ಭಟ್ಕಳ:
ಮುರ್ಡೇಶ್ವರದ ಆರ್.ಎನ್.ಎಸ್. ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 94 ಫಲಿತಾಂಶವನ್ನು ಗಳಿಸುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಪರೀಕ್ಷೆಗೆ ಹಾಜರಾದ 47 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ಶೇ.90 ಕ್ಕಿಂತಲೂ ಅಧಿಕ ಅಂಕ ಗಳಿಸಿದ್ದಾರೆ. 5 ವಿದ್ಯಾರ್ಥಿಗಳು ಉನ್ನತ ಶ್ರೇಣಿ (ಡಿಸ್ಟಿಂಗಶನ್), 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಅಪೇಕ್ಷಾ ಮನೋಜ ಮುರುಡೇಶ್ವರ ಶೇ.99.36 ಅಂಕಗಳೊಂದಿಗೆ ಪ್ರಥಮ, ಪೂಜಾ ನಾರಾಯಣ ಮೊಗೇರ್ ಶೇ. 98.24 ದ್ವಿತೀಯ, ಅರುಣಾ ಗಜಾನನ ಶೆಟ್ಟಿ ಶೇ.97.76 ತೃತೀಯ ಸ್ಥಾನ ಪಡೆದಿದ್ದಾರೆ. ಕಾವ್ಯ ಶೇ.97.60, ಸಂಗಮ ಶೇ.97.40, ಸ್ಮøತಿ ಶೇ.97.28, ಅರ್ಪಿತಾ ಶೇ.96.80, ಸುಚೇತಾ ಶೇ. 96, ಸಮೃದ್ಧಿ ಶೇ.94.88, ಚಿಂತನಾ ಶೇ.94.56, ಪ್ರತೀಮಾ ಶೇ.94.24, ಶರಧಿ ಶೇ.94.8, ನಮೃತಾ ಶೇ.93.6, ಪ್ರತೀಕ್ ಶೇ.92.96, ಪ್ರಜ್ವಲ್ ಶೇ.92.48, ನಿತೀಶ ಶೇ.92.16, ಶ್ರೇಯಸ್ ಶೇ.90.88, ಲಾಂಛನಾ ಶೇ.90.56 ಅಂಕಗಳನ್ನು ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಆರ್.ಎನ್. ಶೆಟ್ಟಿ, ನಿರ್ದೇಶಕ ಎಮ್.ವಿ. ಹೆಗಡೆ, ಪ್ರಾಂಶುಪಾಲ ಡಾ. ಸುರೇಶ ಶೆಟ್ಟಿ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
Leave a Comment