ದಾಂಡೇಲಿ :
ನಗರದ ಕೆ.ಎಲ್.ಇ ಶುಶ್ರೂಷಾ ಮಹಾವಿದ್ಯಾಲಯದ ಆಶ್ರಯದಲ್ಲಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಶುಶ್ರೂಷಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ವಿಜಯ ಕೊಚ್ಚರಗಿ ಆರೋಗ್ಯ ಕ್ಷೇತ್ರದಲ್ಲಿ ನರ್ಸ್ಗಳ ಪಾತ್ರ ಮಹತ್ವವಾದುದು. ಗುಣಮಟ್ಟದ ಸೇವೆಗಳ ಮೂಲಕ ವೈದ್ಯಕೀಯ ಸೇವೆಯನ್ನು ಮಾಡುತ್ತಿರುವ ಶುಶ್ರೂಷಾರ ದಿನಾಚರಣೆಯನ್ನು ಆಚರಿಸುವುದರ ಮೂಲಕ ಅವರ ಸಾಮಾಥ್ರ್ಯ ಮತ್ತು ಅಗತ್ಯತೆಯನ್ನು ಸಾರಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಮಾಡುವ ಸೇವಾ ಕೈಂಕರ್ಯ ಮನಸ್ಸಿಗೆ ಸಂತಸವನ್ನು ನೀಡುವುದರ ಜೊತೆಗೆ ಬದುಕಿನಲ್ಲಿ ಸಾರ್ಥಕತೆಯನ್ನು ನೀಡುತ್ತದೆ ಎಂದು ನರ್ಸಿಂಗ್ ಕಲಿಕೆಯಲ್ಲಿ ತೊಡಗಿ ಭವಿಷ್ಯದ ಆರೋಗ್ಯ ಸಂರಕ್ಷರಾಗಬೇಕೆಂದು ಕರೆ ನಿಡಿದರು.
ಅಧ್ಯಕ್ಷತೆಯನ್ನು ಕೆ.ಎಲ್.ಇ ಶುಶ್ರೂಷಾ ಮಹಾವಿದ್ಯಾಲಯದ ಪ್ರಾಚಾರ್ಯ ವಿನಾಯಕ ಪಾಟೀಲ ಅವರು ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕೆ.ಎಲ್.ಇ ಸಂಸ್ಥೆಯು ವಿಶಿಷ್ಟಶೈಲಿಯಲ್ಲಿ ತನ್ನ ಸೇವೆಯನ್ನು ನೀಡುವುದರ ಮೂಲಕ ಗಮನ ಸೆಳೆದಿದೆ. ನಗರದಲ್ಲಿ ನರ್ಸಿಂಗ್ ಕಾಲೇಜಿಗೆ ಉತ್ತಮ ರೀತಿಯ ಪ್ರೋತ್ಸಾಹ ಸಿಗುತ್ತಿದ್ದು, ವೈದ್ಯರಿಗೆ ಮತ್ತು ರೋಗಿಗೆ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸುವ ನರ್ಸ್ಗಳು ಆರೋಗ್ಯ ಸಂರಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಕೆ.ಎಲ್.ಇ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ದಿವ್ಯಾ ಮೇರಿ ರೋಡ್ರಿಗಸ್, ಸಾರ್ವಜನಿಕ ಆಸ್ಪತ್ರೆಯ ನರ್ಸ್ ಅಧೀಕ್ಷಕಿ ಚೆನ್ನಮ್ಮ, ಹಿರಿಯ ನರ್ಸ್ ಪುಷ್ಪಾ ಕೋಡ್ಕಣಿ ಅವರುಗಳು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ನರ್ಸಿಂಗ್ ವಿದ್ಯಾರ್ಥಿನಿಯರಾದ ಜಯ ಚಿನ್ನಪ್ಪನವರ ಮತ್ತು ಜ್ಯೋತಿ ಗಾವಡೆ ಕಾರ್ಯಕ್ರಮ ನಡೆಸಿಕೊಟ್ಟರು. ಅಣ್ಣಪ್ಪ ಸಹಕರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
12ದಾಂಡೇಲಿ2- ಕೆ.ಎಲ್.ಇ ಶುಶ್ರೂಷಾ ಮಹಾವಿದ್ಯಾಲಯದ ಆಶ್ರಯದಲ್ಲಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಶ್ರೂಷಾ ದಿನಾಚರಣೆಯನ್ನು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ವಿಜಯ ಕೊಚ್ಚರಗಿ ಉದ್ಘಾಟಿಸುತ್ತಿರುವುದು.
Leave a Comment