ಭಟ್ಕಳ:
ನಗರದ ದಂಡಿನ ದುರ್ಗಾದೇವಿ ದೇವಸ್ಥಾನದ ಹೊರ ಗೋಡೆಗೆ ಯಾರೋ ಕಿಡಿಗೇಡಿಗಳು ರಕ್ತವನ್ನು ಹಚ್ಚಿ ಅಪವಿತ್ರಗೊಳಿಸಲಾಗಿದ್ದು ಸಂಜೆಯ ವೇಳೆಗೆ ಕಂಡು ಬಂದಿದ್ದು ಸುದ್ದಿ ತಿಳಿದ ತಕ್ಷಣ ಅಕ್ಕಪಕ್ಕದವರು ಗುಂಪು ಕಟ್ಟಿ ಚರ್ಚಿಸುತ್ತಿರುವುದು ಕಂಡು ಬಂದಿದೆ.
ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಗೋಡೆಗೆ ಹಚ್ಚಿದ ರಕ್ತದ ಕಲೆಯ ಮಾದರಿಯನ್ನು ಸಂಗ್ರಹಿಸಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ.
ದೇವಸ್ಥಾನದ ಗೋಡೆಗೆ ರಕ್ತದ ಕಲೆಯನ್ನು ಬಳಿಯುವ ಮೂಲಕ ಯಾರೋ ಕಿಡಿಗೇಡಿಗಳು ಭಟ್ಕಳದಲ್ಲಿ ಕೋಮು ದ್ವೇಷವನ್ನು ಹರಡುವ ಸಾಹಸಕ್ಕೆ ಕೈ ಹಾಕಿರಬಹುದೆಂದು ಸಂಶಯಿಸಲಾಗಿದ್ದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಅಣ್ಣಪ್ಪ ಮೊಗೇರ, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ರಕ್ತದ ಕಲೆಯನ್ನು ಯಾಕಾಗಿ ಹಚ್ಚಲಾಗಿದೆ, ಯಾವ ಸಮಯದಲ್ಲಿ ಹಚ್ಚಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದು ತನಿಖೆಯಿಂದ ಎಲ್ಲವೂ ತಿಳಿದು ಬರಬೇಕಿದೆ.
Leave a Comment