ಹೊಸ ಪಡಿತರ ಚೀಟಿ ಪಡೆಯಲು ಇರುವ ನಿಯಮಾವಳಿ ಹಾಗೂ ಹಳಿಯಾಳ ಆಹಾರ ವಿಭಾಗದ ಆಹಾರ ಶಿರಸ್ತೇದಾರ ಕಛೇರಿಯ ಬೇಜವಾಬ್ದಾರಿ ಕಾರ್ಯವೈಖರಿಯಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ಅತೀ ಶೀಘ್ರದಲ್ಲಿ ಸರಿಪಡಿಸುವಂತೆ ನಗರದ ಬಿಜೆಪಿ ಎಸ್.ಸಿ ಮೋರ್ಚಾದ ಅಧ್ಯಕ್ಷ ದಶರಥ ಬಂಡಿವಡ್ಡರ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರಿಗೆ ಮತ್ತು ಆಹಾರ ವಿಭಾಗದ ಉಪ ನಿರ್ದೇಶಕರಿಗೆ ಲಿಖಿತ ಮನವಿ ಮಾಡಿ ಆಗ್ರಹಿಸಿದ್ದಾರೆ.
ಅವರು ಸಲ್ಲಿಸಿದ ಮನವಿ ಪತ್ರದಲ್ಲಿ ತಾಲೂಕಿನಲ್ಲಿ ಈಗಾಗಲೇ ಹೊಸದಾಗಿ ಅರ್ಜಿ ಸಲ್ಲಿಸಿದ ಅನೇಕ ಜನರಿಗೆ ಆಹಾರ ಶಿರಸ್ತೇದಾರ ಇವರ ಕಛೇರಿಯಿಂದ ಹಳೇ ಪಡಿತರ ಚೀಟಿಯ ಮಾದರಿಯ ಮುದ್ರಿತ ಫಾರ್ಮಗಳ ಲಭ್ಯವಿಲ್ಲವೆಂದು ಹೇಳಿ ಕಲರ್ ಜೆರಾಕ್ಸ್ ಮಾಡಿ ಅದರ ಮೇಲೆ ಮೊಹರು ಹಾಕಿ ಕೊಡಲಾಗಿದೆ. ಇದೇ ರೀತಿ ಹೊಸ ಪಡಿತರ ಚೀಟಿ ಪಡೆಯಲು ಹೋದ ಅನೇಕ ಜನರಿಗೆ ಇಲ್ಲಿ ಕಾರ್ಡ ಕೊಡುವುದಿಲ್ಲ, ಅದು ಪೋಸ್ಟ್ ಮೂಲಕ ಬೆಂಗಳೂರನಿಂದ ನಿಮ್ಮ ಮನೆಗೆ ಬರುತ್ತದೆ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಇವರ ಕಛೇರಿಯಲ್ಲಿ ಸಾರ್ವಜನಿಕರು ಹೊರಗಡೆ ಸರತಿ ಸಾಲಿನಲ್ಲಿ ನಿಂತಿರುತ್ತಾರೆ, ಆದರೆ ಇವರಿಗೆ ಬೇಕಾದ ಕೆಲವು ಏಜೆಂಟರು ಇವರ ಚೇಂಬರ್ನಲಿ ಠಿಕಾಣಿ ಹೂಡಿರುತ್ತಾರೆ. ಇವರಿಗೆ ಬೇಕಾದವರಿಗೆ ಇವರು ಸಂಜೆ 5 – 6 ಗಂಟೆ ನಂತರ ಪಡಿತರ ಚೀಟಿ ಹಂಚಿಕ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಶಿರಸ್ತೇದಾರರು ಅನೇಕ ಜನರಿಗೆ ‘ಹೊಸ ಪಡಿತರ ಚೀಟಿ’ ಪಡೆಯಲು (1) 20 ರೂ. ಬಾಂಡ್ ಪೇಪರ್ನಲ್ಲಿ ನೋಟರಿ ಮಾಡಿಸಿಕೊಂಡು ಬರಬೇಕು (2) 20 ರೂ. ಬಾಂಡ್ನಲ್ಲಿ ಹಿಡುವಳಿ ಪ್ರಮಾಣ ಪತ್ರ ಹಾಗೂ (3) 20 ರೂ. ಬಾಂಡ್ನಲ್ಲಿ ಆದಾಯ ಪ್ರಮಾಣ ಪತ್ರ ಬೇಕು ಎಂದು ಹೇಳಿ ಕಳುಹಿಸಿ ಇನ್ನೂ ಕೆಲವರಿಗೆ ಶಾನಬೋಗ್ ಇವರಿಂದ ಪರಿಶೀಲನೆ ಮಾಡಿಕೊಂಡು ಸಹಿ ಮಾಡಿಸಿಕೊಂಡು ಬರಬೇಕು ಎಂದು ಹೇಳುತ್ತಿದ್ದಾರೆ. ಹಾಗೂ ಕೆಲವು ವ್ಯಕ್ತಿಗಳಿಗೆ ಇದ್ಯಾವುದೇ ದಾಖಲೆಗಳನ್ನು ಪಡೆಯದೇ ಹೊಸ ಪಡಿತರ ಚೀಟಿ ಕೊಡುತ್ತಿರುವ ಮಾಹಿತಿ ಇದೆ.
