ಹೊನ್ನಾವರ:
ಗೇರುಸೊಪ್ಪಾ ವಲಯದ ಮಹಿಮೆ ಗ್ರಾಮದ ಮೆಟ್ಟಿನಗದ್ದೆ ಅರಣ್ಯ ವ್ಯಾಪ್ತಿಯಲ್ಲಿ,ವಾಟೆ ಹಳ್ಳದ ಬಳಿ ರಾಷ್ಟ್ರೀಯ ಹೆದ್ದಾರಿ 206 ರ ಪಕ್ಕದಲ್ಲಿ ಹಾದು ಹೋದ ವಿದ್ಯುತ್ ತಂತಿ ಸ್ಪರ್ಷದಿಂದ ವನ್ಯಜೀವಿಗಳಲ್ಲಿನ ಅಪರೂಪದ ಪ್ರಬೇಧವಾದ ಸಿಂಗಳಿಕವೊಂದು ಮೃತಪಟ್ಟಿರುವುದು ಪತ್ತೆಯಾಗಿದೆ…
ಈ ಘಟನೆಯು ಅಘನಾಶಿನಿ ಎಲ್ ಟಿ ಎಮ್ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ ವರ್ಷ ಅರಣ್ಯ ಇಲಾಖೆ ಮತ್ತು ಸಲೀಂ ಅಲಿ ಸೆಂಟರ್ ಫಾರ್ ಅರ್ನಿತಾಲಜಿ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಈ ಸಂರಕ್ಷಿತ ಪ್ರದೇಶದಲ್ಲಿ ಕೇವಲ 650 ಸೀಂಗಳಿಕಗಳು ಇದೆಯೆಂದು ಅಂದಾಜಿಸಲಾಗಿದ್ದು ಕಳೆದ ಸಾಲಿನಿಂದ ಈವರೆಗೆ 4 ಸಿಂಗಳಿಕಗಳು ಮೃತಪಟ್ಟಿವೆಯೆಂದು ಅರಣ್ಯ ಇಲಾಖೆ ಖಚಿತಪಡಿಸಿದೆ…
Leave a Comment