ಪಹಾಸ ಬಸ್ತಿಕರ
Leave a Comment