ದಾಂಡೇಲಿ :
ಮೇ:16 ರಿಂದ ಮೇ: 19 ರವರೆಗೆ ದೇಶಾದ್ಯಂತ ಆನೆಗಣತಿ ಪ್ರಾರಂಭವಾಗಲಿದ್ದು, ಈ ನಿಟ್ಟಿನಲ್ಲಿ ಕೆನರಾ, ಧಾರವಾಡ ಮತ್ತು ಬೆಳಗಾವಿ ವೃತ್ತದ ಅರಣ್ಯ ಮತ್ತು ವನ್ಯಜೀವಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಸ್ವಯಂ ಸೇವಕರು, ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡು ಕುಳಗಿ ಪ್ರಕೃತಿ ಶಿಕ್ಷಣ ಶಿಬಿರದ ನಾಗಝರಿ ಹಾಲ್ನಲ್ಲಿ ತರಬೇತಿ ನೀಡಲಾಗಿದೆ.
ಆನೆ ಗಣತಿ ಕಾರ್ಯಕ್ರಮದ ವಿವರ :
ಮೇ:16 ರಂದು ಮೊದಲನೇ ದಿನದಂದು ಆನೆ ಗಣತಿಯ ಸರ್ವೆ ಮಾಡುವುದರ ಬಗ್ಗೆ ಪ್ಲಾನ್, ಮ್ಯಾಪಿಂಗ್ ಮಾಡಲಾಗುವುದು. ಮೇ: 17 ರಂದು ಪ್ರತ್ಯೇಕ್ಷವಾಗಿ ಕಂಡ ಆನೆ ಏಣಿಕೆ ಮಾಡಿ ಡಾಟಾ ಶೀಟಿನಲ್ಲಿ ದಾಖಲಿಸುವುದು. ಮೇ:18 ರಂದು ಅಪ್ರತ್ಯೇಕ್ಷ ಕುರುಹುಗಳ ಮಾಹಿತಿ ಸಂಗ್ರಹಣೆ ಮಾಡುವುದು. ಮೇ:19 ರಂದು ಕೆರೆ ನದಿ ಮುಂತಾದ ಸ್ಥಳಗಳಲ್ಲಿ ಕುಳಿತುಕೊಂಡು ಆನೆಗಳ ಗುಂಪಿನಲ್ಲಿರುವ ಬೇರೆ ಬೇರೆ ವಯಸ್ಸಿನ ಆನೆಗಳ ಮಾಹಿತಿ ಸಂಗ್ರಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಮೇ:16 ರಂದು ತರಬೇತಿಯನ್ನು ಇನ್ನೊಮ್ಮೆ ಹಮ್ಮಿಕೊಳ್ಳಲಾಗಿದೆ. ಈ ಆನೆ ಗಣತಿ ಕಾರ್ಯದಲ್ಲಿ ಇಲಾಖೆಯ ಸಿಬ್ಬಂದಿಗಳು, ಸ್ವಯಂಸೇವಕರು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಸೇರಿಸಿಕೊಳ್ಳಲಾಗಿದೆ ಆಯಾ ವಿಭಾಗಗಳಲ್ಲಿಯೂ ಸಹ ಆನೆಗಣತಿ ನಡೆಯುವುದರಿಂದ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಇನ್ನೀತರ ಮೂರು ವಿಭಾಗಗಳಾದ ಹಳಿಯಾಳ, ಯಲ್ಲಾಪುರ ಬೆಳಗಾಂವ ವಿಭಾಗಗಳಿಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, (ವನ್ಯಜೀವಿ) ಬೆಂಗಳೂರು ರವರ ಆದೇಶದಂತೆ, ಆನೆ ಗಣತಿಗೆ ಸ್ವಯಂ ಸೇವಕರು, ಸಂಪನ್ಮೂಲ ವ್ಯಕ್ತಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ನಗರದ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಕಛೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
Leave a Comment