ಶಿರಸ್ತೇದಾರರವರ ಕಛೇರಿಯಲ್ಲಿ ಪಡಿತರ ಚೀಟಿ ಹಂಚಿಕೆ ಮಾಡಲು ಯಾವ ದಾಖಲೆಗಳು ಬೇಕು ಎಂಬ ಬಗ್ಗೆ
ಸಾರ್ವಜನಿಕರಿಗೆ ಲಿಖಿತವಾಗಿ ಯಾವುದೇ ಮಾಹಿತಿ ಫಲಕ ಅಳವಡಿಸಿರುವುದಿಲ್ಲ. ಇದರಿಂದ ವಶೀಲಿ ಇರುವವರು, ಇವರಿಗೆ ಬೇಕಾದವರಿಗೆ ಮಾತ್ರ ಪಡಿತರ ಚೀಟಿ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಹಳಿಯಾಳ ಆಹಾರ ಶಿರಸ್ತೇದಾರ ಇವರ ಕಛೇರಿಯಿಂದ ಹೊಸ ಪಡಿತರ ಚೀಟಿ ಪಡೆಯಲು ಉಂಟಾಗುತ್ತಿರುವ ಗೊಂದಲ ತಪ್ಪಿಸಿ, ಎಲ್ಲರಿಗೂ ಪಡಿತರ ಚೀಟಿ ಪಡೆಯಲು ಅನುಕೂಲವಾಗುವಂತೆ ಸರಕಾರದ ನಿಯಮಾವಳಿಗಳನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಫಲಕ ಅಳವಡಿಸಬೇಕು. ಅದೇ ರೀತಿ ಈಗಾಗಲೇ ಕಳೆದ ಹಲವಾರು ತಿಂಗಳುಗಳಿಂದ ಬಿ.ಪಿ.ಎಲ್. ಪಡಿತರ ಚೀಟಿದಾರರಲ್ಲಿ ಅನೇಕರಿಗೆ ಪಡಿತರ ಮಳಿಗೆಗಳಿಂದ ಪಡಿತರ ವಿತರಣೆ ಆಗಿರುವುದಿಲ್ಲ. ಇದಕ್ಕೆ ಪಡಿತರ ಮಳಿಗೆಯವರು ನೀಡುವ ಕಾರಣ ಏನೆಂದರೆ ಹಳಿಯಾಳ ಆಹಾರ ಇಲಾಖೆಯಿಂದ ನೀಡಿದ ಲೀಸ್ಟ್ನಲ್ಲಿ ನಿಮ್ಮ ಕಾರ್ಡ ನಂಬರ ಹಾಗೂ ಹೆಸರು ಇಲ್ಲ ಎಂಬ ಉತ್ತರ ಬರುತ್ತದೆ. ಈ ಬಗ್ಗೆ ಕಛೇರಿಯಲ್ಲಿ ವಿಚಾರಿಸಿದರೆ ಏನಾದರೂ ಸಬೂಬು ಹೇಳಿ ಕಳುಹಿಸಲಾಗುತ್ತಿದೆ.
ಪಡಿತರ ಚೀಟಿ ವಿತರಣೆ ಹಾಗೂ ಹಂಚಿಕೆಯಲ್ಲಿ ಉಂಟಾಗುತ್ತಿರುವ ಗೊಂದಲಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಸರಿಪಡಿಸಬೇಕು. ಈ ಬಗ್ಗೆ ಕೂಡಲೇ ಯಾವುದೇ ಕ್ರಮ ಜರುಗಿಸದೇ ಇದ್ದಲ್ಲಿ ತಹಶೀಲ್ದಾರ ಹಳಿಯಾಳ ಇವರ ಕಛೇರಿಯ ಎದುರು ಉಗ್ರ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಎಲ್.ಇ.ಡಿ ಬಲ್ಪ್ ವಿತರಣೆ ಪುನ ಆರಂಭಿಸಬೇಕೆಂಬ ಮತ್ತು 3 ವರ್ಷದ ಗ್ಯಾರಂಟಿ ಅವಧಿಯಲ್ಲಿ ಹಾಳಾದ ಬಲ್ಪ್ಗಳನ್ನು ಬದಲಿ ಮಾಡಿ ಹೊಸ ಬಲ್ಪ್ ದೊರಕಿಸಿ ಕೊಡಬೇಕೆಂಬ ಪ್ರಶ್ನೆಗೆ ಈ ಕುರಿತು ಕ್ರಮ ಕೈಕೊಳ್ಳುವ ಭರವಸೆಯನ್ನು ನರಸಿಂಹಮೂರ್ತಿ ನೀಡಿದರು.
