
ಕಾರವಾರ:
ಏಕಾಗ್ರತೆಯ ಜೊತೆಗೆ ಕ್ರಿಯಾಶೀಲ ಮನಸ್ಸುಳ್ಳ ವ್ಯಕ್ತಿಯಿಂದ ಉತ್ತಮ ಚಿತ್ರ ರಚಿಸಲು ಸಾಧ್ಯ. ಚಿತ್ರಕಲೆ ಕೇವಲ ಕಲಾವಿದನ ಕಲೆಯಷ್ಟೇ ಆಗಿರದೆ ನಮ್ಮ ಸುತ್ತಮುತ್ತಲಿನ ಸಂಸ್ಕøತಿಗಳ ಬಿಂಬಕ ರೂಪಕವಾಗಿದೆ ಎಂದು ಪದ್ಮಶ್ರೀ ಪುರಸ್ಕøತೆ ಸುಕ್ರಿ ಬೊಮ್ಮ ಗೌಡ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ವಿದ್ಯಾ ಪ್ರಸಾರಕ ಸಮಿತಿಯ ಟಾಗೋರ ಚಿತ್ರಕಲಾ ಮಹಾವಿದ್ಯಾಲಯದ ಕಾಲೇಜು ವಿದ್ಯಾರ್ಥಿ ಒಕ್ಕೂಟದವರು ಹಮ್ಮಿಕೊಂಡಿದ್ದ ಸಮೂಹ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಚಿತ್ರಕಲಾವಿದರಲ್ಲಿರುವ ತಾಳ್ಮೆ, ಸಂಯಮ ಮೆಚ್ಚುವಂತದ್ದಾಗಿದೆ. ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಚಿತ್ರಗಳು ರಚನೆಯಾದರೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ನ ಪ್ರಾಂಶುಪಾಲ ವಿ.ಎಂ.ಹೆಗಡೆ, ಉಳಿದೆಲ್ಲ ಕಲಾ ಪ್ರಕಾರಗಳಿಗಿಂತ ಚಿತ್ರಕಲಾ ಕಲಾವಿದರಲ್ಲಿ ಏಕಾಗ್ರತೆ ಹೆಚ್ಚಿರುತ್ತಿದ್ದು, ವಿದ್ಯಾರ್ಥಿಗಳು ರಚಿಸಿದ ಚಿತ್ರಗಳು ಮನಸೂರೆಗೊಳ್ಳುತ್ತಿವೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ಉಪನ್ಯಾಸಕ ಡಾ.ಜಾಫರ್, ಟಾಗೋರ್ ಚಿತ್ರಕಲಾ ಮಹಾವಿದ್ಯಾಲಯದ ಗೌರವ ಪ್ರಾಚಾರ್ಯ ಜಿ.ಕೆ.ಮಹಾಲೆ, ಶಿಕ್ಷಕ ಕೆ.ಜಾನ್ ಬೆಲ್ ಮುಂತಾದವರು ಮಾತನಾಡಿದರು. ಪ್ರಾಚಾರ್ಯ ಡಾ.ಎಸ್.ಆರ್.ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಅನೇಕ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕøತೆ ಸುಕ್ರಿ ಗೌಡರನ್ನು ವಿದ್ಯಾ ಪ್ರಸಾರಕ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳೇ ಚಿತ್ರಿಸಿದ ಸುಕ್ರಜ್ಜಿಯ ಚಿತ್ರವನ್ನು ಅವರಿಗೆ ನೀಡಿದ್ದು ವಿಶೇಷವೆನಿಸಿತ್ತು.
ಗಮನಸೆಳೆದ ಚಿತ್ರಗಳು:
ಸಮೂಹ ಚಿತ್ರಕಲಾ ಪ್ರದರ್ಶನದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಗಳು ಪ್ರದರ್ಶನಗೊಂಡವು. ಸುಕ್ರಿ ಗೌಡ, ಕೈಯ್ಯಲ್ಲಿ ದೀಪ ಹಿಡಿದ ಬಾಲಕಿ, ತಬಲಾ ಬಾರಿಸುತ್ತಿರುವ ಬಾಲ ವಿನಾಯಕ, ಶಿಲೆಯ ಮೂರ್ತಿಗಳ ಚಿತ್ರ, ಕೃಷ್ಣ-ರುಕ್ಮಿಣಿಯರ ಚಿತ್ರ ಸೇರಿದಂತೆ ವಿವಿಧ ಕಲಾಕೃತಿಗಳು ಜನರ ಮನಸೂರೆಗೊಂಡವು. ಟಾಗೋರ್ ಚಿತ್ರಕಲಾ ಮಹಾವಿದ್ಯಾಲಯದ ಪ್ರತಿಭಾವಂತ ಚಿತ್ರಕಲಾ ವಿದ್ಯಾರ್ಥಿಗಳಾದ ನಿತ್ಯಾನಂದ ಎಲ್. ನಾಯ್ಕ ಬೇಳಾಬಂದರ ಅಂಕೋಲಾ, ಅಶ್ವಿನಿ ಆನಂದು ಕೋಠಾರಕರ ಮಾಜಾಳಿ ಕಾರವಾರ, ಪ್ರಸಾದ ದತ್ತಾ ತಾಮಸೆ ಬೇಲೇಕೇರಿ ಅಂಕೋಲಾ, ನಾಗೇಂದ್ರ ಜಿ. ನಾಯ್ಕ ತದಡಿ ಗೋಕರ್ಣ, ರಾಜೇಶ್ವರಿ ಗಣೇಶ ಪಟಗಾರ ಅಚವೆ ಚನಗಾರ ಅಂಕೋಲಾ, ಆನಂದ ಬಿ. ಮಸೂತಿ ಕಾರವಾರ, ದೇವೇಂದ್ರ ವಿ. ನಾಯ್ಕ ಕಾರವಾರ, ಮಂಜುನಾಥ ವಿಠೋಬ ನಾಯ್ಕ ಕಾರವಾರ, ಅಕ್ಷತಾ ಎ. ನಾಯ್ಕ ಸಿದ್ದರ ಕಾರವಾರ, ಸೂರಜ ಕಿನ್ನರಕರ ಮಲ್ಲಾಪುರ ಕಾರವಾರ, ಕಾರ್ತಿಕ ಆರ್. ಹರಿಕಂತ್ರ ಕಾರವಾರ, ಸಂಜಯ ಆರ್. ಭೋಯಿ ಕಾರವಾರ ಹಾಗೂ ಅರುಣ ಎಂ. ನಾಯ್ಕ ಹಿರೇಗುತ್ತಿ ಕುಮಟಾ ಅವರು ಈ ಕಲಾಕೃತಿಗಳನ್ನು ರಚಿಸಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರದರ್ಶನ ನಡೆದಿದ್ದು ನೂರಾರು ಕಲಾಸಕ್ತರು ಚಿತ್ರಗಳನ್ನು ವೀಕ್ಷಿಸಿದ್ದರು.
-ganapathi hegde
Leave a Comment