ಭಟ್ಕಳ:
ಪ್ಯಾಸೆಂಜರ್ ರೈಲಿನಲ್ಲಿ ಇಲೆಕ್ಟಾನಿಕ್ ವಸ್ತುವನ್ನು ಕದ್ದು ಸಾಗಿಸುತ್ತಿದ್ದ ಕಳ್ಳನನ್ನು ಭಟ್ಕಳ ರೈಲ್ವೇ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವೀಯಾಗಿದ್ದಾರೆ. ಬಂಧಿತನನ್ನು ಬಾಗಲಕೋಟೆಯ ನಿವಾಸಿ ನಿಂಗಪ್ಪ ಯಮೂನಪ್ಪ ಛಲವಾದಿ (32) ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಮಡಗಾಂವ್ ಕಡೆ ತೆರಳುವ ಪ್ಯಾಸೆಂಜರ್ ರೈಲಿನಲ್ಲಿ ಕಂಪ್ಯೂಟರ್ ಮೊನಿಟರ್, ಸಿ.ಪಿ.ಯು, ಲ್ಯಾಪ್ ಟಾಪ್, ಮೊಬೈಲ್ಗಳು, ಎಲ್ಇಡಿ ಟಿವಿ ಹಾಗೂ ಇನ್ನಿತರ ಇಲೆಕ್ಟ್ರಾನಿಕ್ಸ ವಸ್ತು ಸಾಗಿಸುತ್ತಿದ್ದ ವ್ಯಕ್ತಿಯನ್ನು ಕಂಡು ಸಂಶಯಗೊಂಡ ಭಟ್ಕಳ ರೈಲ್ವೇ ಪೊಲೀಸರು ಸಂಶಯಗೊಂಡು ಪ್ರಶ್ನಿಸಿದ್ದಾರೆ. ಪೊಲೀಸರು ಪ್ರಶ್ನೆಯಿಂದ ಕಂಗಾಲಾದ ವ್ಯಕ್ತಿ ಸಂಪೂರ್ಣ ವೃತ್ತಾಂತವನ್ನೇ ಬಾಯಿ ಬಿಟ್ಟಿದ್ದು ದೊಡ್ಡ ಕಳ್ಳತನದ ಪ್ರಕರಣ ಬೆಳಕಿಗೆ ಬಂದಂತಾಗಿದೆ. ತಕ್ಷಣ ಆತನನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
ಪರಿಶೀಲನೆ ವೇಳೆ ಆತನ ಬಳಿ ಕಂಪ್ಯೂಟರ್ ಮೊನಿಟರ್, ಸಿ.ಪಿ.ಯು, ಲ್ಯಾಪ್ ಟಾಪ್, ಮೊಬೈಲ್ಗಳು, ಎಲ್ಇಡಿ ಟಿವಿ ಹಾಗೂ ಇನ್ನಿತರ ಇಲೆಕ್ಟ್ರಾನಿಕ್ಸ ವಸ್ತುಗಳು ಇದ್ದದ್ದು ಪತ್ತೆಯಾಗಿದ್ದು ಎಲ್ಲವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ವೇಳೆಯಲ್ಲಿ ಇವುಗಳನ್ನೆಲ್ಲಾ ತಾನು ಉಡುಪಿಯ ಮನೆಯೊಂದರಲ್ಲಿ ಕದ್ದಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ಉಡುಪಿ ಪೋಲೀಸರಿಗೆ ಭಟ್ಕಳ ರೈಲ್ವೆ ಪೋಲೀಸರು ಮಾಹಿತಿ ನೀಡಿದ್ದಾಗಿ ತಿಳಿದು ಬಂದಿದೆ. ಈತನು ಮೇ 3ರಂದು ಉಡುಪಿಯ ಕಲ್ಸಂಕದಲ್ಲಿರುವ ಲೇಬರ್ ಕಾಂಟ್ರಾಕ್ಟರ್ ಆಗಿದ್ದ ಸುರೇಶ ರಾವ್ ಎಂಬುವವರ ಮನೆಯಲ್ಲಿ ಕದ್ದಿರುವುದಾಗಿ ತಿಳಿದ್ದಾನೆ ಎನ್ನಲಾಗಿದ್ದು ತನಿಖೆಯಿಂದಷ್ಟೇ ನಿಜಾಂಶ ಹೊರಬರಬೇಕಿದೆ. ಸುದ್ದಿ ತಿಳಿದಿ ತಕ್ಷಣ ಭಟ್ಕಳಕ್ಕೆ ಆಗಮಿಸಿದ ಉಡುಪಿ ಪೊಲೀಸರು ಆರೋಪಿಯನ್ನು ಹಾಗೂ ಆತ ಕದ್ದ ಮಾಲನ್ನು ವಶಕ್ಕೆ ಪಡೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದ್ದು, ಕಳ್ಳತನವಾಗಿರುವ ಕುರಿತು ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದೂ ತಿಳಿದು ಬಂದಿದೆ.
Leave a Comment