ನಗರದಲ್ಲಿ ಡಿವಿಜನಲ್ ಕಚೇರಿ ಆರಂಭಗೊಳ್ಳುವುದರಿಂದ ಸ್ಥಳಿಯ ಹಾಗು ಹಳಿಯಾಳದ ಗ್ರಾಹಕರು ಇನ್ನೂ ಮುಂದೆ ಶಿರಸಿಯ ಹೆಸ್ಕಾಂ ಕಚೇರಿಗೆ ಹೋಗುವ ಬದಲು ದಾಂಡೇಲಿಯಲ್ಲಿಯೆ ಬಹುತೇಕ ಎಲ್ಲ ಕಾರ್ಯಗಳನ್ನು ಮಾಡಿಕೊಳ್ಳಲು ಸಾಧ್ಯ ಇದರಿಂದ ಹಳಿಯಾಳ ದಾಂಡೇಲಿ ಜನರಿಗೆ ಹೆಚ್ಚಿನ ಅನಕೂಲತೆ ಆಗಲಿದೆ ಎಂದು ನರಸಿಂಹಮೂರ್ತಿ ತಿಳಿಸಿದರು.
ಸ್ಥಳೀಯ ಹೆಸ್ಕಾಂನ ಸಹಾಯಕ ಅಭಿಯಂತರ ಪುರುಷೋತ್ತಮ ಮಲ್ಯಾ, ಅಧಿಕಾರಿಗಳಾದ ಪ್ರಾಣೇಶ ಎಂ, ಕುಮಾರ ಕೆ ಸಭೆ ನಡೆಸಿಕೊಟ್ಟರು.
ಚರ್ಚೆಯÀಲ್ಲಿ ಹಿರಿಯ ನಾಗರಿಕ ವೇದಿಕೆಯ ವಿ.ಎ. ಕೋನಾಪುರೆ, ಆರ್.ಜಿ ಶೆಟ್ಟಿ, ಸತ್ಯಣ್ಣಾ, ಕಿರಣ, ನಿವೃತ್ತ ಪ್ರಾಂಶಪಾಲ ಯು.ಎಸ್. ಪಾಟೀಲ್ ಇತರರು ಭಾಗವಹಿಸಿದ್ದರು.
ಸಂವಾದ ಸಭೆಯಲ್ಲಿ ಗ್ರಾಹಕರು ಕೆಲವರು, ಸಿಬ್ಬಂದಿಗಲು ಹಲವರು :
ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿದ್ದ ಸಭೆಯಲ್ಲಿ ಇಲಾಖೆಯ ಸಿಬ್ಬಂದಿಗಳೆ ಅಧಿಕ ಸಂಖ್ಯೆಯಲ್ಲಿ ಇದ್ದದ್ದು ವಿಶೇಷವಾಗಿತ್ತು. ಸಭೆಯ ಬಗ್ಗೆ ಜನಪ್ರತಿನಿಧಿಗಳು ಭಾಗವಹಿಸಿರಲಿಲ್ಲ. ಸಭೆಯ ಬಗ್ಗೆ ಸರಿಯಾದ ಜಾಗೃತಿ ಮೂಡಿಸದಿರುವುದೆ ಗ್ರಾಹಕರ ಸಂಖ್ಯೆ ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ. ಅಥವಾ ಇಲಾಖೆಯ ಕೆಲವೊಂದು ಬಣ್ಣ ಬಯಲಾಗಬಹುದೆಂಬ ಉದ್ದೇಶದಿಂದ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸುವಂತೆ ಮಾಡಲು ಹೆಸ್ಕಾಂ ಅಧಿಕಾರಿಗಳು ಅಸಕ್ತಿ ವಹಿಸಲ್ಲವೆ ಎಂಬ ಪ್ರಶ್ನೆ ಹೆಸ್ಕಾಂ ಇಲಾಖೆಯ ಮೇಲಿದೆ.
Leave a Comment